Showing posts with label ಚರಣವ ನಂಬಿಹೆನು ಶ್ರೀ ಗುರುರಾಯ ರಾಘವೇಂದ್ರ janakiramana. Show all posts
Showing posts with label ಚರಣವ ನಂಬಿಹೆನು ಶ್ರೀ ಗುರುರಾಯ ರಾಘವೇಂದ್ರ janakiramana. Show all posts

Monday 6 September 2021

ಚರಣವ ನಂಬಿಹೆನು ಶ್ರೀ ಗುರುರಾಯ ರಾಘವೇಂದ್ರ ankita janakiramana

ankita janakiramana

ರಾಗ: ಸುರಟಿ ತಾಳ: ಆದಿ


ಚರಣವ ನಂಬಿಹೆನು ಶ್ರೀ ಗುರುರಾಯ ರಾಘವೇಂದ್ರ


ಮರೆಯದೆ ಶರಣಾಗತರನು ಪೊರೆಯುವ 

ಕರುಣಾ ವಾರಿಧಿ ನೀವೆನುತ ಅ. ಪ


ಪರಿಪರಿ ಶಾಸ್ತ್ರಗಳ ಪಠಿಸುತ ಅ-

ದರ ಸಾರ ಗ್ರಹಿಸಲಿಲ್ಲ

ಗುರುಗಳ ಚರಣವ ಭಜಿಸದ ಮನುಜನು

ಧರಣಿಗೆ ಭಾರವು ಆಗಿಹನು 1

ನಿರುತದಿ ಗುರುಚರಣ ಭಜಿಸಲು 

ದೊರಕದು ಅರಕ್ಷಣವು

ಪೊರೆಯಲು ಸತಿಸುತರೆಲ್ಲರ ಅನುದಿನ

ತಿರುಗಿದೆ ಇಡಿದಿನ ಊರೊಳಗೆ 2

ಅನ್ಯರನಾನರಿಯೆ ಗುಣನಿಧಿ ನಿ-

ಮ್ಮನು ನಾ ಮರೆಯೆ

ಜಾನಕಿರಮಣನ ಗುಣಗಳ ಪಾಡಲು

ಜ್ಞಾನವ ಕರುಣಿಸು ನೀ ಧೊರೆಯೇ 3

***