Showing posts with label ಅಂಜುವುದು ಸಲ್ಲ ಶ್ರೀಕಂಜನಾಭನ vijaya vittala suladi ಹರಿನಾಮ ಸುಳಾದಿ ANJUVUDU SALLA SRIKANJANAABHANA HARINAMA SULADI. Show all posts
Showing posts with label ಅಂಜುವುದು ಸಲ್ಲ ಶ್ರೀಕಂಜನಾಭನ vijaya vittala suladi ಹರಿನಾಮ ಸುಳಾದಿ ANJUVUDU SALLA SRIKANJANAABHANA HARINAMA SULADI. Show all posts

Sunday 8 December 2019

ಅಂಜುವುದು ಸಲ್ಲ ಶ್ರೀಕಂಜನಾಭನ vijaya vittala suladi ಹರಿನಾಮ ಸುಳಾದಿ ANJUVUDU SALLA SRIKANJANAABHANA HARINAMA SULADI

Audio by Mrs. Nandini Sripad

ಶ್ರೀ ವಿಜಯದಾಸಾರ್ಯ ವಿರಚಿತ

 ಸುಳಾದಿ 

ಕ್ಷುದ್ರದೇವತೆಗಳ ಪೂಜೆ ಮಾಡುವುದು ಬಿಟ್ಟು ಸರ್ವೋತ್ತಮನಾದ ಶ್ರೀಹರಿನಾಮ ನೆನಿಯುವುದು

ರಾಗ ಸಾವೇರಿ 

ಝಂಪಿತಾಳ 

ಅಂಜುವದು ಸಲ್ಲ ಶ್ರೀಕಂಜನಾಭನ ಪಾದ 
ಕಂಜವು ನಿನಗೊಜ್ರ ಪಂಜರವಾಗಿರಲು 
ಪುಂಜರ ಪಾಪಗಳು ನಿನ್ನಂಜಿಸ ಬಲ್ಲವೆ| 
ಕಂಜ ಬಾಂಧವನುದಿಸೆ ಮಂಜು ಎದರಿಸುವದೇ| 
ಯಂಜಲ ಮಾತನು ಕೇಳಿ ನಂಜಿ ನಂಜಾಡದಿರು | 
ಬಂಜೆ ಭಕುತಿಯ ಬಿಡು ಭುಂಜಿಸು ಪುಣ್ಯ ಸಮಿ- | 
ತಿಂಜಯ ನಾಮ ಶಿರಿ ವಿಜಯವಿಠ್ಠಲ ಗೆರಗು| 
ನಂಜ ಸುಧಾರಸವು ಅಂಜುಳಿವಿ ಮರುಳೆ ॥ 1 ॥

ಮಟ್ಟತಾಳ 

ಒಮ್ಮನದಲ್ಲಿರೊ ಒಮ್ಮನದಲ್ಲಿರೊ 
ರಮ್ಮೆಯರಸನು ಸುಮ್ಮನದಿಂದಲ್ಲಿ 
ನಮ್ಮನ್ನು ಪೊರೆವನು ಒಮ್ಮನದಲ್ಲಿರೊ| 
ರಮ್ಮೆಯರಸ ಪರಬೊಮ್ಮ ಬೊಮ್ಮನಯ್ಯಾ 
ತಿಮ್ಮ ವಿಜಯವಿಠ್ಠಲ ಮಹಾ ಮೂರುತಿ 
ಘಮ್ಮನದಿಂದಲಿ ಬಂದು ದುಮ್ಮನವ ಕಳೆವ ॥ 2 ॥

ಧ್ರುವತಾಳ 

ವಾರಿಧಿಯ ಮಥಿಸಲು ಘೋರ ವಿಷ ವುದುಭವಿಸಿ 
ಮಾರುತನುಂಡು ತೇಗಿದ ಕಾಣಿರೊ| 
ಮಾರರಿಪು ಧರಿಸಿ ರಘುವೀರನ್ನ ನಾಮದಿಂದ | 
ಜೀರಣಕ್ಕೆ ತಂದದ್ದು ಧಾರುಣಿ ಅರಿಯದೆ|
ನಾರಾಯಣನೆಂಬ ಸಾರ ನಾಮಾಮೃತವು| 
ಭಾರತೀಶನ ಕಾಯ್ದು ಆತನ ಸೇವಕನೆಂದು 
ಗೌರೀಶನ ಕಾಯಿತು ಗೌರದಿಂದ 
ಚಾರುವಾಕ ಮನವೆ ನಿನ್ನ ಕಾಯಿವದಿರದೆ 
ಶ್ರೀರತುನ ಗರ್ಭನು ವಿಜಯವಿಠ್ಠಲ ಬಂದು| 
ಬೇರರಸಿ ಶೀಳಿ ಸಂಸಾರವ ಪರಿವ ॥ 3 ॥

ರೂಪಕತಾಳ

ತುದಿ ನಾಲಿಗೆಯಿಂದ ಪದುಮನಾಭನ ನಾಮ| 
ತುದಿಯನ್ನಿತ್ತು ಸೇವಿಸಲು ಮಧುರಾಮೃತವಾಗಿ | 
ಕ್ಷುಧೆ ಬಾಧೆ ಹಿಂಗೋದು ಮದಗರ್ವ ಅಡಗೋದು 
ಇದೆ ಸವಿದು ಪದೋಪದಿಗೆ | 
ವಿದುರಾದಿ ಭಕುತರು ಪದವಿಯ ಸೇರಿದರು| 
ಯದುಶ್ರೇಷ್ಠ ವಿಜಯವಿಠ್ಠಲನ ಒಂದೇ ನಾಮ| 
ಹೃದಯದಲ್ಲಿರಿಸೆ ಅಘದ ಉಧದಿ ಬತ್ತುವದೂ ॥ 4 ॥

ತ್ರಿವಿಡಿತಾಳ 

ಮೀನನ ಮರಿಗೆ ಈಸು ಕಲಿಸುವರಾರು| 
ಮೀನಾಂಕಗೆ ಕಾಮ ತುಂಬಿ ಇತ್ತವರಾರು| 
ಆನಿಗೆ ಸೊಂಡಿಲ ತೂಗು ಯೆಂದವರಾರು| 
ಜ್ಞಾನಿಗೆ ಹರಿನಾಮ ತೋರಿ ಕೊಟ್ಟವರಾರು| 
ನೀನರಿದು ತಿಳಿದುಕೋ ನಿನಗೆ ಗುರುವಾದರೂ| 
ತಾನತಿ ಸೂಕ್ಷ್ಮ ಪೇಳುವನಲ್ಲದೆ| 
ಹೀನ ಜೀವವೆ ನಿನ್ನ ಧ್ಯಾನಕ್ಕೆ ಮನಬಂದು| 
ಪ್ರಾಣದ ವಿಜಯವಿಠ್ಠಲನ್ನ ಸೂಕ್ಷ್ಮಚರಣವ| 
ಕಾಣು ಕುಬುದ್ಧಿಗಳ ಮಾಣು ಗತಿಗೇಣು ॥ 5 ॥

ಅಟ್ಟತಾಳ

ಕ್ಷುದ್ರದೇವತೆ ಪೂಜೆ ಚಿರಕಾಲ ಮಾಡಲು | 
ಕದ್ದು ತಿಂದಂತೆಯಾಗುವುದು ಸಿದ್ಧ | 
ಛಿದ್ರ ಗೋಣಿಯಲ್ಲಿ ಉತ್ತಮ ಸರಕನ್ನು ತುಂಬೆ|
ಬಿದ್ದು ಪೋಗದಲೆ ಸೇರುವದೆ ತನ್ನ | 
ಉದ್ಧಟತನ ಬಿಡು ಉಚಿತ ಸಾಧನದಿಂದ | 
ಸಿದ್ಧ ಸಂಕಲ್ಪ ಶ್ರೀವಿಜಯವಿಠ್ಠಲನ್ನ | 
ಉದ್ದಿನಷ್ಟು ನೆನೆದು ಉದ್ಧಾರವಾಗೊ ॥ 6 ॥

ಆದಿತಾಳ

ಆವದಾದರು ಬಿಡು ಆವದಾದರು ಕೊಡು| 
ಆವದಾದರು ಕೂಡು ಆವದಾದರು ಇಡು| 
ಆವದಾದರು ಫೋಗೆ ಹವರಗಾಯಿತು 
ಈ ವಸ್ತ ಮರದರಿನ್ನು ಆವಲ್ಲಿ ದೊರಿಯದು| 
ದೇವೇಶ ವಿಜಯವಿಠ್ಠಲ ನಿನ್ನ| 
ಯಾವ ಜೀವಕ್ಕೆ ಮುಡಿ ಇಟ್ಟು ಕಾವದು ಜೋಕೇಲಿ ॥ 7 ॥

ಜತೆ

ಭಯಕೃದ್ಭಯನಾಶನ ನೀತನಿಲ್ಲ|ದೆ ಯಲ್ಲಿ
ದೈವ ಮತ್ತೊಂದಿಲ್ಲ ವಿಜಯವಿಠ್ಠಲನ್ನ ॥
**********

ಶ್ರೀವಿಜಯರಾಯರವಿರಚಿತಕ್ಷುದ್ರದೇವತೆಗಳುಪೂಜೆ ಮಾಡುವುದುಬಿಟ್ಟು ಸರ್ವೋತ್ತಮನಾದ ಶ್ರೀಹರಿ ನಾಮನೆನಿಯುವುದು

ರಾಗ- ಸಾವೇರಿ ಝಂಪಿತಾಳ 

ಅಂಜುವುದು ಸಲ್ಲ ಶ್ರೀಕಂಜನಾಭನ ಪಾದ ಕಂಜವು ನಿನಗೊಜ್ರ ಪಂಜರವಾಗಿರಲು ಪುರಜನ ಪಾಪಗಳು ನಿನ್ನಂಜಿಸ ಬಲ್ಲವೆ| ಕಂಜ  ಭಾಂಧವನನುಸರಿಸೆ ಮಂಜು ಎದರಿಸುವದೇ| ಯಂಜಲ ಮಾತನು( ಕೇಳೆ) ನಂಜಿ ನಂಜಾಡದಿರು | ಬಂಜೆ ಭಕುತಿಯ ಬಿಡು ಭುಂಜಿಸು ಪುಣ್ಯ ಸಮಿ| ತಿಂಜಯ ನಾಮ ಶಿರಿವಿಜಯ ವಿಠ್ಠಲಗೇರಗು| ನಂಜಸುಧಾರಸವು ಅಂಜುಳವಿ ಮರುಳೆ||೧||

 ಮಟ್ಟತಾಳ 

ಒಮ್ಮನದಲ್ಲಿರೊ ಒಮ್ಮನದಲ್ಲಿರೊ ರಂಮೆಯರಸನು ಸಮ್ಮನದಿಂದಲಿ ನಮ್ಮನ್ನು ಹೊರೆವನು ಒಮ್ಮನದಲ್ಲಿರೊ| ರಂಮೆಯರಸ ಪರಬೊಮ್ಮ  ಬೊಮ್ಮನಯ್ಯಾ ತಿಮ್ಮ ವಿಜಯ ವಿಠ್ಠಲ ಮಹ ಮೂರುತಿ ಘಮ್ಮನದಿಂದಲಿ ಬಂದು ದುಮ್ಮನವ ಕಳೆವ ||೨||

 ಧ್ರುವತಾಳ 

ವಾರಾಧಿಯ ಮಥಿಸಲು ಘೋರ ವಿಷ ವುದುಭವಿಸಿ ಮಾರುತನುಂಡು ತೇಗಿದ ಕಾಣಿರೊ| ಮಾರರಿಪು ಧರಿಸಿ ರಘುವೀರನ್ನ ನಾಮದಿಂದ | ಜೀರಣಕ್ಕೆ ತಂದದ್ದು ಧಾರುಣಿ ಅರಿಯದೆ|ನಾರಾಯಣನೆಂಬ ಸಾರನಾಮಾಮೃತವು| ಭಾರತೀಶನ ಕಾಯ್ದು ಆತನ ಸೇವಕನೆಂದು ಗೌರೀಶನ ಕಾಯಿತು ಗೌರದಿಂದ ಚಾರುವಾಕ ಮನವೆ ನಿನ್ನ ಕಾಯಿವದಿರದೆ  ಶ್ರೀರತುನ ಗರ್ಭನು ವಿಜಯ ವಿಠ್ಠಲ ಬಂದು| ಬೇರರಸಿ ಶೀಳಿ ಸಂಸಾರವ ಪರಿವ ||೩||

ರೂಪಕತಾಳ

ತುದಿ ನಾಲಿಗೆಯಿಂದ ಪದುಮನಾಭನ ನಾಮಾ| ತುದಿಯನ್ನಿತ್ತು ಸೇವಿಸಲು ಮಧುರಾಮೃತವಾಗಿ | ಕ್ಷುಧೆಭಾದೇ ಹಿಂಗೋದು ಮದಗರ್ವ ವಾದಗೋದು ಇದೆ ಸವಿದು ಪದೋಪದಿಗೆ | ವಿದುರಾದಿ ಭಕುತರು ಪದವಿಯ ಸೇರಿದರು| ಯದುಶ್ರೇಷ್ಠ ವಿಜಯ ವಿಠ್ಠಲನ ಒಂದೇನಾಮ| ಹೃದಯದಲ್ಲಿರಿಸೆಘದ| ಉಧದಿ ಬತ್ತುವುದೂ||೪||

ತ್ರಿವಿಡಿತಾಳ 

ಮೀನನ ಮರಿಗೆ ಈಸು ಕಲಿಸುವರಾರು| ಮೀನಾಂಕಕೆ ಕಾಮ 
ತುಂಬಿ ಇತ್ತವರಾರು|  ಆನಿಗೆ ಸೊಂಡಿಲ ತೂಗು ಯೆಂದವರಾರು| ಜ್ಞಾನಿಗೆ 
ಹರಿನಾಮ ತೋರಿ ಕೊಟ್ಟವರಾರು| ನೀನರಿದು ತಿಳಿದುಕೋ ನಿನಗೆ  
ಗುರುವಾದರೂ| ತಾನತಿಸೂಕ್ಷ್ಮ ಪೇಳುವನಲಲ್ಲದೆ| ಹೀನ ಜೀವವೆ ನಿನ್ನ ಧ್ಯಾನಕ್ಕೆ ಮನಬಂದು| ಪ್ರಾಣದ ವಿಜಯ ವಿಠ್ಠಲನ್ನ ಸೂಕ್ಷ್ಮಚರಣವ| ಕಾಣು  ಕುಬುದ್ಧಿಗಳಮಾಣು ಗತಿಗೇಣು||೫||

ಅಟ್ಟತಾಳ

ಕ್ಷುದ್ರದೇವತೆ ಪೂಜೆ ಚಿರಕಾಲ ಮಾಡಲು | ಕದ್ದು ತಿಂದಂತೆಯಾಗುವುದು ಸಿದ್ಧ | ಛಿದ್ರ ಗೋಣಿಯಲ್ಲಿ ಉತ್ತಮ ಸರಕನ್ನು ತುಂಬೆ|
ಬಿದ್ದು ಹೋಗದಲೆ ಸೇರುವುದೆ ತನ್ನ | ಉದ್ಧಟತನ ಬಿಡು ಉಚಿತ 
ಸಾಧನದಿಂದ | ಸಿದ್ಧ ಸಂಕಲ್ಪ ಶ್ರೀ ವಿಜಯ ವಿಠ್ಠಲನ್ನ| ಉದ್ದಿನಷ್ಟು ನೆನೆದು
ಉದ್ಧಾರವಾಗೊ||೬||

 ಆದಿತಾಳ

ಆವದಾದರು ಬಿಡು ಆವದಾದರು ಕೊಡು| ಆವದಾದರು ಕೂಡು ಆವದಾದರು ಇಡು| ಆವದಾದರು ಫೋಗೆ ಹವರಗಾಯಿತು ಈ ವಸ್ತ ಮರದರಿನ್ನು ಆವಲ್ಲಿ ದೊರಿಯದು| ದೇವೇಶ ವಿಜಯ ವಿಠ್ಠಲ ನಿನ್ನ| ಯಾವ ಜೀವಕ್ಕೆ ಮುಡಿ ಇಟ್ಟು| ಕಾವದು ಜೋಕೇಲಿ||೭||

 ಜತೆ

ಭಯಕೃದ್ಧಯನಾಶನ ನೀತನಿಲ್ಲ | 
ದೆ ಯಲ್ಲಿ ದೈವ ಮತ್ತೊಂದಿಲ್ಲ ವಿಜಯ ವಿಠ್ಠಲನ್ನ||೮||

ರಾಜಾರಾಂ, ಗುಂತಕಲ್ಲು.
*************