Showing posts with label ಧರೆಯೊಳಗೆ ವ್ಯಾಸಮುನಿವರನ ಸಂಸ್ಥಾನಕಿ gopalakrishna vittala vyasaraja stutih. Show all posts
Showing posts with label ಧರೆಯೊಳಗೆ ವ್ಯಾಸಮುನಿವರನ ಸಂಸ್ಥಾನಕಿ gopalakrishna vittala vyasaraja stutih. Show all posts

Monday 2 August 2021

ಧರೆಯೊಳಗೆ ವ್ಯಾಸಮುನಿವರನ ಸಂಸ್ಥಾನಕಿ ankita gopalakrishna vittala vyasaraja stutih

ಧರೆಯೊಳಗೆ ವ್ಯಾಸಮುನಿವರನ ಸಂಸ್ಥಾನಕಿ

ನ್ನೆರಡನೆಯದಾವುದುಂಟು ಪ.

ಪರಿಪರಿಯಲಿ ನೋಡೆ ಪರಮ ವೈಭವದಿಂದ

ಧರಣಿಯೊಳು ಮೆರೆಯುತಿಹುದು ಇಹುದುಅ.ಪ.


ಹಂಸನಾಮಕನಿಂದ ಹರಿದು ಬಂದಂಥ ಯತಿ

ಸಂಸ್ಥಾನ ಸುರನದಿಯೊ

ಕಂಸಾರಿಪ್ರಿಯ ಶ್ರೀ ಮಧ್ವಮುನಿ ಮತ ಸಾರ

ಹಂಸಗಳು ಸುರಿಯುತಿರಲು

ಸಂಶಯವ ಪರಿಹರಿಸಿ ಸದ್ಗ್ರಂಥಗಳ ಸ-

ದ್ವಂಶರಿಗೆ ಸಾರುತಿರಲು

ಅಂಶ ಹರಿಪರ್ಯಂಕ ಸಹಿತ ಬಾಹ್ಲೀಕ ಯತಿ

ವಂಶದಲಿ ಉದಿಸಿ ಬರಲು ಬರಲು 1

ಬನ್ನೂರು ಸ್ಥಳದಲ್ಲಿ ಜನ್ಮವೆತ್ತುತಲಿ ಬ್ರ

ಹ್ಮಣ್ಯರಾ ಕರದಿ ಬೆಳೆದು

ಚಿಣ್ಣತನದಲಿ ಮೌಂಜಿಧರಿಸಿ ಕಿತ್ತೊಗೆಯುತಲಿ

ಧನ್ಯಯತಿಯಾಗಿ ಮೆರೆದು

ಘನ್ನ ಶ್ರೀಪಾದರಾಯರಲಿ ಸದ್ಗ್ರಂಥಗಳ

ಚನ್ನಾಗಿ ಮನನಗೈದು

ಸಣ್ಣ ಪೆಟ್ಟಿಗೆಯೊಳಡಗಿದ್ದ ಶ್ರೀ ಕೃಷ್ಣನ

ತನ್ನ ಭಕ್ತಿಯೊಳ್ ಕುಣಿಸಿ ನಲಿದು 2

ಪಡೆದು ಪರಿಪರಿಯ ಮಹಿಮೆಗಳ ತೋರುತಲಿ ದುರ್ವಾದಿ

ದುರುಳ ಮತಗಳನೆ ಮುರಿದು

ಮರುತ ಮತ ಶೀತಾಂಶುಕಿರಣ ಚಂದ್ರಿಕೆಯನ್ನು

ಹರಹಿ ಪ್ರಕಾಶಗೈದು

ಸರ್ವ ಸಜ್ಜನರ ಮನದಂದಕಾರವ ಕಳೆದು

ಸಿರಿವರನ ಪ್ರೀತಿ ಪಡೆದು

ತಿರುವೆಂಗಳೇಶನ ಪರಮ ಮಂಗಳ ಪೂಜೆ

ವರುಷ ದ್ವಾದಶವಗೈದು ಮೆರೆದು 3

ಆರಸನಿಗೆ ಬಂದಂಥ ಆಪತ್ಕುಯೋಗ ಪರಿ

ಹರಿಸಿ ಸಂಸ್ಥಾನ ಪಡೆದು

ಪರಮ ಸಾಮ್ರಾಜ್ಯ ಪಟ್ಟಾಭಿಷೇಕವ ತಳೆದು

ಪರಮ ವೈಭವದಿ ಮೆರೆದು

ಚಿರಕಾಲ ವಿಜಯನಗರವು ಮೆರೆಯಲೆಂದ್ಹರಸಿ

ಅರಸನಿಗೆ ರಾಜ್ಯವೆರೆದು

ಕರುಣಾಳುವೆನಿಸಿ ವೈರಾಗ್ಯ ಶಿಖರದಿ ಮೆರೆದು

ಮೊರೆಪೊಂದಿದವರ ಪೊರೆದು ಬಿರುದು 4

ಎಲ್ಲೆಲ್ಲಿ ನೋಡಲಲ್ಲಲ್ಲಿ ಶ್ರೀ ಮರುತನ್ನ

ನಿಲ್ಲಿಸುತ ಪೂಜೆಗೈದು

ನಿಲ್ಲದಿರೆ ಹಂಪೆಯಲಿ ಪ್ರಾಣಾರಾಯನು ಯಂತ್ರ

ದಲ್ಲಿ ಬಂಧನವಗೈದು

ಚಲ್ಲಾಡಿ ಸುವರ್ಣವೃಷ್ಟಿಯಿಂ ದುರ್ಭಿಕ್ಷ

ನಿಲ್ಲಿಸದೆ ದೂರಗೈದು

ಎಲ್ಲ ಕ್ಷೇತ್ರಗಳ ಸಂಚರಿಸಿ ಬಹುದಿನ ಹಂಪೆ

ಯಲ್ಲಿ ಶಿಷ್ಯರನು ಪಡೆದು ನಿಂದು 5

ನವಕೋಟಿ ಧನಿಕ ವೈರಾಗ್ಯ ಧರಿಸುತ

ಭವದ ಬವಣೆಯಲಿ ನೊಂದು ಬಂದು

ನವ ಜನ್ಮಕೊಟ್ಟು ಉದ್ಧರಿಸಬೇಕೆಂದೆರಗೆ

ಅವನಂತರಂಗವರಿದು

ಪವಮಾನ ಮತವರುಹಿ ತಪ್ತ ಮುದ್ರಾಂಕಿತದಿ

ನವ ಜನ್ಮವಿತ್ತು ಪೊರೆದು

ಪವನ ಗ್ರಂಥಾಂಬುಧಿಯೊಳಡಗಿದ್ದ ದಾಸ್ಯ ರ

ತ್ನವ ಪೂರ್ವಗುರುವಿಗೊರೆದು ಸುರಿದು 6

ಯತಿವಾದಿರಾಜ ಪುರಂದರ ಕನಕರೆಂ

ಬತುಲ ಶಿಷ್ಯರ ಕೂಡುತಾ

ಸತತ ಹರಿ ಚರ್ಯ ಮಹಿಮಾದಿಗಳ ಸ್ಮರಿಸುತ್ತ

ಸ್ಮøತಿ ಮರೆದು ಕುಣಿದಾಡುತಾ

ರತಿಪಿತನ ಗಾನ ಭಕ್ತಿಯಲಿ ಕನ್ನಡ ಕವನ

ಮತಿಯೊಳ್ ನಾಲ್ವರುಗೈಯುತಾ

ಕ್ಷಿತಿಯಲ್ಲಿ ದಾಸಪದ್ಧತಿ ಬಾಳಲೆಂದೆನುತ

ಯತಿವರರ ಸೃಷ್ಟಿಸುತ್ತಾ | ಸತತ 7

ಅಂದು ವಿಜಯೀಂದ್ರರನು ಯತಿವರರು ಬೇಡÉ

ಆನಂದದಲಿ ಭಿಕ್ಷವಿತ್ತ

ಬಂದು ಕೈ ಸೇರಿದಾ ರಾಜ್ಯವನು ಕ್ಷಿತಿಪನಿಗೆ

ಮುಂದಾಳಲೆನುತಲಿತ್ತ

ಇಂದಿರೇ ಪತಿ ವೆಂಕಟೇಶನ್ನ ಪೂಜೆ ವರ

ಕಂದನಿಗೆ ಒಲಿದು ಇತ್ತ

ಒಂದೊಂದು ವೈಭವವು ಕೈ ಸೇರೆ ವೈರಾಗ್ಯ

ತಂದು ಅಭಿರೂಪ ಬಿಡುತಾ | ಕೊಡುತ 8

ನವವಿಧದÀ ಭಕ್ತಿಯಲಿ e್ಞÁನ ವೈರಾಗ್ಯದಲಿ

ಕವನದಲಿ ಶಾಂತತೆಯಲಿ

ನವಗ್ರಂಥ ನಿರ್ಮಾಣ ಪವನ ಗ್ರಂಥೋದ್ಧಾರ

ಸವಿನಯವು ಸದ್ಗುಣದಲೀ

ಸುವಿವೇಕ ಸತ್ಕರ್ಮ ಅಂತರ್ಮುಖ ಧ್ಯಾನ

ಅವನಿ ಸಂಚಾರದಲ್ಲಿ

ಇವರ ಸರಿಯಿಲ್ಲ ದಾಸ ವ್ಯಾಸ ಕೂಟದಲಿ

ಭುವನದಲಿ ಮೆರೆದ ಧನ್ಯಾ | ಮಾನ್ಯ 9

ಪಾಪಿಗಳ ಸಲಹಿ ಪಾವನ್ನಗೈಯುತ ಭವದ

ಕೂಪದಿಂದುದ್ಧರಿಸಿದಾ

ಆಪಾರ ಮಹಿಮೆ ಆದ್ಯಂತ ವರ್ಣಿಸಲಳವೆ

ಶ್ರೀಪಾದ ಪದುಮ ರಜದಾ

ವ್ಯಾಪಾರವೆನ್ನ ಗುರು ದಯದಿ ಎನ್ನೊಳು ನಿಂದು

ತಾ ಪಾಲಿಸುತ ನುಡಿಸಿದ

ಗೋಪಾಲಕೃಷ್ಣವಿಠಲ ಧ್ಯಾನದಲಿ ಹಂಪೆ

ಗೋಪ್ಯಸ್ಥಳದಲಡಗಿದಾ 10

***