Showing posts with label ಕರುಣದಿ ಪಿಡಿಕೈಯ್ಯ ಸಿರಿ ಮನುಜಕೇಸರಿ ಧರಣಿ ಸುಮನಸಗೇಯ shyamasundara. Show all posts
Showing posts with label ಕರುಣದಿ ಪಿಡಿಕೈಯ್ಯ ಸಿರಿ ಮನುಜಕೇಸರಿ ಧರಣಿ ಸುಮನಸಗೇಯ shyamasundara. Show all posts

Wednesday 1 September 2021

ಕರುಣದಿ ಪಿಡಿಕೈಯ್ಯ ಸಿರಿ ಮನುಜಕೇಸರಿ ಧರಣಿ ಸುಮನಸಗೇಯ ankita shyamasundara

 ..

ಕರುಣದಿ ಪಿಡಿಕೈಯ್ಯ | ಸಿರಿ ಮನುಜಕೇಸರಿ

ಧರಣಿ ಸುಮನಸಗೇಯ | ಮೊರೆಹೊಕ್ಕೆ ನಿನ್ನನು

ತರಣಿ ಸನ್ನಿಭಗಾತ್ರ | ಕೀರಾಬ್ಧಿಶಯ್ಯ ಪ


ಸರಸಿಜಾನನ ನಜಕ ತವಪದ

ಮರೆದ ಪಾಮರನಾಗಿ ನಾ ಭವ

ಶರಧಿಯೊಳು ಬಿದ್ದು ಪರಿದು ಪೋಗುವೆ

ಎರಗರಿಪುಧ್ವಜನಾಗಿ ನೀ ಬಂದು

ಅಜಿತ ದೇವಕಿ ಸೂನು | ಸರ್ವೇಶ ರಾಘವ

ಭಜಕಜನ ಸುರಧೇನು | ಸ್ವರತ ಸುಖಮಯ

ಸುಜನ ವಾರಿಜ ಭಾನು ಖಳವನ ಕೃಶಾನು

ತ್ರಿಜಗ ಪೋಷಕ ಪರಮ ಸುಲಭ ನೀ

ನಿಜದಯದಿ ಹರಿಮದವ ಖಂಡ್ರಿಸಿ

ವೃಜದ ತುರುಗಳ ಕಾಯ್ದ ಸಜನುತ

ದ್ವಿಜಪ ಸುತೆ ಪತಿಧ್ವಜನ ಸುತನೆ 1


ಪತಿತ ಪಾವನ ರಂಗ | ಸಂತತದಿ ನಿನ್ನನು

ಸ್ತುತಿಪ ಸುಜನರ ಸಂಗ | ನೀನಿತ್ತು ಪಾಲಿಸು ದಿಜ

ತತಿ ಮಾತಂಕ ಮರಿಗಳಿಗೆ ಸಿಂಗ

ಸಿತ ತುರಂಗನ ರಥದಿ ಶೋಭಿಪ

ಅತುಳ ಮಹಿಮನ ಜನನಿ ಅನುಜನಿಗೆ

ಹಿತದಿ ಭ್ರಾತದಿ ಭೀತಿ ಬಿಡಿಸಿದ

ಶೃತಿಗೆ ನಿಲುಲದ ಚ್ಯುತ ವಿದೂರನೆ 2


ಸಾಮಗಾನ ವಿಲೋಲ ಸುರರಾಜ ಪೂಜಿತ

ಹೇಮಕಶ್ಯಪ ಕಾಲ | ಕರಿದನುಜ ಹರನುತ

ಸ್ವಾಮಿ ಶ್ರೀವನಮಾಲಧರ ಸುಗುಣಶೀಲ

ಕಾಮಪಿತ ಹಿಮಧಾಮ ವದನ ಸು

ಧಾಮಸಖ ಸುರಸ್ತೋಮ ವಂದಿತ

ಯಾಮಿನೀ ಚರವೈರಿ ವಾಮನ

ಶ್ರೀಮನೋಹರ ಶಾಮಸುಂದರ 3

***