Showing posts with label ಗುರುಗಳ ಮನದಿ ಕಂಡು ಧನ್ಯನಾದೆ guruvijaya vittala vijaya dasa stutih. Show all posts
Showing posts with label ಗುರುಗಳ ಮನದಿ ಕಂಡು ಧನ್ಯನಾದೆ guruvijaya vittala vijaya dasa stutih. Show all posts

Saturday 1 May 2021

ಗುರುಗಳ ಮನದಿ ಕಂಡು ಧನ್ಯನಾದೆ ankita guruvijaya vittala vijaya dasa stutih

 ..by modalakallu sheshadasaru

 ಶ್ರೀ ಮೊದಲಕಲ್ಲು ಶೇಷದಾಸರು 


ಗುರುಗಳ ಮನದಿ ಕಂಡು ಧನ್ಯನಾದೆ ।

ಸಿರಿ ಅರಸನಾ ದಾಸರು-

ವಿರಾಯರಾಯರು ।। ಪಲ್ಲವಿ ।। 


ಶ್ಯಾಮಸುಂದರ ಕಾಯ -

ನಾಮ ದ್ವಾದಶ ಮುದ್ರೆ ।

ವಾಮನ ರೂಪವ ಧರಿಸಿ -

ಕೋಮಲ ತುಳಸಿಯು ।

ಕಮಲಾಕ್ಷಿ ಮಣಿಗಳಿಂದ-

ವಿಮಲ ಚಿತ್ತದಿ ।

ಕಾಮನಯ್ಯನ ಸಾಮ-

ಗಾನದಿ ಪೊಗಳುವ | ಚರಣ |


*ಹಿಂದೆ ಪುರಂದರದಾಸರ -

ಕಂದನಾಗಿ ಪುಟ್ಟಿ ।

ತಂದೆ ವಾಕ್ಯವ ತಾಳಿ -

ಇಂದು ಧರಿಗೆ ಬಂದು ।

ಇಂದಿರೇಶನ ಚರಿತ್ರೆಯು -

ಕುಂದದಲೆ ಬೀರಿ ।

ಮಂದ ಮತಿಗಳಿಗೆ -

ಮಂದರಧರನ ತೋರಿದ ।। ಚರಣ ।। 


ಗುರುಗಳ ಹೃದಯವಾಸ-

ಗುರುವಿಜಯವಿಠ್ಠಲನ ।

ಸಿರಿ ಪಾದ ಪದುಮ -

ಕರುಣವ ತೋರಿಸಿ ।

ಸಾರ ಹೃದಯದಿ -

ಹರಿಯ ಕೊಂಡಾಡಿಸಿ ಎರಗೆ ।

ಪರಮ ಸುಖದೊಳೀ-

ರುವಂತೆ ಮಾಡಿದ ।। ಚರಣ ।।

****