Showing posts with label ನಂಬಬೇಡಿ ಸಿರಿಯ ತನ್ನದೆ neleyadikeshava. Show all posts
Showing posts with label ನಂಬಬೇಡಿ ಸಿರಿಯ ತನ್ನದೆ neleyadikeshava. Show all posts

Wednesday 1 September 2021

ನಂಬಬೇಡಿ ಸಿರಿಯ ತನ್ನದೆ ankita neleyadikeshava

 ..

ನಂಬಬೇಡಿ ಸಿರಿಯ ತನ್ನದೆ ? ಪ


ನಂಬಬೇಡಿ ಸಿರಿಯು ತನ್ನದೆಂಬ ನಿಮಿಷದೊಳಗೇನಹುದೊಡಂಬತನವಿದೇಕೆ ಹರಿಯ ಪಾ-ದಾಂಬುಜವನು ಭಜಿಸಿ ನರರು ಅ


ಜಲಧಿಯನ್ನು ಪೀರ್ದ ಮುನಿಯಜನನಿ ಪೆಸರ್ಗೆ ಕಿವಿಯನಾಂತಖಳನ ಬಲವ ನಂಬಲಾತುತಲೆಯ ತವಿಸಿದವನ ಸಿರಿಯುಗಳಿಗೆಯೊಳಗೆ ಕೀಲು ಸಡಿಲದೆ - ಎಣಿಕೆ ಇಲ್ಲದದಳವು ಯಮನನಗರಿಗೈದದೆ - ದೈವಕೃಪೆಯುತೊಲಗಲೊಡನೆ ದಾಳಿವರಿಯದೆ - ಕೇಳಿ ಜನರೆ 1


ಅಂಧರಾಯನಾತ್ಮಜರು ಮ-ದಾಂಧರಾಗಿ ಮಲೆತು ಗೋತ್ರಬಂಧುಗಳನು ಲೆಕ್ಕಿಸದೆ ಇಭ ಪುರಿಯನಾಳಿದ ನೃಪತಿ ಕೌರವೇಂದ್ರನರಸುತನವು ತೊಡೆಯದೆ - ಸಕಲ ಸೈನ್ಯಬಂಧು ಬಳಗ ರಣದಿ ಮಡಿಯದೆ - ಶೌರಿ ಮುನಿಯಲಂದು ಅವನ ಪದವು ಮುರಿಯದೆ - ಕೇಳಿ ಜನರೆ2


ಧರಣಿಯ ಮುನ್ನಾಳ್ದ ನಹುಷಸಗರರೆನಿಪ ಭೂಪತಿಗಳುಸಿರಿಯ ಜಯಿಸಲಿಲ್ಲ - ಮಿಕ್ಕನರರ ಪಾಡಿದೇನು ನೀವುಬರಿದೆ ಭ್ರಾಂತರಾಗಬೇಡಿರೊ - ಎಂದಿಗಾದರುಸ್ಥಿರವಿದಲ್ಲವೆಂದು ತಿಳಿಯಿರೊ - ಶ್ರೀ ಕಾಗಿನೆಲೆಯವರದ ಕೇಶವನನು ಭಜಿಸಿರೊ - ಕೇಳಿ ಜನರೆ 3

***