Showing posts with label ಅನಂತ ಕಾಲದಲ್ಲಿ rangavittala ankita suladi ಆತ್ಮನಿವೇದನೆ ಸುಳಾದಿ ANANTA KAALADALLI ATMANIVEDANE SULADI. Show all posts
Showing posts with label ಅನಂತ ಕಾಲದಲ್ಲಿ rangavittala ankita suladi ಆತ್ಮನಿವೇದನೆ ಸುಳಾದಿ ANANTA KAALADALLI ATMANIVEDANE SULADI. Show all posts

Sunday 8 December 2019

ಅನಂತ ಕಾಲದಲ್ಲಿ rangavittala ankita suladi ಆತ್ಮನಿವೇದನೆ ಸುಳಾದಿ ANANTA KAALADALLI ATMANIVEDANE SULADI

Audio by Mrs. Nandini Sripad

ಶ್ರೀ ಶ್ರೀಪಾದರಾಜ ವಿರಚಿತ   ಆತ್ಮನಿವೇದನೆ ಸುಳಾದಿ 

 ರಾಗ ಪಂತುವರಾಳಿ 

 ಧ್ರುವತಾಳ 

ಅನಂತ ಕಾಲದಲ್ಲಿ ನಿನ್ನ ನಾ 
ನರಿಯದೆ ಭವಗಳಲ್ಲಿ ಬಂದೆನೊ
ಅನಂತ ಕಾಲದಲ್ಲಿ ನಿನ್ನನೇ
ನೆನಿಸದೆ ಮೂರುಖನಾದೆನೊ
ಅನಂತ ಕಾಲದಲ್ಲಿ ನಿನ್ನ ಚರಣ
ರತಿಯಿಲ್ಲದೆ ನೊಂದೆನೊ
ಅನಂತ ಕಾಲದಲ್ಲಿ ದಾವ ಪುಣ್ಯ
ದಿಂದ ಬಂದು ಇಂದೂ
ನಿನ್ನವ ನೆನಿಸಿದೆ ಆವ ಪುಣ್ಯವೆನ್ನ ಮನ
ನಿನ್ನಲ್ಲೆರಗಿತು ನೋಯದಂತೆ
ಎನ್ನ ಪೊರೆದು ಪಾಲಿಸೊ 
ದೀನನಾಥ ಸಿರಿರಂಗವಿಟ್ಠಲಾ ॥ 1 ॥

 ಮಠ್ಯತಾಳ 

ಅನ್ನಕೆ ಪ್ರದ್ರಾವಣ ದೇಹ ನಿಮಿತ್ಯ
ಅನ್ನಕೆ ಶೋಕಾಸಿ ಎನೆ ಮಾಡಿ
ಅನ್ನದ ಲೋಭ ಆಶುಭದ ಲಾಭ
ಅನ್ನಕೆ ನನ್ನದು ನಾನೆಂಬ ಹಮ್ಮು
ಅನ್ನಕೆ ಯಾವನ್ನಕ ನಿನ್ನ ಚರಣರತಿ ದೊರಕೊಳ್ಳದೊ
ಉನ್ನತ ಗುಣ ಪರಿಪೂರ್ಣ ರಂಗವಿಟ್ಠಲಾ ॥ 2 ॥

 ರೂಪಕತಾಳ 

ತೊಳಲಿ ಸಂಸಾರ ಚಕ್ರದಲಿ ಸಿಲುಕಿ
ಬಳಲಿದ ಜೀವಗಣಕೆ ಸಂತತ
ನಳಿನನಾಭ ನಿನ್ನ ಪಾದಾಂಬುಜ
ನೆಳಲು ನೆಮುಗೆ ಯಲ್ಲವೆ
ಉಳವೆ ಜಗದೊಳು ಪರಮ ಸುಖಂಗಳ
ಕಳವಳಿಸುವರಾರು ರಂಗವಿಟ್ಠಲ 
ನಳಿನನಾಭ ನಿನ್ನ ಪಾದಾಂಬುಜ ॥ 3 ॥

 ಝಂಪೆತಾಳ 

ನೀ ಕರುಣಿಯೆಂದು ನಿನ್ನನೆ ನಾನು ನಂಬಿದೆನೊ
ನೀ ಕರಿಸದೆ ಎನ್ನ ಶ್ರೀಕಾಂತ ಕಾಯಯ್ಯ
ನಿನ್ನವನೆಂಬೆ ನಾನು ಮ -
ತ್ತನ್ಯ ಪರಿಯೇನೋ ಇಂದಿರೇಶಾ
ಕಂದರ್ಪನೆಂದೆಂದು ಕಾಣದಂತೆ ಮಾಡೊ
ವೃಂದಾರಕಾಧೀಶ ರಂಗವಿಟ್ಠಲ ನಿನ್ನವನೆಂಬೆ ನಾನು ॥ 4 ॥

 ತ್ರಿಪುಟತಾಳ 

ವ್ರತ ಜಪತಪ ಹೋಮ ಮಾಡುವೆನೆಂದು
ತಪ್ಪದೆ ಮನೆಮನೆ ತಿರುಗಿ ಬಳಲುವೆ
ಬೆಲೆಗೆ ಹೋಗದು ಸರಕು ಸುಡಲಿದವೈಯ್ಯಾ 
ಹರಿಯೆ ಕೊಂಬುವರಿಲ್ಲ ಬೆಲೆ ಹೋಗದು 
ಸರಕು ಸಡಲದಂತೆ ಕಡೆಗೆ ತೆಗೆದು ನಿನ್ನ
ಚರಣದಡಿಯಲ್ಲಿಟ್ಟು ಕಾಯೊ ರಂಗವಿಟ್ಠಲಾ ॥ 5 ॥

 ಅಟ್ಟತಾಳ 

ಎನ್ನ ಮನ ಹರಿ ನಿನ್ನ ಚರಣದೊಳೊಮ್ಮೆ ಎರಗದು 
ದುರಿತ ದುಷ್ಕೃತ ಎಂತು ಸೈರಿಪೆನೊ
ನಂದನಂದನ ಮುಕುಂದ ನಾನೆಂತು 
ಎನ್ನ ಮನ ಹರಿ ನಿನ್ನ ಚರಣದೊಳೊಮ್ಮೆ
ಎರಗಿಸು ರಂಗವಿಟ್ಠಲಯ್ಯಾ ಎಂತು ॥ 6 ॥

 ಆದಿತಾಳ 

ಭವವೆಂಬಟವಿಯಲ್ಲಿ ಭಯ ಕೊಳದಲಿ ಸಿಕ್ಕಿ
ತಾಪತ್ರಯವೆಂಬುದು ದಾವಾ ನತಿ 
ತಪ್ಪೆ ನವರಿಗೆ ಹರಿ ನಿನ್ನ
ನಾಮತ್ರಯವಲ್ಲದೆ ಮತ್ತುಂಟೆ
ಅಪರಿಮಿತವಾದ ಪಾದಪದುಮ ಮನೆ
ನೆಳಲಲ್ಲಿ ನಿಲಿಸೆನ್ನ ರಂಗವಿಟ್ಠಲಾ ॥ 7 ॥

 ಜತೆ 

ಬೆಂದಾ ಸಂಸಾರದಿ ಬಂದು ಬಂದು ನೊಂದೆನಯ್ಯಾ 
ನಂದ ನಂದನ ಕಾಯೊ ರಂಗವಿಟ್ಠಲರೇಯಾ ॥
**********


ನಾಟಿ ರಾಗ 
(ಧ್ರುವತಾಳ)

ಅನ್ನಂತ ಕಾಲದಲ್ಲಿ ನಿನ್ನ ನಾನರಿಯದೆ ಭವಗಳಲ್ಲಿ ಬಂದೆನೊ
ಅನ್ನಂತ ಕಾಲದಲ್ಲಿ ನಿನ್ನವನೆನಿಸದೆ ಮೂರುಖನಾದೆನೊ
ಅನ್ನಂತ ಕಾಲದಲ್ಲಿ ನಿನ್ನ ಚರಣರತಿಯಿಲ್ಲದೆ ನೊಂದೆನೊ
ಅನ್ನಂತ ಕಾಲದಲ್ಲಿ ಅದಾವ ಪುಣ್ಯದಿಂದ ಬಂದು ಇಂದು
ನಿನ್ನವನೆನಿಸಿದೆ ಅದಾವ ಪುಣ್ಯದಿಂದಲೆನ್ನ ಮನ
ನಿನ್ನಲ್ಲೆರಗಿತೊ ನೋಯದಂತೆ
ಎನ್ನ ಪೊರೆದು ಪಾಲಿಸೊ ದೀನನಾಥ ಶ್ರೀರಂಗವಿಠಲ ೧

(ಮಠ್ಯತಾಳ)

ಅನ್ನಕ ಭಯದ್ರವಿಣ ದೇಹನಿಮಿತ್ತ
ಅನ್ನಕ ಶೋಕಾಶಯ ಮಾರಿ
ಅನ್ನಕ ಲೋಭ ಅಶುಭದ ಲಾಭ
ಅನ್ನಕ ನನ್ನದು ನಾನೆಂಬಹಮ್ಮಿಕೆ
ಆವನ್ನಕ ನಿನ್ನ ಚರಣರತಿ ದೊರಕೊಳ್ಳದೊ
ಉನ್ನಂತ ಗುಣಪರಿಪೂರ್ಣ ರಂಗವಿಠಲ ೨

(ತ್ರಿಪುಟತಾಳ)

ತೊಳಲಿ ಸಂಸಾರ ಚಕ್ರದಲಿ ಸಿಲುಕಿ
ಬಳಲಿದ ಜೀವಗಣಕೆ ಸಂತತ
ನಳಿನನಾಭಾ ನಿನ್ನ ಪದಾಂಭೋಜ
ನೆಳಲು ನೆಮ್ಮುಗೆಯಲ್ಲವೆ
ಒಳವೆ ಜಗದೊಳು ಸಕಲ ಸುಖಂಗಳು
ಕಳವಳಿಸುವರು ರಂಗವಿಠಲ ೩

(ರೂಪಕತಾಳ)

ನೀ ಕರುಣಿಯೆಂದು ನಿನ್ನ ನಾ ಮೊರೆಹೊಕ್ಕೆ
ನೀಕರಿಸದೆ ಎನ್ನ ಶ್ರೀಕಾಂತ ಕಾಯಯ್ಯ
ನಿನ್ನವನೆಂಬೆ ನಾನು ಮತ್ತನ್ಯವನರಿಯೆ
ನಿನ್ನವನೆಂಬೆ ನಾನು
ಕಂದರ್ಪನೆಂದೆಂದು ಕಾಡದಂತೆ ಮಾಡೊ
ವೃಂದಾರಕಾಧೀಶ ರಂಗವಿಠಲ ೪

(ಝಂಪೆತಾಳ)

ಪರರ ಬಾಗಿಲು ಕಾಯಿದು ಹೋಯಿತೀ ಸಂಸಾರ
ಪರರ ಗುಣಗಳ ತುತಿಸಿ ಹೋಯಿತೀ ನಾಲಗೆ
ಪರರ ಹಾರಿ ಹಾರಿ ಹೋಯಿತ್ತಿಂತೆನ್ನ ಮನ
ಪರಮಕಾರುಣಿಕನೆ ನಮೋ ರಂಗವಿಠಲಯ್ಯ ೫

(ಅಟ್ಟತಾಳ)

ಎನ್ನ ಮನ ಹರಿ ನಿನ್ನ ಚರಣದೊಳೊಮ್ಮೆ
ಎರಗದು ದುರಿತ ದುಷ್ಕೃತವೆಂತು ಸೈರಿಪೆನೊ
ನಂದನಂದನ ಮುಕುಂದ ಎಂತು ಸೈರಿಪೆನೊ
ಮಂದಹಾಸ ಗೋವಿಂದ ಎಂತು ಸೈರಿಪೆನೊ
ಎನ್ನ ಮನವನು ನಿನ್ನ ಚರಣದೊಳೊಮ್ಮೆ
ಎರಗಿಸೊ ರಂಗವಿಠಲ ಎಂತು ಸೈರಿಪೆನೊ ೬

(ತ್ರಿಪುಟತಾಳ)

ವ್ರತ ಜಪತಪ ಯಾಗಂಗಳ ಮಾಡುವೆನೆಂದು
ಮನೆಮನೆದಪ್ಪದೆ ತಿರುಗಿ ಬಳಲಿದೆ
ಬೆಲೆಗೆ ಹೋಗದು ಸರಕು ಸಡಿಲದಯ್ಯಾ ಹರಿಯೆ
ಕೊಂಬುವರಿಲ್ಲ ಬೆಲೆಗೆ ಹೋಗದು ಸರಕು
ಸಡಿಲುವಂತೆ ಮರೆಗೆ ತೆಗೆದು ನಿನ್ನ
ಚರಣದಡಿಯಲಿಟ್ಟು ಕಾಯೊ ರಂಗವಿಠಲ ೭

(ಏಕತಾಳ)

ಭವವೆಂಬಟವಿಯಲ್ಲಿ ಭಯಕೊಳದಲಿ ಸಿಕ್ಕಿ
ತಾಪತ್ರಯವೆಂಬ ದಾವಾನಲ ತಪ್ತ ನರರಿಗೆ
ಹರಿ ನಿನ್ನ ನಾಮಾಶ್ರಯವಲ್ಲದೆ ಮತ್ತುಂಟೆ
ಮನುಲೋಕದಲ್ಲುಂಟೆ ತನುಪರಿಣ(?)ವಲ್ಲಭ
ಅಮೃತ ಒಸರುವ ಪದಪದುಮದ
ನೆಳಲ ನೆಲೆವನೆಯಲಿ ಎನ್ನನಿರಿಸೊ ರಂಗವಿಠಲ ೮

(ಜತೆ)

ಬೆಂದ ಸಂಸಾರದಿ ಬಂದು ನೊಂದು ಬಳಲಿದೆನಯ್ಯ
ನಂದ ನಂದನ ಕಾಯೊ ರಂಗವಿಠಲ
***************