Showing posts with label ಮಂಗಳಂ ಶ್ರೀರಾಮಚಂದ್ರನಿಗೆ ಕಂಗೊಳಿಪ ದೇವಗೆ ankita gopalakrishna vittala. Show all posts
Showing posts with label ಮಂಗಳಂ ಶ್ರೀರಾಮಚಂದ್ರನಿಗೆ ಕಂಗೊಳಿಪ ದೇವಗೆ ankita gopalakrishna vittala. Show all posts

Monday 2 August 2021

ಮಂಗಳಂ ಶ್ರೀರಾಮಚಂದ್ರನಿಗೆ ಕಂಗೊಳಿಪ ದೇವಗೆ ankita gopalakrishna vittala

ಮಂಗಳಂ ಶ್ರೀ ರಾಮಚಂದ್ರನಿಗೆ

ಕಂಗೊಳಿಪ ದೇವಗೆ ಪ.


ಬಿಟ್ಟು ಪಟ್ಟ ತೊಟ್ಟು ವ್ರತವ ಮೆಟ್ಟಿ ವನವನೂ

ದುಷ್ಟರನ್ನು ಕುಟ್ಟಿ ಬಂದು ಪಟ್ಟವಾಳ್ದ ಶ್ರೇಷ್ಠ ಮೂರ್ತಿಗೆ 1

ಸೀತೆ ಅನುಜರೊಡನೆ ವೆರಸಿ ವಾತತನಯನ

ಪ್ರೀತಿ ಸೇವೆ ಕೊಳುತ ರಾಜ್ಯ ನೀತಿಯಿಂದ ನಡೆಸಿದವಗೆ 2

ಶ್ರೇಷ್ಠ ಭಕ್ತರೊಡನೆ ವೆರಸಿ ದಿಟ್ಟತನದಲಿ

ಪಟ್ಟವಾಳಿ ಪ್ರಜರ ಪೊರೆದು ಇಷ್ಟ ಸಲಿಸಿ ಮುದವಿತ್ತವಗೆ 3

ರಾಮನಾಮ ಪಠಿಪ ಜನರ ಕಾಮಿತಾರ್ಥವ

ಪ್ರೇಮದಿಂದ ಕೊಟ್ಟು ಪೊರೆವ ಸ್ವಾಮಿ ಸುಗುಣಧಾಮ ಹರಿಗೆ4

ಭೂಪರೊಳಗೆ ಶ್ರೇಷ್ಠ ರಾಮರೂಪ ಮಂಗಳಂಗೋಪಾಲಕೃಷ್ಣವಿಠ್ಠಲಗೆ ದೀಪದಾರತೀಯ ಬೆಳಗಿ 5

****