Showing posts with label ಇಂದಿರೇಶ ಭವ ಬಂಧನ ಬಿಡಿಸೊ ನಿನ್ನಾನಂದ mahanidhi vittala. Show all posts
Showing posts with label ಇಂದಿರೇಶ ಭವ ಬಂಧನ ಬಿಡಿಸೊ ನಿನ್ನಾನಂದ mahanidhi vittala. Show all posts

Wednesday 2 June 2021

ಇಂದಿರೇಶ ಭವ ಬಂಧನ ಬಿಡಿಸೊ ನಿನ್ನಾನಂದ ankita mahanidhi vittala



INDIRESHA BHAVA BANDHANA BIDISO NINNAANANDA

kruti by ಮಹಾನಿಧಿವಿಠಲರು mahanidhi vittalaru


ಇಂದಿರೇಶ ಭವಬಂಧನ ಬಿಡಿಸೊ ನಿನ್ನಾನಂದದೊಳಿರಿಸೊ ಪ


ಸಿಂಧುಶಯನ ಗೋವಿಂದ ಮುರಾರೆ ಅಚಿಂತ್ಯಾದ್ಭುತ ಶೌರೆ ಅ.ಪ.


ತಾಳಲಾರೆನೊ ಈ ತಾಪತ್ರಯ ಹರಿಸೊ ನಿನ್ನವನೆನಿಸೊ

ಕಾಲಕರ್ಮ ಕೋಟಲೆ ತಪ್ಪದಲ್ಲ ನೀ ಕೇಳೆನ್ನ ಸೊಲ್ಲ

ಲಾಲಿಸಿ ಎನ್ನನು ಕೇಳೋ ಎನ್ನ ವಾಕು

ಪಾಲಿಸಿ ಎನ್ನನು ಪಾರುಗಾಣಿಸೊ ಫಣಿರಾಜಶಯ್ಯ 1


ಪರಿಪರಿಯಿಂದಲಿ ಜನ್ಮ ಧರಿಸಿ ಕರೆದುತಂದೆ

ಈ ಜನ್ಮದಿ ನಿಂದೆ ಅರಿಯದವರಂತಿರುವರೆ

ಕಾಯುವ ಕರುಣಿ ನೀನು ದೀನಜನ ಸುರಧೇನು 2


ಅಂಬರ ಮಣಿಯಂತೆ ಬಿಂಬ ಮೊಳಗ್ಹೊಳೆದು

ದುರಂತ ಕರ್ಮಂಗಳ ಕಳೆದು

ಹಂಬಲಿಸುವ ಭಕುತರ ಬೆಂಬಲಿಗನೆನಿಸಿ

ಸಂತತ ನಿನ್ನ ಸುಖಸಿರಿಯ ಸುರಿಸೊ 3


ಬಿಂಬವು ಒಲಿದರೆ ಪ್ರತಿಬಿಂಬ ಫಲಸುವದುಂಟು

ಈ ಮಾತು ನಿಘಂಟು ಬಾಂಬೊಳೆ ಹರಿಸಿದ ಹರಿ ಮಾನಿಧಿವಿಠಲ

ನೀನಲ್ಲದಿನ್ಯಾರೋ ದೇವರ ದೇವಾ 4

***