Showing posts with label ಕಂಡೆ ಕರುಣಿಗಳೊಳಗೆ gopala vittala vyasa tatwajna teertha stutih. Show all posts
Showing posts with label ಕಂಡೆ ಕರುಣಿಗಳೊಳಗೆ gopala vittala vyasa tatwajna teertha stutih. Show all posts

Friday 27 December 2019

ಕಂಡೆ ಕರುಣಿಗಳೊಳಗೆ ankita gopala vittala vyasa tatwajna teertha stutih

ಶ್ರೀ ಗೋಪಾಲದಾಸರು on vyasa tatwajna teertharu (earlier name venkataraacharya)

ರಾಗ : ಕಲ್ಯಾಣಿ ತಾಳ : ಝ೦ಪೆ

ಕಂಡೆ ಕರುಣಿಗಳೊಳಗೆ ಅಗ್ರೇಸರರಾದ ।
ಪಂಡಿತ ರಾಮಾರ್ಯರ ।। ಪಲ್ಲವಿ ।।

ಕೊಂಡಾಡಲಿವರನು ಎಷ್ಟರವ ನಾನು ।
ಕಂಡೆ ಯನ್ನ ಮನಕುತ್ಸಾಹವಾಗಿ ।। ಆ. ಪ ।।

ಸಿರಿ ವೆಂಕಟ ನರಸಿಂಹಾಚಾರ್ಯರೆಂಬ ।
ವಾರ ಕ್ಷೀರ ಶರಧಿಯಲ್ಲಿ ।
ಪರಮ ಶೋಭಿತ ಚಂದ್ರನಂತೆ ಉದ್ಭವಿಸಿ ।ಸುಜ ।
ನರಿಗೆ ಆಹ್ಲಾದನಾಗಿ ।।
ವರ ವೇದ ಶಾಸ್ತ್ರಗಳನೋದಿಸಿ ಶಿಷ್ಯ ಜನಕೆ ।
ವರದೊರೆದು ಉಪದೇಶಿಸಿ ।
ಮರಿಯದೆ ಎಂದು ಕ್ಷಣ ಬಿಡದೆ ಹರಿಪರರಾಗಿ ।
ಇರುವ ಮಹಾ ಸುಗುಣರನ್ನು ಇಂದು ।। ಚರಣ ।।
********

ರಾಗ : ಕಲ್ಯಾಣಿ ತಾಳ : ಝ೦ಪೆ
ಕಂಡೆ ಕರುಣಿಗಳೊಳಗೆ 
ಅಗ್ರೇಸರರಾದ ।
ಪಂಡಿತ ರಾಮಾರ್ಯರ ।। ಪಲ್ಲವಿ ।।
ಕೊಂಡಾಡಲಿವರನು 
ಎಷ್ಟರವ ನಾನು ।
ಕಂಡೆ ಯನ್ನ ಮನ-
ಕುತ್ಸಾಹವಾಗಿ ।। ಆ. ಪ ।।
ಸಿರಿ ವೆಂಕಟ ನರಸಿಂಹಾಚಾರ್ಯರೆಂಬ ।
ವಾರ ಕ್ಷೀರ ಶರಧಿಯಲ್ಲಿ ।
ಪರಮ ಶೋಭಿತ ಚಂದ್ರನಂತೆ 
ಉದ್ಭವಿಸಿ ।ಸುಜ ।
ನರಿಗೆ ಆಹ್ಲಾದನಾಗಿ ।।
ವರ ವೇದ ಶಾಸ್ತ್ರಗಳನೋದಿಸಿ 
ಶಿಷ್ಯ ಜನಕೆ ।
ವರದೊರೆದು ಉಪದೇಶಿಸಿ ।
ಮರಿಯದೆ ಎಂದು ಕ್ಷಣ ಬಿಡದೆ 
ಹರಿಪರರಾಗಿ ।
ಇರುವ ಮಹಾ ಸುಗುಣರನ್ನು 
ಇಂದು ।। ಚರಣ ।।
**
to check whether following belongs to the same song
ಚರಣವೆಂದರೆ ಇವರ 
ಚರಣವೇ ಸುಖಕರ ।
ಹರಿಯಾತ್ರ ಪರವಾಗಿ ಇನ್ನು ।
ಕರಗಳೆಂದರೆ ಇವರ 
ಕರವೇ ಮಂಗಳಕರ ।
ಹರಿ ಪೂಜೆಯಲ್ಲಿ ಸತತ ।।
ಕರಣಗಳು ಮುಂತಾದ 
ಸರ್ವೇ೦ದ್ರಿಯಗಳಿಂದ ।
ಹರಿಯನ್ನೇ ವಿಷಯಕರಿಸಿ ।
ಇರುವ ಅನುಭೋಗವು 
ಇರತೋರಿ ತಮ್ಮ ನಿಜ ।
ಕುರಹ ನೋಡೆಂದು ಚ-
ಪ್ಪರಿಸಿ ಬಿಗದಪ್ಪಿದುದ ।। ಚರಣ ।।
ಏಸು ಜನ್ಮದ ಸುಕೃತ 
ಎನಗಿವರ ಕರುಣ । ಉಪ ।
ದೇಶ ಸ್ವಪನದಿ ಆದುದು ।
ಕೇಶವನೇ ಈ ರೂಪದಿ 
ಹೇಳಿದನ್ಹ್ಯಾಗೋ ।
ಲೇಶನಾ ಅಂದವನು ಅಲ್ಲ ।।
ದಾಸ ಗುರು ವಿಜಯರಾಯರೇ 
ಇಲ್ಲಿ ನಿಂದೆನ್ನ ।
ಪೋಷಿಸುವ ಬಗೆಯು ಹೇಗೋ ।
ವಾಸುದೇವ ಹಯಾಸ್ಯ 
ಗೋಪಾಲವಿಠಲನ ।
ದಾಸರೊಳುಗುತ್ತಮರ 
ದಯಕೆ ಸರಿಯುಂಟೆ ।। ಚರಣ ।।
*****