..
ಭಜನಾ ಮಂಡಳಿಯವರಿಂದ
ಭಕುತರಪರಾಧವ ಬಗೆಯನೀ ದೇವ l
ಭಕುತರು ತಪ್ಪಿದರೆ ಬಲು ಭಯವೀವ ll ಪ ll
ಇಟ್ಟುಣಿಸಿದ ಬಲಿ ಕಟ್ಟಿದ ಯಶೋದೆಗೆ l
ಇಷ್ಟಾರ್ಥಗಳನಂದು ಕೊಟ್ಟು ಕಾಯನೆ l
ದುಷ್ಟತನದಿ ಧೃತರಾಷ್ಟ್ರತನಯ ತನ್ನ l
ಕಟ್ಟಲು ಹವಣಿಸೆ ಕಷ್ಟವನುಣಿಸನೆ ll 1 ll
ಕಾಲಲಿ ತನ್ನ ಅಂಗವನೊದ್ದ ಮುನಿಪನ l
ಮೂಲೋಕವರಿಯೆ ಮುದ್ದಿಸಿ ಮೆರೆಯನೆ l
ತಾಳದೆ ನೃಪತಿಯ ತಾನೆಂದು ತಿಳಿಯಲು l
ಕಾಲಯವನ ಬಂದು ಕಾಳು ಮಾಡಿಸನೆ ll 2 ll
ಪರವಶಚಿತ್ತನಾಗಿ ಫಲುಗುಣ ಜರೆಯಲು l
ಹರಿ ದೂರಾಗದೆ ಹರಣವ ಕಾಯನೆ l
ಅರಸೆಂಬ ಗರ್ವದಿಂದ ಅರಿಭಟ ಪೌಂಡ್ರಕನ l
ಧುರಕೆ ಗುರಿಯ ಮಾಡಿ ಧುರದಿ ಕೊಲಿಸನೆ ll 3 ll
ಶರಕೆ ಗುರಿಯ ಮಾಡಿ ಸಮರದೊಳೊಡ್ಡಿದ l
ಸುರವ್ರತಗಂದು ಶುಭವನೀಯನೆ l
ಹರನ ಮೆಚ್ಚಿಸಿ ತನ್ನ ಗೆಲುವ ಬಿಲ್ಲ ಬೇಡಿದ l
ಶರೀರಸಂಬಂಧಿಯ ಕೊಲ್ಲಿಸನೆ ll 4 ll
ಮಕುಟವ ಕದ್ದೊಯ್ಯಲು ಮಹಾಬಲಿಯ ಬಾಗಿಲ l
ಆಕಳಂಕನಂದು ಕಾವುದ ಬಿಟ್ಟನೆ l
ಈ ಕೃಷ್ಣ ಹಯವದನನಿಂದುಡುಪಿನ ಜನಕೆ l
ಶೋಕವಿತ್ತ ಕಳ್ಳನಿಗೆ ಶೂಲಗತಿಯೀಯನೆ ll 5 ll
***
ಭಕುತರಪರಾಧವ ಬಗೆಯನೀ ದೇವಭಕುತರು ತಪ್ಪಿದರೆ ಬಲು ಭಯವೀವ ಪ .
ಇಟ್ಟುಣಿಸಿದ ಬಲಿ ಕಟ್ಟಿದ ಯಶೋದೆಗೆಇಷ್ಟಾರ್ಥಗಳನಂದು ಕೊಟ್ಟು ಕಾಯನೆದುಷ್ಟತನದಿ ಧೃತರಾಷ್ಟ್ರತನಯ ತನ್ನಕಟ್ಟಲು ಹವಣಿಸೆ ಕಷ್ಟವನುಣಿಸನೆ 1
ಕಾಲಲಿ ತನ್ನ ಅಂಗವನೊದ್ದ ಮುನಿಪನಮೂಲೋಕವರಿಯೆ ಮುದ್ದಿಸಿ ಮೆರೆಯನೆತಾಳದೆ ನೃಪತಿಯ ತಾನೆಂದು ತಿಳಿಯನುಕಾಲಯವನ ಬಂದು ಕಾಳು ಮಾಡಿಸನೆ 2
ಪರವಶಚಿತ್ತನಾಗಿಫಲುಗುಣ ಜರೆಯಲುಹರಿ ದೂರಾಗದೆ ಹರಣವ ಕಾಯನೆಅರಸೆಂಬ ಗರ್ವದಿಂದ ಅರಿಭಟ ಪೌಂಡ್ರಕನಧುರಕೆ ಗುರಿಯ ಮಾಡಿ ಧುರದಿ ಕೊಲಿಸನೆ3
ಶರಕೆ ಗುರಿಯ ಮಾಡಿ ಸಮರದೊಳೊಡ್ಡಿದಸುರವ್ರತÀಗಂದು ಶುಭವನೀಯನೆಹರನ ಮೆಚ್ಚಿಸಿ ತನ್ನ ಗೆಲುವ ಬಿಲ್ಲ ಬೇಡಿದಶರೀರ ಸಂಬಂಧಿಯ ಕೊಲಿಸನೆ 4
ಮಕುಟವ ಕದ್ದೊಯ್ಯಲು ಮಹಾಬಲಿಯ ಬಾಗಿಲಅಕಳಂಕನಂದು ಕಾವುದ ಬಿಟ್ಟನೆಈ ಕೃಷ್ಣ ಹಯವದನನಿಂದುಡುಪಿನ ಜನಕೆಶೋಕವಿತ್ತ ಕಳ್ಳನಿಗೆ ಶೂಲಗತಿಯೀಯನೆ5
***