Showing posts with label ಮುದದಿ ನಕ್ರನ ಕೊಂದು ಸಲಹಿದ ಸದುಭಕುತರ ಬಂಧು kadarundalagihanumaiah. Show all posts
Showing posts with label ಮುದದಿ ನಕ್ರನ ಕೊಂದು ಸಲಹಿದ ಸದುಭಕುತರ ಬಂಧು kadarundalagihanumaiah. Show all posts

Tuesday 3 August 2021

ಮುದದಿ ನಕ್ರನ ಕೊಂದು ಸಲಹಿದ ಸದುಭಕುತರ ಬಂಧು ankita kadarundalagihanumaiah

..

(missing ?)

ಮುದದಿ ನಕ್ರನ ಕೊಂದು ಸಲಹಿದ

ಸದುಭಕುತರ ಬಂಧು 


ನಾರಿಯು ತನ್ನ ಕರೆದಾ ಮಾತ್ರದಿ

ಸೀರೆಯ ಮಳೆಗರೆದಾ

ಕ್ರೂರ ಖಳರ ಮುರಿದಾ ಪಾಂಡವ-

ರಾರಣ್ಯದಿ ಪೊರೆದಾ

ನಾರಗೆ ಅಜಮಿಳ ನಾರಾಯಣನೆನೆ

ಪಾರುಗಾಣಿಸಿದಪಾರಗುಣನಿಧಿಯಾ 


ಒಂದು ಬಾರಿಗೆ ಶ್ರೀಶನ ನೆನೆದರೆ

ಬಂದ ದುರಿತ ನಾಶಾ

ಬೆಂದದ್ದು ಬಹುಪಾಶಾ ಅವಗಿ-

ನ್ನೆಂದಿಗಿಲ್ಲವೊ ಕ್ಲೇಶಾ

ತಂದೆ ಕದರಂಡಲಗಿ ಹನುಮಯ್ಯನೊಡೆಯ ಗೋ-

ವಿಂದನ ನೆನೆದವರೆಂದಿಗು ಧನ್ಯರು 3

****