Showing posts with label ಸಂಕ್ರಾಂತಿ ಹಬ್ಬವ ಮಾಡ ಬನ್ನಿರೆ ಮನದ madhwesha krishna SANKRANTI HABBAVA MAADA BANNIRE MANADA. Show all posts
Showing posts with label ಸಂಕ್ರಾಂತಿ ಹಬ್ಬವ ಮಾಡ ಬನ್ನಿರೆ ಮನದ madhwesha krishna SANKRANTI HABBAVA MAADA BANNIRE MANADA. Show all posts

Thursday 2 December 2021

ಸಂಕ್ರಾಂತಿ ಹಬ್ಬವ ಮಾಡ ಬನ್ನಿರೆ ಮನದ ankita madhwesha krishna SANKRANTI HABBAVA MAADA BANNIRE MANADA





ಸಂಕ್ರಾಂತಿ ಹಬ್ಬ

ಸಂಕ್ರಾಂತಿ ಹಬ್ಬವ ಮಾಡಬನ್ನಿರೆ ಮನದ
ಭ್ರಾಂತಿಗಳನೆಲ್ಲ ಕಳೆಯ ಬನ್ನಿರೆ
ಕಾಂತೀಯರೆಲ್ಲ ಸೇರಿ ಮಾಡಬನ್ನಿರೆ
ಶ್ರೀಕಾಂತನ ಒಲುಮೆ ಪಡೆಯಬನ್ನಿರೆ||ಪಲ್ಲ||

ಬೆಳಗು ಜಾವದಲಿ ಏಳುತ್ತಲಿ
ನಳಿನನಾಭನ ಧ್ಯಾನ ಮಾಡುತ್ತಲಿ
ಎಳ್ಳು  ಹಚ್ಚಿ ಸ್ನಾನ ಮಾಡುತ್ತಲಿ
ನಲ್ಲೆಯರೆಲ್ಲ ನಲಿದಾಡುತ್ತಲಿ||೧||

ಅಂಗಳವನ್ನೆ ಸ್ವಚ್ಛ ಮಾಡುತ್ತಲಿ
ರಂಗವಾಲಿಗಳ್ಹಾಕಿ ನೋಡುತ್ತಲಿ
ತಳಿರು ತೋರಣವನ್ನೆ ಕಟ್ಟುತ್ತಲಿ
ಬಳಲದೆ ಕಾರ್ಯವ ಮಾಡುತ್ತಲಿ||೨||

ಎಳ್ಳಿನ  ದೀಪಗಳ ಹಚ್ಚುತ್ತಲಿ
 ಎಳ್ಳಿನ  ದಾನವ ನೀಡುತ್ತಲಿ
ಎಳ್ಳಿನ  ಭಕ್ಷಗಳ ಮಾಡುತ್ತಲಿ
ಎಳ್ಳು  ಬೆಲ್ಲವ ಸೇರ್ಸಿ ಹಂಚುತ್ತಲಿ||೩||

ಎಳ್ಳಿನ  ಕಹಿಯನ್ನ ಬಿಡಿರೆನ್ನುತ
ಬೆಲ್ಲದ ಸವಿಯನ್ನೆ  ಸವಿರೆನ್ನುತ
ಉಲ್ಲಾಸದಿಂದ  ಎಲ್ಲ ಜನರು ಸೇರುತ್ತ
ಮಲ್ಲ ಮರ್ಧನ ಹರಿಯ ನೆನೆಯುತ್ತ||೪||

ಸಂಕ್ರಾಂತಿ ಹಬ್ಬದ  ಸಂಭ್ರಮವು
ದಕ್ಷಿಣಾಯನ ಕಾರ್ಯ ಮುಗಿಯಿತೆಂದು
ಸ್ನಾನ ಜಪ ತಪಗಳ ಮಾಡುತ್ತಲಿ
ಜ್ಞಾನಿಗಳೊಡನೆ ಸೇರುತ್ತಲಿ||೫||

ಉತ್ತರಾಯಣ ಮಹ ಶ್ರೇಷ್ಠವೆಂದು
ಮಂಗಳ ಕಾರ್ಯಗಳಗೆ ಯೋಗ್ಯವೆಂದು
ಕಾದರು ಭೀಷ್ಮಾಚಾರ್ಯರಂದು
ಮೋದದಿ ಹರಿಪಾದ ಸೇರಲೆಂದು||೬||

ಹೊಸ ಧಾನ್ಯಗಳನೆ ತಂದು ಮಾಡುತ್ತ
ಹೊಸ ಬಟ್ಟೆಗಳನೆ ಹಾಕಿ ನಲಿಯುತ್ತ
ಹಣ್ಣು ಕಬ್ಬು ಬೋರೆ ಫಲವ ತಂದು
 ಸಣ್ಣ ಮಕ್ಕಳಿಗೆ ಹಣ್ಣ ನೆರೆಯುತ್ತ||೭||

ಬದನಿ ಕಬ್ಬು ಬಾಳೆಫಲವ ತಂದು
ಮುದದಿ ಬೀರಿಸಿ ಬರಬೇಕೆಂದು
ಸದಮಲ ಹೃದಯದಿ ಎಳ್ಳು  ಬೆಲ್ಲ
 ಮುದದಿಂದ ಹಂಚಿದರು ನಾರೇರೆಲ್ಲ||೮||

ಭೋಗ ಭಾಗ್ಯಗಳ ನೀಡೆನ್ನುತ
ಭೋಗಿಶಯನನಭಜೀಸುತ್ತ
ನಾಗಶಯನನ ಧ್ಯಾನ ಮಾಡುತ್ತ
ಮಧ್ವೇಶಕೃಷ್ಣನ  ನಿತ್ಯನೆನೆಯುತ್ತ||೯||
***