Showing posts with label ಎನ್ನ ಪಾಲಿಸೋ ಗುರು ವಿಷ್ಣುತೀರ್ಥ ಘನ್ನ ಮಹಿಮ ಜಯತೀರ್ಥ ಪ್ರೀತಿಪಾತ್ರ others vishnu teertha stutih. Show all posts
Showing posts with label ಎನ್ನ ಪಾಲಿಸೋ ಗುರು ವಿಷ್ಣುತೀರ್ಥ ಘನ್ನ ಮಹಿಮ ಜಯತೀರ್ಥ ಪ್ರೀತಿಪಾತ್ರ others vishnu teertha stutih. Show all posts

Thursday 30 September 2021

ಎನ್ನ ಪಾಲಿಸೋ ಗುರು ವಿಷ್ಣುತೀರ್ಥ ಘನ್ನ ಮಹಿಮ ಜಯತೀರ್ಥ ಪ್ರೀತಿಪಾತ್ರ ankita others vishnu teertha stutih

 ಮಾದನೂರ ವಿಷ್ಣುತೀರ್ಥ ಗುರುಭ್ಯೋ ನಮ:

ಪುತ್ರರತ್ನಗಳ ರಕ್ಷಿಸಿದೆ (ಬ್ರಹ್ಮಚರ್ಯ ಮತ್ತು ಗ್ರಹಸ್ಥಾಶ್ರಮ) 

ಅಸಿಪತ್ರ ವೃತವನಾಚರಿಸಿದೆ (ವಾನಪ್ರಸ್ಥಾಶ್ರಮ) 

ಸತ್ಪಾತ್ರರಿಗೆ ಪತ್ರಗಳನೆ ಬರೆದು (ಸಂನ್ಯಾಸಾಶ್ರಮ) 

ತಾಪತ್ರಯಗಳೆದುರಿಸುವ ದಾರಿ ತೋರಿದೆ

ಬದರೀಶ ಕೃಪಾಪಾತ್ರ ವಿಷ್ಣುತೀರ್ಥರೆ 

ಮುದ್ದು ಶ್ರೀ ರಾಮನ ಕೃಪೆಗೆ ಪಾತ್ರನೆನಿಸೆನ್ನ ||

***


ಎನ್ನ ಪಾಲಿಸೋ ಗುರು ವಿಷ್ಣುತೀರ್ಥ    

ಘನ್ನ ಮಹಿಮ ಜಯತೀರ್ಥ ಪ್ರೀತಿಪಾತ್ರ


ಸಿದ್ಧಪುರಿಯಲಿ ಜನಿಸಿ ಜಯತೀರ್ಥನೆನಿಸಿ ರಾಯರ ಕಾರುಣ್ಯದಿ ಗುರುವನೆ ಪಡೆದೆ | ಬಿಂಬ ಪೂಜೆಯ ಮಾಡೆ ಹರಿಯೊಲಿದು ಗುರುಸುತನ ಪೀಡೆಕಳೆದೆ ||೧||


ಭಾರತೀಶನ ತೋರಿದೆ ಶಿಷ್ಯರಿಗೆ ನಂದಿವಾಹನನ ತೋರಿಸಿದೆಯೋ ನೀನವರಿಗೆ | ಕಲಿರೂಪವ ನೋಡಬಯಸಲವರಿಗೆ ಕಲಿಯ ಸ್ವರೂಪವ ತೋರಿಸಿದೆ  ||೨||


ಸುಧೆಯ ಸ್ವಾದವ ನೂರೆಂಟು ಬಾರಿ ಭಾಗವತರಿಗುಣಿಸಿದೆ ಮೋದಪುರೀಶ   | ಸತ್ಯವರ ಕುವರನೆನಿಸಿ ವರದ ವಿಷ್ಣುತೀರ್ಥನೆಂದೆನಿಸಿದೆಯೋ ಲೋಕದಿ ||೩||


ಚತುರಾಶ್ರಮಗಳ ಪಾಲಿಸಿದೆ ಚತುರ್ವಿಧ ಪುರುಷಾರ್ಥಗಳ ಕರುಣಿಸುವೆಯೋ | ಕುಶನದಿಯ ತೀರದಿ ನೆಲೆಸಿ  ಚಿಂತಿಪರ ಚಿಂತಾಮಣಿಯೆಂದೆನಿದೆಯೊ ಗುರುವೆ||೪||


ಸಾರೋದ್ಧಾರಗಳ ಜಗಕೆ ನೀನಿತ್ತೆ ಆಧ್ಯಾತ್ಮ ಸಾಧಕರಿಗೆ ರಸರಂಜನಿಯನಿತ್ತೆ | ಮುದ್ದು ಶ್ರೀ ರಾಮನ  ಕಾರುಣ್ಯದಿ  ಅವಧೂತ ಶಿರೋಮಣಿ ಎಂದೆನಿಸಿ ಬದರೀಶನ ಧ್ಯಾನದೊಳಿಪ್ಪೆ ||೫||

***