Showing posts with label ರಂಗನಾಥ ಮಾಂ ಗಂಗಾಜನಕ ತುಂಗ ಮಹಿಮ ಮಂಗಳಾಂಗ ಪಾಹಿ karpara narahari. Show all posts
Showing posts with label ರಂಗನಾಥ ಮಾಂ ಗಂಗಾಜನಕ ತುಂಗ ಮಹಿಮ ಮಂಗಳಾಂಗ ಪಾಹಿ karpara narahari. Show all posts

Monday 2 August 2021

ರಂಗನಾಥ ಮಾಂ ಗಂಗಾಜನಕ ತುಂಗ ಮಹಿಮ ಮಂಗಳಾಂಗ ಪಾಹಿ ankita karpara narahari

ರಂಗನಾಥ ಮಾಂ ಗಂಗಾಜನಕ

ತುಂಗ ಮಹಿಮ ಮಂಗಳಾಂಗ ಪಾಹಿ ಪ


ತಿಂಗಳ ತೇಜದಲಿ ಪೊಳೆಯುತ

ಕಂಗೊಳಿಸುವ ಮುಕುಟ ಮಂಡಿತ

ಬಂಗಾರದಾಭರಣ ಭೂಷಿತ

ಶೃಂಗಾರದಿ ರಥವನೇರುತ

ಮಂಗಳ ವಾದ್ಯಂಗಳುಲಿಯೆ

ರಂಗನಾಥ ಪ್ರತಿವರ್ಷದಿ

ತುಂಗಛತ್ರ ಚಾಮರ ವ್ಯಜ-

ನಂಗಳ ವಿಭವದಿ ಬರುತಿರೆ

ಕಂಗಳಿಂದ ನೋಳ್ಪ ಭಕ್ತ

ಜಂಗುಳಿ ಪಾಲಿಸಲೋಸುಗ

ಮಂಗಳಸಿರಿ ಜಾಲಹಳ್ಳಿ ಪುರನಿಲಯ ಪೊರೆ ಎನ್ನ1


ಹಿಂದಕೆ ಮುದಗಲ್ಲು ಪುರದಿ

ಬಂದಿಹ ಉಪ್ಪಾರ ಜನದಿ

ಬಂದು ಗೋಣಿಯೊಳಗೆ ಮುದದಿ

ನಿಂದಿಯೊ ಪದಮೆಟ್ಟೆ ಬೆಟ್ಟದಿ

ಅಂದಿನ ರಾತಿಯ ಸ್ವಪ್ನದಿ

ಸಂದರ್ಶನವಿತ್ತು ಪುರದಿ

ಮಂದಿರಕಾರ್ಯವ ಸೂಚಿಸ-

ಲಂದು ರಾಯಗೌಡನಿಂದ

ಬಂಧುರದಲಿ ನಿರ್ಮಿತ ಆ-

ನಂದನಿಲಯ ಮಂದಿರ ಮು

ಕುಂದನಂದ ಕಂದನೆ ಮದ್ ಹೃದಯದಲಿ ಸದಾತೋರೋ2


ವಾರಿಚರ ಮಂದರಧರ ಭೂ

ಚೋರಮಥನ ಘೋರರೂಪನೆ

ಚಾರು ಬ್ರಹ್ಮಚಾರಿ ವಾಮನ

ಶೂರ ಪರಶುರಾಮನೆ ನಮೊ

ಧಾರುಣಿ ಜಾವಲ್ಲಭ ಕಂ-

ಸಾರಿ ವಸನದೂರನೆ ಹಯ

ವೇರಿ ದುಷ್ಟ ದಿತಿಜರ ಭಯ

ದೂರ ಮಾಡಿ ಕಾವದೇವ

ಧಾರುಣಿಸುರ ಪರಿಪಾಲಕ

ವಾರಿಜಭವ ನುತ ಕಾರ್ಪರಾ-

ಗಾರವೀರ ನಾರಸಿಂಹ ನಮಿಸುವೆನು ರಮಾರಮಣ3

****