Showing posts with label ಸ್ಮರಿಸುವುದು ರಘುನಂದನನ gadugina veeranarayana. Show all posts
Showing posts with label ಸ್ಮರಿಸುವುದು ರಘುನಂದನನ gadugina veeranarayana. Show all posts

Sunday, 31 January 2021

ಸ್ಮರಿಸುವುದು ರಘುನಂದನನ ankita gadugina veeranarayana

ಶ್ರೀ ಹುಯಿಲಗೋಳ ನಾರಾಯಣರಾಯರ ಕೃತಿ


 ರಾಗ -  :  ತಾಳ -


ಸ್ಮರಿಸುವುದು ರಘುನಂದನನ ll ಪ ll


ನಿರುತದಿ ಬೆಳಗಿನೊಳೆದ್ದು ಭಕುತಿಯಲಿ ll ಅ ಪ ll 


ಜನಪತಿ ದಶರಥನುದರದಿ ಜನಿಸಿದ  

ವನಿತೆ ಅಹಲ್ಯೆಯ ತಾನುದ್ಧರಿಸಿದ

ಘನ ಶಂಕರ ಧನುವ ಭಂಗಿಸಿದ

ಜನಕ ಸುತೆಯ ವರಿಸಿದ ಶ್ರೀರಾಮನ ll ೧ ll


ತಾಯಿ ಕೈಕೇಯಿಯ ಮಾತು ನಡೆಸಿದ

ನೋಯದೆ ವನವನು ಸತಿಸಹ ಸೇರಿದ

ಮಾಯಾಮೃಗದಾಶೆಗೆ ಸತಿಯನಗಲಿದ 

ರಾಯ ಲಕ್ಷ್ಮಣನಣ್ಣ ಶ್ರೀರಾಮನ ll ೨ ll


ದಂಡಕದೊಳು ಸತಿಯನು ಶೋಧಿಸಿದ

ಚಂಡ ಹನುಮಗೆ ತಾ ದೊರೆಯಾದ

ಪುಂಡ ಜಲಧಿಯ ದಾಟಿಸಿದ

ಹೆಂಡತಿ ಇರವನು ತಿಳಿದ ಶ್ರೀರಾಮನ ll ೩ ll


ಜಲಧಿಗೆ ಸೇತುವೆ ನಿಂತು ಬಿಗಿಸಿದ 

ಖಳ ರಾವಣನ ರಣದೊಳು ಕೆಡಹಿದ

ಒಲಿದು ವಿಭೀಷಣನನು ತಾ ಪೊರೆದ

ನೆಲದೊಳು ಸುಖ ಬೀರಿದ ಶ್ರೀರಾಮನ ll ೪ ll


ಧರುಮವ ನೆಲೆಸಲು ದುಷ್ಟರ ತರಿದಾ

ಧರೆಯೊಳು ಶಿಷ್ಟರ ಪೊರೆಯಲು ಬಯಸಿದ

ಸಿರಿಪತಿ ಗದುಗಿನ ವೀರನಾರಾಯಣ 

ನರನಾಗವತರಿಸಿದ ಶ್ರೀರಾಮನ ll ೫ ll

**