Showing posts with label ವೀರ ಹನುಮ ಬಹು ಪರಾಕ್ರಮ ಸುಜ್ಞಾನವಿತ್ತು ಪಾಲಿಸೆನ್ನೆ ಜೀವರೋತ್ತಮ vittalavyasa. Show all posts
Showing posts with label ವೀರ ಹನುಮ ಬಹು ಪರಾಕ್ರಮ ಸುಜ್ಞಾನವಿತ್ತು ಪಾಲಿಸೆನ್ನೆ ಜೀವರೋತ್ತಮ vittalavyasa. Show all posts

Thursday 5 August 2021

ವೀರ ಹನುಮ ಬಹು ಪರಾಕ್ರಮ ಸುಜ್ಞಾನವಿತ್ತು ಪಾಲಿಸೆನ್ನೆ ಜೀವರೋತ್ತಮ ankita vittalavyasa

 .

kruti by baddannayyacharyaru ಬಡಣ್ಣಯ್ಯಾಚಾರ್ಯರು

ankita vittala vyasa


ವೀರ ಹನುಮ ಬಹು ಪರಾಕ್ರಮ ಸುಜ್ಞಾನವಿತ್ತು

ಪಾಲಿಸೆನ್ನೆ ಜೀವರೋತ್ತಮ ಪ


ರಾಮದೂತನೆನಿಸಿಕೊಂಡ್ಯೋ ನೀ ರಾಕ್ಷಸರ

ವನವನೆಲ್ಲ ಕೆಡಿಸಿ ಬಂದ್ಯೋ ನೀ

ಭೂಮಿಪುತ್ರಿಗೆ ಮುದ್ರೆಯಿತ್ತು ಜಗತ್ತಿಗೆಲ್ಲ

ಹರುಷವಿತ್ತು ಪ್ರಖ್ಯಾತನಾದ್ಯೋ ನೀ 1

ಗೋಪಿಸುತನ ಪಾದಪೂಜಿಸಿ ಗದೆಯ ಧರಿಸಿ

ಕೌರವಕುಲವ ಸವರಿದ್ಯೋ ನೀ

ದ್ರೌಪದಿಯ ಮೊರೆಯ ಕೇಳಿ ಕಷ್ಟವೆಲ್ಲ

ಬಿಡಿಸಿ ಭೀಮರೂಪನೆನಿಸಿದ್ಯೋ ನೀ 2

ಮದ್ಯಗೇಹದಲ್ಲಿ ಜನಿಸಿ ಬಾಲ್ಯತನದ

ಮಷ್ಕರಿಯ ರೂಪಗೊಂಡ್ಯೋ ನೀ

ವೇದ ವಿಠಲವ್ಯಾಸದಾಸನಾಗಿ ಭಾಷ್ಯವನೋದಿ

ಸನ್ಮುದದಿಂದ ಸಂತೆಬಿದನೂರಿನಲ್ಲಿ ನಿಂತ್ಯೋ ನೀ 3

***