Wednesday 1 September 2021

ಏನು ಗತಿ ಎನಗಿನ್ನು ಏನು ಗತಿಯೋ ನೀನು ಅನುಕೂಲವಾಹದನಕ ಸಿರಿ ಕೃಷ್ಣ ankita vasudeva vittala

 ..

kruti by ವ್ಯಾಸತತ್ವಜ್ಞ ತೀರ್ಥರು vyasatatwajna teertharu 


ಏನು ಗತಿ ಎನಗಿನ್ನು ಏನು ಗತಿಯೋ ನೀನು

ಅನುಕೂಲವಾಹದನಕ ಸಿರಿ ಕೃಷ್ಣ ಪ


ಕರಣಗಳು ಕಾಯ ಮೊದಲಾದ ಬದುಕುಗಳೆಲ್ಲ

ಸ್ಥಿರತರಗಳಲ್ಲೆಂದು ತೋರಿಸಲು

ಪರಮ ಭಕುತಿಯು ಪುಟ್ಟಿ ಮೊದಲೆ ನಾ ನಿನ್ನ ಪದ

ಮರೆದು ಬಿಡುವೆನು ತಡಿಯದೇ ಕರುಣಿ 1


ಹೀಗೆ ತೋರದೆ ಪೋದರೆ ಎನಗೆ ಹಂಬಲವು

ಆಗುವುದು ಸತ್ಯಲೋಕಗಳ ತನಕ

ಭೋಗಗಳು ಕೊಟ್ಟರೆ ಮರೆವೆ ಅದರಿಂದ ನಾ

ಕೂಗುವೆನು ಕೊಡದಿದ್ದರೆ 2

ಪಾಮರನ ಮಾಡಲೆನ್ನನು ತಿಳಿಯದಲೇವೆ

ಸೀಮೆ ಇಲ್ಲದ ಪಾಪ ಮಾಡುವೆನೊ

ಪ್ರೇಮದಲಿ ಪಾಂಡಿತ್ಯ ನೀಡಿದರೆ ಭಕುತ ಜನ

ಸ್ತೋಮ ನಿಂದಿಸುವೆನಯ್ಯಾ 3


ಧನದಿಂದ ಹೀನನ್ನ ಮಾಡೆ ಲೋಕದಲಿನ್ನು

ಜನರು ಕೊಡುವುದು ಎಲ್ಲ ಎನಗೆ ಕೊಡಲೆಂಬೆ

ಧನವು ನೀ ಕೊಡಲು ಬಲು ಮದದಿಂದ ಕೆಟ್ಟು ಸ-

ಜ್ಜನಕೆ ಕಾಸೊಂದು ಕೊಡಿನೊ 4


ಏಸು ಪರಿಯಲಿ ಪೇಳಿದರು ಕೇಳೆನ್ನ ನಿಜ

ವಾಸನಿಯು ತನಗೆ ತಾನಿಟ್ಟಾಹದೈ

ವಾಸುದೇವವಿಠಲ ನೀ ಎನ್ನಯ ಮನದಲ್ಲಿ

ವಾಸವನು ಮಾಡಿ ಬೋದÉೈಸದನಕೆÀ5

***


No comments:

Post a Comment