Showing posts with label ಭೂತ ಬಡೆದಿತೊ ಬ್ರಹ್ಮಭೂತವ ಬಿಡಿಸುವರಾರಮ್ಮ bheemashankara. Show all posts
Showing posts with label ಭೂತ ಬಡೆದಿತೊ ಬ್ರಹ್ಮಭೂತವ ಬಿಡಿಸುವರಾರಮ್ಮ bheemashankara. Show all posts

Friday 6 August 2021

ಭೂತ ಬಡೆದಿತೊ ಬ್ರಹ್ಮಭೂತವ ಬಿಡಿಸುವರಾರಮ್ಮ ankita bheemashankara

 ..

 kruti by ಭೀಮಾಶಂಕರರು ದಾಸರು bheemashankara


ಭೂತ ಬಡೆದಿತೊ | ಬ್ರಹ್ಮಭೂತವ ಬಿಡಿಸುವರಾರಮ್ಮ ಪ


ಪೃಥ್ವಿ ಆಪ ತೇಜಂಗಳನೆಲ್ಲ ನುಂಗಿತು |ಮತ್ತೆ ಸಮೀರ ಸಹ ಆಕಾಶವ |ಚಿತ್ತ ಹಂಮಿನ ಮೂಲಕ ಹವಣಿಸುತಿದೆ |ಕರ್ತು ತಾನಾಗಿ ಸುಮ್ಮನೆ ಕೂತಿತಮ್ಮಾ 1


ಕಳವಳ ಕಳೆದೀತು ಒಳ್ಳೆ ಬೆಳಗಾದೀತು |ಸುಳದ್ಹಾಂಗೆ ಸುಳದೀತು ಅಳಿವಿಲ್ಲದೆ |ಮೂಲ ಪ್ರಕೃತಿಯ ಮೇಲೇರಿ ನಿಂತಿತು |ಸೊಲ್ಲದಿಂ ಸೋಂಕಲು ಬಲು ಭಯವಮ್ಮಾ 2


ದಿಮ್ಮನೆ ಬಡದೀತು ಹಂಮನೆ ನುಂಗೀತು |ನಮ್ಮಗೆ ಎಲ್ಲಿಹುದು ಉಲಗಡೆಯಮ್ಮಾ |ಬ್ರಹ್ಮಾಂಡದಾಚೀಲಿ ಭೂತ ಕುಣಿಯುತಿದೆ |ಭೀಮಾಶಂಕರನ ಮನಿ ದೈವವಮ್ಮಾ 3

***