Showing posts with label ಶ್ಯಾಮಸುಂದರ ದಾಸರ್ಗೆ ನಮೋ ನಮೋ venkatanatha shyamasundara dasa stutih. Show all posts
Showing posts with label ಶ್ಯಾಮಸುಂದರ ದಾಸರ್ಗೆ ನಮೋ ನಮೋ venkatanatha shyamasundara dasa stutih. Show all posts

Saturday 1 May 2021

ಶ್ಯಾಮಸುಂದರ ದಾಸರ್ಗೆ ನಮೋ ನಮೋ ankita venkatanatha shyamasundara dasa stutih

ಆಚಾರ್ಯ ನಾಗರಾಜು ಹಾವೇರಿ.... 

ಶ್ಯಾಮಸುಂದರ ದಾಸರ್ಗೆ -

ನಮೋ ನಮೋ ।

ಶ್ಯಾಮಾರ್ಯ ಕೋಪ್ರಮ್ಮರ -

ಪುತ್ರರ್ಗೆ ನಮೋ ನಮೋ ।। ಪಲ್ಲವಿ ।।


ಶೌರಿ ಕಥಾಮೃತ ರಚಿಸಿದ -

ದೇವ ಗುರುವಿನಂಶ ।

ಧೀರ ಮಾನವಿ ಮುನಿಪುಂಗವರ -

ಸೂನುವಾದ ।। ಚರಣ ।।


ಹರಿಕಥಾಮೃತಸಾರ -

ಸಿದ್ಧಿ ಪಡೆದು ।

ವರಕವಿ ಶ್ಯಾಮಸುಂದರ-

ಯೆಂದು ಖ್ಯಾತರಾದ ।। ಚರಣ ।।


ಗುರುಸಾರ್ವಭೌಮರಲಿ -

ಪರಮ ಭಕುತಿ ಮಾಡಿ ।

ಹರಿವಾಯುಗುರುದಾಸರ -

ಮೇಲೆ ಪದ ರಚಿಸಿದ   ।। ಚರಣ ।।


 ಗುರು ಜಗನ್ನಾಥದಾಸರ -

ಕರುಣೆಲಿ ಮಾತನಾಡಿ  ।

ವರ ಕವಿಯೆಂದು ಕೀರ್ತಿ -

ಗಳಿಸಿದ ।। ಚರಣ ।। 


ಐಕೂರು ನರಸಿಂಹಾರ್ಯ-

ರಲಿ ಶಿಷ್ಯತ್ವ ವಹಿಸಿ ।

ಅಸ್ಕಿಹಾಳ ಗೋವಿಂದಾರ್ಯರ -

ಅನುಗ್ರಹ ಪಡೆದ  ।। ಚರಣ ।।


ಕುರುಡಿ ರಾಘವೇಂದ್ರಾಚಾರ್ಯ -

ರಿತ್ತಿ ಸುಶೀಲೇಂದ್ರಾ - ।

ರ್ಯರಿಗೆ ಲಕುಮೀಶ ಗುರುಶ್ಯಾಮ -

ಸುಂದರಯೆಂದು ಅಂಕಿತವಿತ್ತ ।। ಚರಣ ।।


ಅಂಬುಧಿಜಾ ವಲ್ಲಭ ವೇಂಕಟನಾಥೋsಭಿನ್ನ ।

ಅಂಬುದಶ್ಯಾಮನ ಪಾದ -

ಪದುಮ ಮಧುಪಾ ।। ಚರಣ ।।

*****