Showing posts with label ಜಯ ಮಂಗಳಂ ನಿತ್ಯ ಶುಭ ಮಂಗಳಂ ದಯಾಂಬುಧಿ ಶ್ರೀ bheemashankara. Show all posts
Showing posts with label ಜಯ ಮಂಗಳಂ ನಿತ್ಯ ಶುಭ ಮಂಗಳಂ ದಯಾಂಬುಧಿ ಶ್ರೀ bheemashankara. Show all posts

Friday 6 August 2021

ಜಯ ಮಂಗಳಂ ನಿತ್ಯ ಶುಭ ಮಂಗಳಂ ದಯಾಂಬುಧಿ ಶ್ರೀ ankita bheemashankara

 ..

 kruti by ಭೀಮಾಶಂಕರರು ದಾಸರು bheemashankara


ಜಯ ಮಂಗಳಂ ನಿತ್ಯ ಶುಭ ಮಂಗಳಂ | ದಯಾಂಬುಧಿ ಶ್ರೀ ಮಹಾ ಪಾದ ತೀರ್ಥಕ್ಕೆ ಪ


ಅಜ್ಞಾನ ಮಲನಾಶ ಮಾಡುವ ತೀರ್ಥಕ್ಕೆ | ಜನ್ಮ ಕರ್ಮಗಳ ಪರಿಹರಿಸುವ ತೀರ್ಥಕ್ಕೆ | ಜ್ಞಾನ ವೈರಾಗ್ಯವನು ಸಿದ್ಧಿಸುವ ತೀರ್ಥಕ್ಕೆ |ಘನ ಗುರುವಿನ ನಿಜ ಪಾದ ತೀರ್ಥಕ್ಕೆ || ಜಯ || 1


ತಾಪತ್ರಯವನು ಪರಿಹರಿಸುವ ತೀರ್ಥಕ್ಕೆ | ಅಪರಿಮಿತವಾದ ಭವ ಹರಿಸುವ ತೀರ್ಥಕ್ಕೆ | ಇಪ್ಪತ್ತೈದು ತತ್ತ್ವ ಪಾವನಗೈದ ತೀರ್ಥಕ್ಕೆ |ಕೃಪನಿಧಿ ತಾರಿಸಿದ ಗುರುಪಾದ ತೀರ್ಥಕ್ಕೆ || ಜಯ || 2


ವಿಪ್ರಪಾದಾದಲ್ಲಿ ದಕ್ಷಿಣಾ ಭಾಗದಲಿ | ತಪ್ಪದೆ ವಾಸವಾಗಿಹ ತೀರ್ಥಕ್ಕೆ |ಒಪ್ಪುತೆ ಶಿರಸ್ಸಿನೊಳು ಧರಿಸಿಕೊಂಡಿಹ ಹರನ | ತಾಪ ನಾಶವಗೈವ ಗುರುಪಾದ ತೀರ್ಥಕ್ಕೆ || ಜಯ || 3


ಜಗದೊಳಗಿನ ತೀರ್ಥ ಸಾಗರದೊಳಿರುತಿಹವು | ಸಾಗರಾಂತ ಸಹ ಪರಿವಾರದಿ | ಅಘವ ಹರಿಸುವದೆಂದು ಜಗದೊಡೆಯನ ಪಾದದಿ |ಬೇಗನೆ ಬಂದು ಮಡಿಯಾಗುವ ತೀರ್ಥಕ್ಕೆ || ಜಯ || 4


ಕಮಲನಯನ ಕಮಲೋದ್ಭವರೆಲ್ಲರು | ವಿಮಲಮಹ ಪದಗಳನು ಹೃದಯದಲಿ ಧರಿಸಿ | ಬ್ರಹ್ಮಾಂಡಕೋಟಿಗಳನು ಉದ್ಧರಿಸುವ ತೀರ್ಥಕ್ಕೆ |ಭೀಮಾಶಂಕರನು ಸೇವಿಸಿದ ಗುರುಪಾದ ತೀರ್ಥಕ್ಕೆ || ಜಯ5

***