Showing posts with label ಮರೆತೆಯೇನೋ ರಂಗ ಮಂಗಳಾಂಗ ಕೋಲು ಕೈಯಲಿ purandara vittala MARETEYENO RANGA MANGALAANGA KOLU KAIYALLI. Show all posts
Showing posts with label ಮರೆತೆಯೇನೋ ರಂಗ ಮಂಗಳಾಂಗ ಕೋಲು ಕೈಯಲಿ purandara vittala MARETEYENO RANGA MANGALAANGA KOLU KAIYALLI. Show all posts

Sunday 5 December 2021

ಮರೆತೆಯೇನೋ ರಂಗ ಮಂಗಳಾಂಗ ಕೋಲು ಕೈಯಲಿ purandara vittala MARETEYENO RANGA MANGALAANGA KOLU KAIYALLI

sung as purandara vittala ankita

check ?
same song written by sripadarajaru

ಮರೆತೆಯೇನೋ ರಂಗ ಮಂಗಳಾಂಗ ||ಪ||

ಕೋಲು ಕೈಯಲ್ಲಿ ಕೊಳಲು
ಜೋಲು ಕಮ್ಬಳಿ ಹೆಗಲ
ಮೇಲೆ ಕಲ್ಲಿನ ಚೀಲ ಕನ್ಕುಳಲಿ
ಕಾಲಿಗೆ ಕಡಗವು ಪಶುಹಿಂಡು ಲಾಲಿಸುತ
ಬಾಲಕರ ಮೇಳದೊಳಗಿದ್ಯಲ್ಲೊ ರಂಗ ||

ಕಲ್ಲುಮಣೆ ಕವಡೆ ಚನ್ನೆ
ಗುಲುಗುಂಜಿ ವದವೆ ಸಾರಲು ನಿನ್ನ ಸರ್ವಾಂಗಕ್ಕೆ
ಅಲ್ಲಲ್ಲಿಗಳವಟ್ಟು ನವಿಲುಗರಿದಂಡೆ
ಅಲ್ಲಿ ಗೊಲ್ಲರ ಕೂಡೆ ಸಲ್ಲಾಪವಾಡುತ ||

ಸಿರಿದೇವಿ ಬಂದು ಸೇರಿದ್ದ ಬಳಿಕ ಲೋಕದೊಳಗೆ
ಸಿರಿಯರಸನೆಂಬುವರು
ಪರಮಮುಖ್ಯಪ್ರಾಣ ವಂದಿತ ಉಡುಪಿನ ನೆಲೆಯು ಶ್ರೀ-
ಪುರಂದರ ವಿಠಲ ಕೃಷ್ಣ ನೀ ಮರೆತೀಯೆ ||
****

ರಾಗ ಮೋಹನ. ಏಕ ತಾಳ (raga, taala may differ in audio)

pallavi

maratiyEnO ranga mangaLAnga

caraNam 1

kOlu kaiyalli koLalu jOlu kambaLi hegala mEle kallina cIla kankuLali
kAlige kaDagavu pahuhiNDu lAlisuta bAlakara mELadoLagiddayallo ranga

caraNam 2

kallumaNe kavaDe canne gulugunji sAralu ninna sarvAngakke
allalligaLavaTTu navilugaridaNDe alli gollara kUDe sallApavADuta

caraNam 3

siridEvi bandu sEridda baLiga lOkadoLage siriyarasanembuvaru parama
mukhyaprANa vandita uDupina neleyu shrI purandara viTTala krSNa nI maretIye
***

ಮರೆತೆಯೇನೋ ರಂಗ ಮಂಗಳಾಂಗ|| 

 ಕೋಲು ಕೈಯಲ್ಲಿ ಕೊಳಲು| 
ಜೋಲು ಕಂಬಳಿ ಹೆಗಲ ಮೇಲೆ| 
ಕಲ್ಲಿನ ಚೀಲ ಕಂಕುಳಲಿ |ಕಾಲಿಗೆ ಕಡಗವು| 
ಪಶುಹಿಂಡು ಲಾಲಿಸುತ ಬಾಲಕರ 
ಮೇಳದೊಳು ಇದ್ಯಲ್ಲೊ ರಂಗ || 

 ಕಲ್ಲುಮಣೆ ಕವಡೆ ಚನ್ನೆ ಗುಲುಗುಂಜಿ 
ಒಡವೆ ಸಾರಲು ನಿನ್ನ ಸರ್ವಾಂಗಕ್ಕೆ| 
ಅಲ್ಲಲ್ಲಿಗಳವಟ್ಟು ನವಿಲುಗರಿದಂಡೆ 
ಅಲ್ಲಿ ಗೊಲ್ಲರ ಕೂಡೆ ಸಲ್ಲಾಪವಾಡುತ || 

 ಸಿರಿದೇವಿ ಬಂದು ಸೇರಿದ್ದ ಬಳಿಕ 
ಲೋಕದೊಳಗೆ ಸಿರಿಯರಸನೆಂಬುವರು 
ಪರಮಮುಖ್ಯಪ್ರಾಣ ವಂದಿತ ಉಡುಪಿನ 
ನೆಲೆಯು ಪುರಂದರವಿಠ್ಠಲ ಶ್ರೀಕೃಷ್ಣನೆ ||
****


ಪುರಂದರದಾಸರು
ಮರೆತೆಯೇನೋ ರಂಗ ಮಂಗಳಾಂಗ ಪ 

ಕೋಲು ಕೈಯಲಿ ಕೊಳಲು, ಜೋಲುಗಂಬಳಿ ಹೆಗಲ |ಮೇಲೆ ಕಲ್ಲಿಯ ಚೀಲ ಕಂಕುಳಲಿ ||ಕಾಲಿಗೆ ಕಡಗವು ಕಾಯುತ ಹಸು ಹಿಂಡ |ಬಾಲಕರ ಮೇಳದಿ ಇದ್ದೆಯೊ ರಂಗ 1

ಕಲ್ಲುಮಣಿ ಕವಡಿ ಚೆನ್ನೆ ಗುಳ್ಳೆಗುಂಜಿ ಒಡವೆ |ಎಲ್ಲವು ನಿನ್ನ ಸರ್ವಾಂಗದಲಿ ||ಅಲ್ಲಲ್ಲಿಗಳವಟ್ಟು ನವಿಲುಗರಿಯ ದಂಡೆ |ಗೊಲ್ಲ ಮಕ್ಕಳ ಕೂಡೆ ಸಲ್ಲಾಪವಾಡುತೆ 2

ಸಿರಿದೇವಿ ಬಂದು ಸೇರಿದ ಬಳಿಕ ಲೋಕದೊಳಗೆ |ಸಿರಿಯರಸನೆಂಬುವರು ||ವರಮುಖ್ಯ ಪ್ರಾಣವಂದಿತ ಉಡುಪಿಯ |ಸಿರಿಪುರಂದರವಿಠಲ ಶ್ರೀ ಕೃಷ್ಣ* 3
********