Showing posts with label ಅಡವಿ ಆಚಾರ್ಯರ ಅಡಿಯ ಪೊಂದಿದ anantadreesha ADAVI ACHARYARA ADIYA PONDIDA VISHNU TEERTHA STUTIH. Show all posts
Showing posts with label ಅಡವಿ ಆಚಾರ್ಯರ ಅಡಿಯ ಪೊಂದಿದ anantadreesha ADAVI ACHARYARA ADIYA PONDIDA VISHNU TEERTHA STUTIH. Show all posts

Friday 27 December 2019

ಅಡವಿ ಆಚಾರ್ಯರ ಅಡಿಯ ಪೊಂದಿದ ankita anantadreesha ADAVI ACHARYARA ADIYA PONDIDA VISHNU TEERTHA STUTIH


Audio by Mrs. Nandini Sripad

by Gokavi Anantadreesharu / Gokavi Ananthacharyaru 1770 - 1850 

by ಶ್ರೀ ಗೋಕಾವಿ ಅನಂತಾಚಾರ್ಯ


 ರಾಗ ಬಾಗೇಶ್ರೀ               ಆದಿತಾಳ 

ಅಡವಿ ಆಚಾರ್ಯರ ಅಡಿಯ ಪೊಂದಿದ ಜನರು ।
ಅಡಿಗಡಿಗೆ ಬಹುಪುಣ್ಯ ಪಡೆದು ಕೊಂಬುವರು ॥ ಪ ॥
ಪೊಡವಿಯಲಿ ಸಂಸಾರ ಮಡುವಿನಲಿ ಮುಣಿಮುಣಿಗಿ ।
ಬಡವರಂತತಿ ಬಾಯ ಬಿಡುವರಲ್ಲವರು ॥ ಅ ಪ ॥

ಪಂಚರತ್ನವ ಪಠಿಸಿ ಪಂಚಮೂರ್ತಿಗಳನ್ನು ।
ಮುಂಚೆ ತಿಳಿವರು ಈ ಪ್ರಪಂಚದಲ್ಲಿ ॥
ಹಂಚಿಕೆಯಲಿ ಮತ್ತೆ ಪಂಚಭೇದವ ತಿಳಿದು ।
ಪಂಚ ಮಹಾಪಾಪಗಳ ಮುಂಚೆ ಕಳೆಯುವರು ॥ 1 ॥

ಭಂಗ ಬಿಡಿಸುವ ಸುಧೆಯ ಮಂಗಳಾರ್ಥವ ತಿಳಿದು ।
ಅಂಗದಲಿ ಸುರಿವರು ಕಂಗಳುದಕವ ॥
ಮಂಗಳಾಂಗನ ಅಂತರಂಗದಿ ಸ್ಮರಿಸುತ್ತ ।
ಮುಂಗೈಯ್ಯ ಮುದ್ರೆಗಳ ಧರಿಸುವರಿವರು ॥ 2 ॥

ವಾಸುದೇವನ ದಾಸ ದಾಸರಾದೆವೆಂಬೊ ।
ಆಶೆಯಲಿ ಅವನ ಸಹವಾಸ ಬಯಸುವರು ॥
 ಶ್ರೀಸುಧಾರ್ಥಾನಂತಾದ್ರೀಶನಲ್ಲೇ ಭಕುತಿ ।
ಯೇಸು ಕಾಲಕು ಬಿಡದೆ ಬ್ಯಾಸರದೆ ಬೇಡುವರು ॥ 3 ॥
*****

ಗೋಕಾವಿ ಅನಂತಾದ್ರಿ ಶ್ರೀ ಅನಂತಾಚಾರ್ಯರ ಕೃತಿ 
 (ಶ್ರೀಅನಂತಾದ್ರೀಶ ಅಂಕಿತ) 

ಅಡವಿ ಆಚಾರ್ಯರ ಅಡಿಯ ಪೊಂದಿದ ಜನರು
ಅಡಿಗಡಿಗೆ ಬಹುಪುಣ್ಯ ಪಡೆದು ಕೊಂಬುವರು ||pa||

ಪೊಡವಿಯಲಿ ಸಂಸಾರ ಮಡುವಿನಲಿ ಮುಣಿಮುಣಿಗಿ
ಬಡವರಂತತಿ ಬಾಯ ಬಿಡುವರಲ್ಲವರು ||a.pa||

ಪಂಚರತ್ನವ ಪಠಿಸಿ ಪಂಚಮೂರ್ತಿಗಳನ್ನು
ಮುಂಚೆ ತಿಳಿವರು ಈ ಪ್ರಪಂಚದಲ್ಲಿ
ಹಂಚಿಕೆಯಲಿ ಮತ್ತೆ ಪಂಚಭೇದವ ತಿಳಿದು
ಪಂಚ ಮಹಾ ಪಾಪಗಳ ಮುಂಚೆ ಕಳೆಯುವರು ||1||

ಭಂಗ ಬಿಡಿಸುವ ಸುಧೆಯ ಮಂಗಳಾರ್ಥವ ತಿಳಿದು
ಅಂಗದಲಿ ಸುರಿವರು ಕಂಗಳೊದಕವ
ಮಂಗಳಾಂಗನ ಅಂತರಂಗದಿ(ದಲಿ) ಸ್ಮರಿಸುತ್ತ
ಮುಂಗೈಯ್ಯ ಮುದ್ರೆಗಳ ಧರಿಸುವರಿವರು||2||

ವಾಸುದೇವನ ದಾಸ ದಾಸರಾದೆವೆಂಬೊ
ಆಶೆಯಲಿ ಅವನ ಸಹವಾಸ ಬಯಸುವರು
ಶ್ರೀಸುಧಾರ್ಥಾನಂತಾದ್ರೀಶನಲ್ಲೇ ಭಕುತಿ
ಯೇಸು ಕಾಲಕು ಬಿಡದೆ ಬ್ಯಾಸರದೆ ಬೇಡುವರು ||3||
********