Showing posts with label ನೋಡಬನ್ನಿರಿ ಕಾರ್ಪರೇಶನ ಪಾಡಿರೈ ಸರ್ವೇಶನಾ karpara narahari. Show all posts
Showing posts with label ನೋಡಬನ್ನಿರಿ ಕಾರ್ಪರೇಶನ ಪಾಡಿರೈ ಸರ್ವೇಶನಾ karpara narahari. Show all posts

Monday 2 August 2021

ನೋಡಬನ್ನಿರಿ ಕಾರ್ಪರೇಶನ ಪಾಡಿರೈ ಸರ್ವೇಶನಾ ankita karpara narahari

ನೋಡಬನ್ನಿರಿ ಕಾರ್ಪರೇಶನ ಪಾಡಿರೈ ಸರ್ವೇಶನಾ

ರೂಢಿಯೊಳು ಶೇಷಾದ್ರಿನಿಲಯನ ಕೂಡಿಕೊಂಡಿಲ್ಲಿರುವನ ಪ


ಚಿಪ್ಪಗಿರಿ ದಾಸಾರ್ಯರೀತರು ಪಿಪ್ಪಲವ ಕಂಡಾಗಲೇ

ಕಾರ್ಪರಾರಣ್ಯೆಂಬ ಪದದಿ ಸಂಕ್ಷಿಪ್ತ ಮಹಿಮೆಯ ಪೇಳ್ದರು 1

ಅಪರದಿಗ್ಭಾಗದಲಿ ನೋಡಲು ಸಪತ ಋಷಿಗಳ ಸ್ಥಾನವು

ತ್ರಿಪಥಗಾಮಿನಿ ವ್ಯಕ್ತಳಾದಳು ತಪಕೆ ವಿಶ್ವಾಮಿತ್ರರ 2

ಯತ್ರಶ್ವೇತ ಶೃಂಗ ಕೃಷ್ಣಾಚೋತ್ತರ ವಾಹಿನಿಯೊಳು

ತತ್ತದಾನ ಸ್ನಾನ ಕಾಸಿಗೆ ಉತ್ತಮವು ಫಲವೀಯಲು 3

ಚಾರುಕೃಷ್ಣಾತೀರವಿದರೊಳು ಕಾರ್ಪರಾಖ್ಯ ಮುನೀಂದ್ರನಾ

ಘೋರತಪ ಕೊಲಿದರಳೆ ಮರದಾಗಾರನೆನಿಸಿದ ಧೀರನ 4

ನೀರಜಾಸನ ಮುಖ್ಯ ಸುರ ಪರಿಹಾರ ಸೇವಿತ ಚರಣನ

ಸೇರಿದವರಘ ದೂರ ಮಾಡುವ ಘೋರನರಹರಿ ರೂಪನ 5

ಇಂತು ಅಶ್ವತ್ಥಾಂತರದಿ ಸಿರಿಕಾಂತನರಿಯನೆ ವಿಪ್ರರೊಳ್

ಶಾಂತ ನಾರಪ್ಪಯ್ಯನೆಂಬ ಮಹಾಂತರಿಲ್ಲಿರುತಿಪ್ಪರು 6

ದೊಡ್ಡವರ ಗುರುತರಿಯದಿವರನು ದಡ್ಡರೆನ್ನುತ ಭ್ರಾತ್ರರು

ದೊಡ್ಡ ಕೃಷ್ಣಾನದಿಯೊಳಿವರನು ಕಟ್ಟಿ ಹಾಕಲು ಕೋಪದಿ 7

ಕಡಲಶಯನನ ಕರುಣದಿಂದಲಿ ದಡಕೆ ಸೇರಿದನಂತರ

ದೃಢ ವಿರಾಗದಿ ವೆಂಕಟಾದ್ರಿಗೆ ನಡೆದರಾಗಲೆ ಹರುಷದಿ 8

ವಿಠ್ಠಲನ ಶುಭ ಚರಣ ಪಂಕಜ ಷಟ್ವದಾಯಿತ ಚಿತ್ತರು

ಕೃಷ್ಣನಿರುತಿಹ ಬೆಟ್ಟದಡಿಯನು ಮುಟ್ಟಿಮಲಗಲು ಸ್ವಪ್ನದಿ9

ಇಲ್ಲಿ ದರ್ಶನವಿಲ್ಲ ನೀವಿರುವಲ್ಲಿ ಪುಣ್ಯಸ್ಥಾನವು

ದುರ್ಲಭವು ಪಾಪಾತ್ಮರಿಗೆ ನೀನಲ್ಲಿ

ಪೋಗಿರೋ ಭೂಸುರ 10

ಧೇನು ರೂಪದಿ ಬರುವೆ ಕಾರ್ಪರ ಕಾನನದ ಅಶ್ವತ್ಥದಿ

ಕಾಣುವುದು ಕ್ಷೀರಾಭಿಷೇಚನ ಧ್ಯಾನಿಸೆನ್ನನು ದ್ವಿಜವರ 11

ಇಂತುಸ್ವಪ್ನದಿ ಸೂಚಿಸಿದ ವೃತ್ತಾಂತವನು ಸಂಚಿಂತಿಸಿ

ಕಂತು ಜನಕನ ಇಚ್ಛೆಯಿಂದಲೆ ಸಂತಸದಿ ಗಿರಿಗೊಂದಿಸಿ 12

ಮುಂದೆ ನಡೆದರು ಹಿಂದೆ ಗೆಜ್ಜೆಗಳಿಂದ ಬರುತಿಹ ಗೋಗಳ

ದ್ವಂದ್ವ ರೂಪವ ನೋಡದಲೆ

ಗೋವಿಂದನಂಘ್ರಿಯ ಸ್ಮರಿಸುತ 13

ಬರುತ ಬರುತಲೆ ತಿರುಗಿ ನೋಡಲು

ಕುರುಕಿ ಹಳ್ಳಿಯ ಗ್ರಾಮದಿ

ವರಶಿಲೆಯ ಮೇಲ್ಗರಿಯೆ ಪಾಲನು

ತಿರುಮಲೇಶನ ಕಂಡರು 14

ತರುವರಾಶ್ವತ್ಥದಲಿ ಸಲೆ ಪಾಲ್ಗರಿಯೆ

ಗುರುತನು ಕಾಣುತ

ಗಿರಿಯ ವೆಂಕಟರಮಣ ತಾನಿಲ್ಲಿರಲು

ಬಂದನು ಎನ್ನುತ 15

ನಿರುತ ಪೂಜೆಯ ಮಾಡುತಲೆ

ಮುನಿವರನು ಸುಖದಿಂದಿರುತಿರೆ

ತುರುಗಳನು ಶ್ರೀಹರಿಯ ಸೇವೆಗೆ ಶರಣು

ಜನರೊಪ್ಪಿಸು ತಿರೆ 16

ಬಂದರಲ್ಲಿಗೆ ತಮ್ಮ ಗ್ರಾಮದ ಬಂಧು ಬಾಲಕರೆಲ್ಲರು

ಕಂದರಿಗೆ ಪೇಳಿದರು ಗೋಗಳ ವೃಂದ

ಕಾಯುವದೆನುತಲಿ 17


ಚಾರು ಶಿಲೆಯೊಳಗೊಂದುದಿನ ಅಂಗಾರದಲಿ ಪ್ರಾಣೇಶನ

ಮೂರುತಿಯ ಬರೆದೀತ ಭಯ

ಪರಿಹಾರನುನಿಮಗೆಂದರು 18


ಹಟ್ಟಿ ಹನುಮನ ಪಾದ ಪದುಮವ

ನಿಷ್ಠೆಯಿಂದಲಿ ಸೇವಿಸೆ

ಇಷ್ಟಗಳು ದೊರೆಯುವವು ಬುದ್ಧ್ಯಾದ್ಯಷ್ಟ

ಸಿದ್ಧಿಗಳಾಗ್ವವು 19

ಮೂಲ ಪುರುಷರು ಅವರೆ

ನಾರಪ್ಪಯ್ಯರೆಂಬ ಮಹಾತ್ಮರು

ಕಾಲ ಕಾಲಗಳಲ್ಲಿ ಸ್ಮರಿಸಲು ಪಾಲಿಸುವ

ಹರಿ ಸಂತತ 20

ವರ ವಿಜಾಪುರದರಸು ತನ್ನಯ

ಧರಣಿಯನು ಸಂಚರಿಸುತ

ಮೆರೆವ ಕರಿತುರಗಾದಿಸೈನ್ಯದಿ ಬರಲು

ಚೆನ್ನೂರ ಗ್ರಾಮದಿ 21

ಧಾರುಣೀಶನ ಸೈನ್ಯದಲಿ ಭಯ

ತೋರಿತಂದಿನ ರಾತ್ರಿಯೋಳ್

ಸಾರಿದರು ಜನಘೋರ ಭಯಹರ ನಾರಸಿಂಹನ

ಮಹಿಮೆಯಾ 22

ಎರಡನೆಯ ದಿನ ರಾತ್ರಿಯೊಳು ಮಲಗಿರಲು

ಭೂಪನ ಸ್ಪಪ್ನದಿ

ಅರುಹಿದನು ವಟುರೂಪದಲಿ ನರಹರಿಯು

ತರುವನು ತೋರಿಸಿ 23


ಕಟ್ಟಿಸೆಲೊ ಭೂಪತಿಯೆ ಮಂದಿರ ಕೃಷ್ಣವೇಣಿಯ ಗರ್ಭದಿ

ಪುಟ್ಟುವನು ವರಕುವರ ನಿನಗತಿ

ಶ್ರೇಷ್ಠನೆನ್ನಯ ಕರುಣದಿ 24

ಸುಪ್ರಭಾತದಲೆದ್ದು ನೃಪತಿಯು ಸ್ವಪ್ನಸೂಚಿತ ಸ್ಥಾನವ

ಕ್ಷಿಪ್ರ ನೋಡುವೆನೆನುತ ಸೈನ್ಯದಿ ಕಾರ್ಪರಕೆ ಬಂದಿಳಿದನು25

ಆನೆಗಳು ಕಟ್ಟಿರುವ ಶಿಲೆಗಳು ಕಾಣಿಸುವ ವೀಗಾದರು

ಏನು ಧನ್ಯನು ನೃಪನು ನರಪಂಚಾನ

ನನಸೇವಿಸಿದನು 26

ಬಂಧುರದ ಕಟ್ಟೆಯನು ಕಟ್ಟಿಸಿ

ಮಂದಿರವಮೇಲ್ ನಿರ್ಮಿಸಿ

ಇಂದಿರೇಶನ ಪದಕೆ ಭೂಸಂಬಂಧ ವೃತ್ತಿಯನೊಪ್ಪಿಸಿ27

ಹಿಂದೆ ನೋಡಲು ಚಂದ್ರಶೇಖರ ನಂದಿಪತಿ ಮಂದಿರಗಳು

ವಂದೇ ವತ್ಸರದೊಳಗೆ ಶಿಲ್ಪಿಗಳಿಂದ ಕಟ್ಟಿದ ಶಿಲೆಗಳು 28

ಆ ಮಹಾ ವೃಕ್ಷದಲಿ ಸಾಲಗ್ರಾಮ

ವೃಷ್ಟಿಯ ಮಹಿಮೆಯ

ಪ್ರೇಮದಿಂದಲಿ ಕೇಳುವವರಿಗೆ

ಕಾಮಿತಾರ್ಥವನೀವುದು 29

ಎರಡು ಶತವತ್ಸರದೊಳಗೆ ಬಂದಿರುವ

ಮಾಧವ ಮಾಸ ದೊ

ಳಿರುವ ದ್ವಾದಶಿ ದಿನದ ತರಣಿಯು ಶರಧಿ

ಸೇರುವ ಸಮಯದಿ 30

ಅರಿದರಾದ್ಯಾಯುಧಗಳನು ತಾ ಧರಿಸಿ

ಷೋಡಶ ಕರಗಳಿಂ

ಪರಮ ಸುಂದರ ನರಹರಿಯ ಮೂರುತಿಯು

ಹೊರಟನು ವೃಕ್ಷದಿ31

ಸಕಲ ಯಾತ್ರೆಯ ಫಲವು ಲಭಿಸುವದಖಿಲ

ತೀರ್ಥ ಸ್ನಾನದ

ಭಕುತಿಯಿಂದಶ್ವತ್ಥ ವೃಕ್ಷದಿ ವ್ಯಕತ

ನರಹರಿ ದರ್ಶನ 32

ದಕ್ಷಿಣಾಯನ ಪರ್ವದಲಿ ಈ ವೃಕ್ಷದೆಡೆಯಲಿ ಸ್ನಾನವು

ಮೋಕ್ಷ ಮಾರ್ಗಕೆ ಸಾಧನವು ಪ್ರದಕ್ಷಿಣಾದಿಕಮೆಲ್ಲವು33

ಮಂದಿರವ ಕಾಣುತಲೆ ಶ್ರೀಗೋವಿಂದ ಗೋವಿಂದೆನುತಲಿ

ಬಂಧು ವರ್ಗ ಸಮೇತ ಭಕುತರ ವೃಂದ ಬರುವದು ನೋಡಿರೈ34

ಪಾಲಿನಭಿಷೇಕದಿ ಅರ್ಚನ ಪಾಲಕಿಯ ಸೇವಾವಧಿ

ವಾಲಗವ ಕೈಕೊಳುತ ಭಕುತರ ಪಾಲಿಸುವ ನರಸಿಂಹನ 35

ವಾರವಾರಕೆ ಭಕ್ತಜನ ಪರಿವಾರ ಸೇವೆಯಕೊಳ್ಳುತ

ಘೋರತರ ಸಂಸಾರ ಭಯಪರಿಹಾರ ಮಾಡುವ ದೇವನ 36

ತಪ್ಪದಲೆ ಪ್ರತಿವರ್ಷ ದ್ವಿಜ ಸಂತರ್ಪಣಾದಿಗಳಿಂದಲಿ

ಕೊಪ್ಪರದಿ ನವರಾತ್ರ ಮೊದಲಾದುತ್ಸವಾದಿಗಳಾಗ್ವವು 37

ಹಿಂದೆ ಚಾತುರ್ಮಾಸ್ಯ ಕಾಲವು ಬಂದಿರಲು ವಿಭುದೇಂದ್ರರು

ಬಂದರಿಲ್ಲಿಗೆ ಶಿಷ್ಯರಾದ ಯತೀಂದ್ರ ನಾರಾಯಣಾರ್ಯರು38

ಆ ಸಮಯದಿ ರಘುನಾಥ ತೀರ್ಥ ಯತೀಶರಿಲ್ಲಿಗೆ ಬಂದರು

ತೋಷದಲಿ ವಿಭುದೇಂದ್ರ ತೀರ್ಥಮುನೀಶರವರಿಗೆ ಪೇಳ್ದರು39

ವೃಕ್ಷದಲಿ ಸನಿÀ್ನಹಿತ ನರಹರಿಯಕ್ಷನೆದುರಿಗೆ ನಮ್ಮಯ

ಶಿಷ್ಯರೋದುವ ಗ್ರಂಥದರ್ಥ ಪರೀಕ್ಷೆ ಮಾಡಿರಿ ಎಂದರು40

ಮೌನಿರಘುನಾಥಖ್ಯರವರನು ಏನು ಓದುತಿರೆನ್ನಲು

ಆನುಪೂರ್ವಿ ಸುಧಾಖ್ಯ ಗ್ರಂಥಾರ್ಥಾನುವಾದವ ಮಾಡಲು41

ಮೇದಿನಿಯಲಿ ವಾದಿಜಯ ಸಂಪಾದಿಸಿರಿ ನೀವೆಂದರೂ

ಸಾದರದಿ ನಿಮಗೆಲ್ಲ ಜನ ಶ್ರೀಪಾದರಾಜರು ಎನ್ನಲಿ42

ಹಿಂದೆ ಭೂಸೂರನೋರ್ವ ಸತಿಸಹ ಬಂದು

ಸೇವೆಯ ಮಾಡಲು

ಒಂದು ವತ್ಸರದೊಳಗೆ ಸತ್ಯಾನಂದ ಯತಿಗಳ ಜನನವು43

ಸತ್ಯಧರ್ಮರು ಬಂದರೀ ಸುಕ್ಷೇತ್ರದರ್ಶನ ಮಾಡಲು

ಮುತ್ತಿನ್ಹಾರವ ಪದಕ ಸಹಿತಾಗಿತ್ತರೀ ನರಸಿಂಹಗೆ 44

ಇದ್ದರಿಲ್ಲಿ e್ಞÁನವೃದ್ಧ ಜನಾರ್ದನಾಭಿದ ಒಡೆಯರು

ಶುದ್ಧ ಮನದಲಿ ನರಹರಿಯ ಪದಪದ್ಮ ಸೇವೆಯ ಮಾಡುತ45

ಬಿಡದೆ ತಪವಾಚರಿಸಿ ಕಾರ್ಪರದೊಡೆಯನನುಪಮ ಕರುಣವ

ಪಡೆದರಿವರನು ಸ್ಮರಿಸಿದವರಿಗೆ ಕೊಡುವ ಶ್ರೀಹರಿ ಸುಖವನು

ನಿತ್ಯದಲಿ ಪರಿಶುದ್ಧ ಮಧುಕರ ವೃತ್ತಿಯಿಂ ತಂದನ್ನವ

ಎತ್ತಿ ವೃಕ್ಷಕೆ ಕಟ್ಟುವರು ಇದು ಬುತ್ತಿ ನಾಳೆಗೆ ಎನ್ನುತ47

ನಿನ್ನೆ ವೃಕ್ಷದಿ ತಂದು ಕಟ್ಟಿದ ಅನ್ನನದಿಯೊಳಗದ್ದುತ

ಪನ್ನಗಾರಿ ಧ್ವಜನಿಗರ್ಪಿಸಿ ಉಣ್ಣುತಿಹರಾನಂದದಿ48

ಮಂದಮತಿ ಭೂದೇವನೊಬ್ಬನು ನಿಂದೆ ಮಾಡಿದನಿವರನು

ತಂದು ಕಟ್ಟಿದ ಅನ್ನ ತಂಗಳೆಂದು ತಿಳಿಯದೆ ಉಂಬರು 49

ನಿಂದೆ ಮಾಡಿದ ವಿಪ್ರನನು ಕರೆಸೆಂದರರ್ಚನ ಸಮಯದಿ

ತಂದು ವೃಕ್ಷದಿ ಕಟ್ಟಿದನ್ನವ ತಂದು ಕೆಳಗಿಡಿರೆಂದರು 50

ಒಡೆಯರಾಜ್ಞೆಯ ಮಿರದಲೆ ತಂದಿಡಲು

ಪೋಗಲು ವಿಪ್ರನು

ಸುಡುವು ದನ್ನವು ಎಂದೆನುತ ತಂದಿಡಲು

ಕೆಳಗಿಂತೆಂದರು

****