Showing posts with label ನಂಬದಿರು ಸಂಸಾರವೆಂಬೋದೆ ಸಾಧನ ಸುಳಾದಿ vijaya vittala ankita suladi NAMBADIRU SAMSARAVEMBODE SADHANA SULADI. Show all posts
Showing posts with label ನಂಬದಿರು ಸಂಸಾರವೆಂಬೋದೆ ಸಾಧನ ಸುಳಾದಿ vijaya vittala ankita suladi NAMBADIRU SAMSARAVEMBODE SADHANA SULADI. Show all posts

Tuesday 27 July 2021

ನಂಬದಿರು ಸಂಸಾರವೆಂಬೋದೆ ಸಾಧನ ಸುಳಾದಿ vijaya vittala ankita suladi NAMBADIRU SAMSARAVEMBODE SADHANA SULADI

Audio by Mrs. Nandini Sripad


 ಶ್ರೀವಿಜಯದಾಸಾರ್ಯ ವಿರಚಿತ 


 ಸಾಧನ ಸುಳಾದಿ 


(ಶ್ರೀಹರಿಯನ್ನು ನಂಬಲು ಸಂಸಾರ ನಿವೃತ್ತಿ) 


 ರಾಗ ನಾಟಿ 


 ಧ್ರುವತಾಳ 


ನಂಬದಿರು ಸಂಸಾರವೆಂಬೋದೆ ಕಾಳಕೂಟ -

ದಂಬುಧಿಗೆ ಅತಿ ಮಿಗಿಲು ಹಂಬಲಿಸದಿರು

ಡಿಂಬವು ತ್ರಿವಿಧವೆಂಬೋದು ವೇದಸಿದ್ಧ

ಡಂಭಕ ಮಾಯಕದಂಬ ತಿಳಿಯಲೊಶವೆ

ಶಂಬರಾರಿ ಕುಟುಂಬಕ್ಕೆ ಸಿಲುಕಿ

ಗುಂಭವಾದ ಜ್ಞಾನ ಭಕುತಿಯ ಮರೆದು

ಉಂಬೊ ತಿಂಬದರಲ್ಲಿ ಸಂಭ್ರಮವಾಗಿ ನಲಿವೆ

ಕುಂಭಿಣಿಯೊಳು ವಿಷವೆಂಬೊದೆ ಬಯಸುತ

ಅಂಬುಜ ಪಾಣಿ ಸದಾ ವಿಜಯವಿಟ್ಠಲನ ಪಾ -

ದಾಂಬುಜ ನೆನೆಯದೆ ಕುಂಭಿಪಾಕಕ್ಕಿಳಿವೆ ॥ 1 ॥ 


 ಮಟ್ಟತಾಳ 


ಉಸುಗಿನ ಮನೆ ಮಾಡಿ ಕುಸಿಯ ಗುದ್ದಿದರದು

ವಸುಧಿಗೆ ಬೀಳದಲೆ ಹಸನಾಗಿ ನಿಲ್ಲುವದೆ

ಅಸುವು ನಿನ್ನದು ಎಂದು ಅಸುರ ವಿಜ್ಞಾನದಲಿ

ಅಸಜ್ಜನ ನಡತೆಯಲಿ ಕುಶಲದಲ್ಲಿರದಿರೂ

ಅಸುರಾಂತಕ ದಾತ  ವಿಜಯವಿಟ್ಠಲ ಹರಿಯಾ

ರಸನೇಂದ್ರಿಯದಲಿ ನೆನಸದಿದ್ದಡೆ ಮಾ -

ಹಿಷ ಗಮನನು ಖಂಡ್ರಿಸದಿಪ್ಪನೆ ಮರುಳೆ ॥ 2 ॥ 


 ತ್ರಿವಿಡಿತಾಳ 


ಆದಿಮೂಲ ಮೂರ್ತಿ ನಾರಾಯಣ ಜಗ -

ದಾದಿ ಕರ್ತ ಸಿದ್ಧ ಸರ್ವಸಮರ್ಥ

ಕ್ರೋಧನಲ್ಲ ದಯಾವಂತ ಇನ್ನೊಬ್ಬರಿಗಲ್ಲಾ

ಭೇದವಖಿಳ ಜೀವಕಪಾರ ಮಹಿಮನು

ಸಾಧನವರಿತು ಅವರವರಿಗೆ ಫಲವೀವಾ

ವ್ಯಾದಿಶ ನಾಮರಂಗ ವಿಜಯವಿಟ್ಠಲರೇಯನ 

ಆದರಿಸಿ ಸಂಸಾರ ರೋದನ ಗೆಲ್ಲು ॥ 3 ॥ 


 ಅಟ್ಟತಾಳ 


ಶಾರೀರಧಾರಿಯಾದ ಮೇಲೆ ದೋಷ -

ಪಾರವಾಗಿ ಒಂದು ತೊಲಗದಲ್ಲಿಪ್ಪವು

ಘೋರ ಕರ್ಮದ ನಿಬಿಡರಾಧಿಸಲು ಪುಣ್ಯ

ಜಾರಿ ಪೋಗುವದು ಪ್ರಾಪುತವಾಗದೆ

ನಾರಾಯಣನ ಪಾದವಾರಿಜ ಮರೆದರೆ

ತೀರದು ಸಂಸಾರ ಬಂಧನವು

ಕ್ರೂರ ವಿಷಯಂಗಳ ದಾರಿಯ ಮೆಟ್ಟದೆ

ಸೂರೆಗೊಡು ಮನ ಸದ್ಭಕ್ತಿಗೆ

ಬೀರು ಸ್ವಭುಜನಾಮ ವಿಜಯವಿಟ್ಠಲನೆಂದು 

ಪಾರಾಗು ಸಂಸಾರ ವಾರಿಧಿ ವೇಗ ॥ 4 ॥ 


 ಆದಿತಾಳ 


ಕಂಡ ದೇವರಿಗೆ ಬಾಗೆ ಮಂಡೆ ಪರಟಿಗಟ್ಟುವದು

ಪಿಂಡಾಂಡದಲ್ಲಿ ಬಂದು ಭಂಡು ಬೀಳೋದು ತಪ್ಪದು

ತಂಡ ತಂಡದ ಸಂಸಾರ ದಂಡ ಕೊಳದಿ ಬಾಳಬೇಕು

ಮಂಡಲೇಶ ನೆಗ್ರೋಧ ವಿಜಯವಿಟ್ಠಲರೇಯಗೆ 

ದಂಡಾಕಾರವಾಗಿ ನಮಿಸೆ ಹಿಂಡು ಪಾಪದಿಂದ ಮುಕ್ತಿ ॥ 5 ॥ 


 ಜತೆ 


ನಮ್ರೀ ಭೂತನಾಗೆ ಸಂಸಾರ ಪರಿಸುವಾ

ಅಮೃತಾಂಶವೆ ನಾಮ ವಿಜಯವಿಟ್ಠಲ ಸ್ವಾಮಿ ॥

***