Showing posts with label ನೊಂದು ಬಂದೆನೊ ಕಾಂತೇಶ ಕೈಯನೆ ಪಿಡಿಯೊ gopalakrishna vittala. Show all posts
Showing posts with label ನೊಂದು ಬಂದೆನೊ ಕಾಂತೇಶ ಕೈಯನೆ ಪಿಡಿಯೊ gopalakrishna vittala. Show all posts

Monday 2 August 2021

ನೊಂದು ಬಂದೆನೊ ಕಾಂತೇಶ ಕೈಯನೆ ಪಿಡಿಯೊ ankita gopalakrishna vittala

ನೊಂದು ಬಂದೆನೊ ಕಾಂತೇಶ ಕೈಯನೆ ಪಿಡಿಯೊ

ಮಂದಭಾಗ್ಯಳ ಜೀವೇಶ ಪ.


ಅಂದು ಶ್ರೀ ರಾಮರ ಸಂದೇಶವನ್ನೆ ಭೂ-

ನಿಂದನೆಗೆ ಅರುಹುತಲಿ ಬಹು ಆನಂದಪಡಿಸಿದ ವಾನರೇಶ ಅ.ಪ.


ಪರಮ ಕರುಣಾಳು ಶೌರಿ | ಭಕ್ತರ ಕಾಯ್ವ

ದುರಿತದೂರನೆ ಉದಾರಿ

ಚರಣಕ್ಕೆ ನಮಿಸುವೆ ಹರಿಗೆ ಪರಮಾಪ್ತನೆ

ಎರವು ಮಾಡದೆ ದುರಿತ ತರಿಯುತ

ಪೊರೆಯೊ ಗುರುವರ ರಾಮಕಿಂಕರ 1

ಗುರುಕರುಣದ ಬಲದಿ | ಅರಿತೆನೊ ನಿನ್ನ

ಚರಣ ನಂಬಿದೆ ಮನದಿ

ಪರಿ ಪರಿ ಭವಕ್ಲೇಶ ಪರಿಯ ಬಣ್ಣಿಸಲಾರೆ

ಹರಿವರನೆ ದಯಮಾಡು ಶ್ರೀ ಹರಿ

ದರುಶನವನನವರವಿತ್ತು 2

ಕಾಂತನ ಅಗಲಿರಲು | ಚಿಂತೆಯಲಿ ಭೂ

ಕಾಂತೆ ವನದೊಳಗಿರಲು

ಸಂತೋಷದಿಂ ರಾಮನಂತರಂಗವನರುಹಿ

ಸಂತಸವಪಡಿಸುತಲವನಿಸುತೆಯ

ನಿಂತೆ ರಾಮರಿಗ್ಹರುಷ ತೋರಿ 3

ದ್ರುಪದ ಸುತೆಯಳ ಕೀಚಕ | ದುರ್ಮನದಲಿ

ಅಪಮಾನಪಡಿಸೆ ದುಃಖ

ತಪಿಸಿ ನಿನ್ನನು ಬೇಡೆ ಆ ಪತಿವ್ರತೆ ಸತಿ

ಕುಪಿತದಿಂದಲಿ ಖಳನ ಕೊಂದೆ

ಅಪರಿಮಿತ ಬಲಭೀಮ ಪ್ರೇಮ 4

ಮಿಥ್ಯಾವಾದದ ಭಾಷ್ಯಕೆ | ಸುe್ಞÁನಿಗಳ್

ಅತ್ಯಂತ ತಪಿಸುತಿರೆ

ವಾತಜನಕನಾಜ್ಞೆ ಪ್ರೀತಿಯಿಂದಲಿ ತಾಳಿ

ಘಾತುಕರ ಮತ ಮುರಿದ ಮಧ್ವನೆ

ಖ್ಯಾತಿ ಪಡೆದೆÀ ಸಿದ್ಧಾಂತ ಸ್ಥಾಪಿಸಿ 5

ಪ್ರಾಣಪಾನವ್ಯಾನ | ಉದಾನ ಸ

ಮಾನ ಭಾರತಿ ಕಾಂತನೆ

e್ಞÁನಿಗಳಿಗೆ ಪ್ರೀತ e್ಞÁನ ಭಕ್ತಿಪ್ರದಾತ

ದೀನಜನ ಮಂದಾರ ಕಾಯೊ

ದೀನಳಾಗಿಹೆ ಕೈಯ ಮುಗಿವೆ 6

ನೋಯಲಾರೆನೊ ಭವದಿ | ಬೇಗನೆ ತೋರೊ

ಧ್ಯೇಯ ವಸ್ತುವ ದಯದಿ

ವಾಯುನಂದನ ನಿನ್ನ ಪ್ರಿಯದಿಂ ನಂಬಿದೆ

ಜೀಯನೆ ಕೈ ಪಿಡಿಯೊ ಕಮಲ ದ-

ಳಾಯತಾಕ್ಷನ ಮನದಿ ತೋರಿ7

ಹರಣ ನಿನಗೊಪ್ಪಿಸಿದೆ | ಸುರವಂದಿತ

ಕರೆದು ಮನ್ನಿಸಿ ಕಾಪಾಡೊ

ಸಿರಿವರನನು ಹೃತ್ಸರಸಿಜದಲಿ ತೋರೊ

ಧರೆಯ ವಸ್ತುಗಳ್ ಮಮತೆ ತೊರೆಸು

ಹರಿಯ ನಾಮಾಮೃತವನುಣಿಸು 8

ಈ ಪರಿಬಂದೆ ಅನಿಲ | ನಿನ್ನೊಳು ವಾಸ

ಗೋಪಾಲಕೃಷ್ಣವಿಠ್ಠಲ

ಶ್ರೀಪತಿ ಕೃಪೆಯಿಂದ ನೀ ಪ್ರೀತನಾಗುತ

ಕೈಪಿಡಿದು ಸಂತೈಸು ಕರುಣದಿ

ಭಾಪುರೇ ಕದರುಂಡಲೀಶ 9

****