Showing posts with label ಕೃಷ್ಣ ದ್ವೈಪಾಯನ ಗುರುರಾಜರ ಚರಣ ಕಮಲ karpara narahari. Show all posts
Showing posts with label ಕೃಷ್ಣ ದ್ವೈಪಾಯನ ಗುರುರಾಜರ ಚರಣ ಕಮಲ karpara narahari. Show all posts

Monday 2 August 2021

ಕೃಷ್ಣ ದ್ವೈಪಾಯನ ಗುರುರಾಜರ ಚರಣ ಕಮಲ ankita karpara narahari

ಕೃಷ್ಣದ್ವೈಪಾಯನ ಗುರುರಾಜರ ಚರಣ ಕಮಲಕಾನಮಿಪೆ

ಶಿರಬಾಗಿ ಬಿನ್ನೈಪೆ ಪ


ಧರೆಸುರ ಮಂಡಿತ ಸುರಪುರದಲಿ ಮದ್ಗುರು

ಯಳಿಮೇಲಾರ್ಯರಿಗೆ ವರದ ಶಿರಿ ಅ.ಪ


ವೇದವ್ಯಾಸರ ಕರಕಮಲಜರೆನಿಸಿ ವೇದೇಶರ ಮುಖದಿ

ವೇದಾಂತ ಸುಶಾಸ್ತ್ರ e್ಞÁನವ ಘಳಿಸಿ ಮೇದಿನಿಯೊಳು ಚರಿಸಿ

ವಾದಿವಾರಣ ಮೃಗಾಧಿಪರೆನಿಸುತ ಮೇದಿನಿ ಸುರರಿಗೆ

ಮೋದವ ಗರೆದ 1


ಧರಿಜಾರಮಣನ ಪದಪೂಜಿಸಿದಂಥ ಶ್ರೀ ವ್ಯಾಸರ ಮಂತ್ರ

ಧರಿಯೊಳು ಜಪಿಸಿದರಿವರೆ ಮಹಾಂತರೆನಿಸಿದರತಿ ಶಾಂತ

ವರುಣಿಸಲೊಶವೆ ಗುರುವರ ಮಠದಲಿ ಸುರಗಂಗೆಯು

ಬಂದಿರುವ ಮಹಿಮೆಯನು 2


ವರ ಭೀಮಾತಟದಿ ವಿರಾಜಿಸುವಂಥ ಕುಸುಮೂರುತಿ ಸಂಸ್ಥ

ಶರಣಾಗತ ಜನರಿಗೆ ಸಕಲಾಭೀಷ್ಟ ಗರಿಯುವ ಸುಸಮರ್ಥ

ಧರೆಯೊಳು ಮೆರೆಯುವ 'ಶಿರಿ ಕಾರ್ಪರ ನರಹರಿ' ಯ ನೊಲಿ-ಸಿರುವ ಪರಮ ಮಹಾತ್ಮ3

****