Showing posts with label ಧನುರ್ಮಾಸದ ಸೇವೆಯ ನೋಡುವ ಬನ್ನಿ ಧನುರ್ಮಾಸದ ಸೇವೆಯ ಗೀತೆ venkatakrishna. Show all posts
Showing posts with label ಧನುರ್ಮಾಸದ ಸೇವೆಯ ನೋಡುವ ಬನ್ನಿ ಧನುರ್ಮಾಸದ ಸೇವೆಯ ಗೀತೆ venkatakrishna. Show all posts

Tuesday 1 June 2021

ಧನುರ್ಮಾಸದ ಸೇವೆಯ ನೋಡುವ ಬನ್ನಿ ಧನುರ್ಮಾಸದ ಸೇವೆಯ ಗೀತೆ ankita venkatakrishna

by yadugiriyamma  ankita ಶ್ರೀನಿವಾಸ ರಂಗ / venkatakrishna

ಧನುರ್ಮಾಸದ ಸೇವೆಯ ಗೀತೆ

ಧನುರ್ಮಾಸದ ಸೇವೆಯ ನೋಡುವ ಬನ್ನಿ

ದಾನವಾಂತಕ ರಂಗನ ಪ.


ಶ್ರೇಯೋನಿಧಿಗಳಿಗೆರಗಿ

ಶ್ರೀವೇದಾಂತ ಗುರುಗಳಿಗೆ ವಂದಿಸಿ

ಶ್ರೀ ಭಾಷ್ಯಕಾರ ಶಠಗೋಪರಿಗೆ ವಂದಿಸಿ

ಶ್ರೀರಂಗೋತ್ಸವವ ಸಂಕ್ಷೇಪದಿಂ ಪೇಳುವೆ 1

ಮಾರ್ಗಶಿರ ಮಾಸದಲಿ

ಮಹಾನುಭಾವ ಶ್ರೀರಂಗನಾಥನಿಗೆ

ಮಹದುತ್ಸವವನ್ನು ನಡೆಸಬೇಕೆನುತಲೆ

ಮಹಾಪುರುಷರು ಸಂಕಲ್ಪವ ಮಾಡಿದರು 2

ಕೇಶವ ಮಾಸದಲಿ ಎದ್ದು

ದಾಸರು ಮೂರನೆ ಜಾವದಲಿ

ಭೂಸುರರಿಗೆ ಎಚ್ಚರವಾಗಬೇಕೆಂದು ಬಾ

ರೀಸಿದರು ಭೇರಿ ದುಂದುಭಿ ವಾದ್ಯಗಳ 3

ಕನಕಿ ಸುಜೋತಿ ಹೇಮಾವತಿಯ

ಕಪಿಲೆ ಕಾವೇರಿ ತೀರ್ಥದಲಿ

ಸ್ನಾನವ ಮಾಡಿ ತೀರ್ಥವ ತಂದು ನೇಮದಿ

ನೀಲವರ್ಣನಿಗಭಿಷೇಕವ ಮಾಡಿದರು 4

ಛಳಿಗೆ ಕುಲಾವಿಯನಿಟ್ಟು

ಶಾಲುಗಳ ಹೊದಿಸಿ ನಳಿನನಾಭ ರಂಗಗೆ

ಪರಿಪರಿ ಪುಷ್ಪದ ಸರಗಳ ಧರಿಸಿಯೆ

ಶ್ರೀಮೂರ್ತಿಯ ಸರವನು ಧರಿಸಿದರಾಗ 5

ತಾಪಹರವಾದ ಸೂಕ್ಷ್ಮದ ದಿವ್ಯ

ಧೂಪವನು ಬೆಳಗಿದರು

ವ್ಯಾಪಿಸುವ ತಿಮಿರವ ಪರಿಹರಿಸಿ ರಂಜಿಸುವ

ದೀಪವ ಬೆಳಗಿದರು ಶ್ರೀಪತಿಗೆ 6

ಋಗ್ವೇದ ಯಜುರ್ವೇದವು ಸಾ

ಮವೇದ ಅಥರ್ವಣವೇದಂಗಳು

ದ್ರಾವಿಡವೇದ ಪುರಾಣಶಾಸ್ತ್ರಗಳನು ಬಾಗಿ

ಲಾ ವೊಳಗೆ ನಿಂತು ಭಕ್ತರು ಪೇಳಿದರು 7

ವಾರಾಂಗನೆಯರಾಗ ವೈಯ್ಯಾರದಿಂದ

ಆರತಿಗಳನೆ ತಂದು

ವಾರಿಜನಾಭಗೆ ನೇಮದಿಂದಲೆ ಗುಂ

ಭಾರತಿಗಳನೆತ್ತಿ ನೈವೇದ್ಯವ ತಂದರು 8

ಮುದ್ಗಾನ್ನ ಘಮಘಮಿಸುವ ಪಾಯಸ

ದಧ್ಯೋದನಗಳು ಪರಿಪರಿ ಶಾಕಪಾಕವು

ಆ ದಿವ್ಯ ಭಕ್ಷ್ಯನೈವೇದ್ಯವ ಪರಮಪುರುಷಗೆ

[ಆದ್ಯರು] ಆರೋಗಣೆ ಮಾಡಿದರು 9

ಕಳಿಯಡಿಕೆ ಬಿಳಿಯೆಲೆಯು ಕರ್ಪೂರದ

ಗುಳಿಗೆಗಳನ್ನೆ ತಂದು ಸೃಷ್ಟಿಗೀಶ್ವರಗೆ

ಒಳ್ಳೆ ತಾಂಬೂಲವ ಸಮರ್ಪಿಸಿ

ಹಿಟ್ಟಿನ ಮಂಗಳಾರತಿಯನೆತ್ತಿದರಾಗ 10

ಆ ಮಹಾ ಶ್ರೀನಿವಾಸ ರಂಗ ನೈವೇದ್ಯವ

ಶ್ರೀಮಧ್ರಾಮಾನುಜರ ಮತದಿ

ನೇಮದಲಿ ವಿನಿಯೋಗವ ಮಾಡಲು ಪಾವ

ನಾಮಾದೆವೆಂದೆನುತ ಪೋದರು ಎಲ್ಲ 11

*****

 ಧನುಮಾ೯ಸದ ಸೇವೆಯ ನೋಡುವ ಬನ್ನಿ

   .  ದಾನವಾಂತಕ ರಂಗನ..ಪ☘️

     🌷ಶ್ರೇಯೋನಿಧಿಗಳಿಗೆರಗಿ

ಶ್ರೀ ವೇದಾಂತ ಗುರುಗಳಿಗೆ ವಂದಿಸಿ

ಶ್ರೀ ಭಾಷ್ಯಕಾರ ಶಠಗೋಪರಿಗೆ ವಂದಿಸಿ

ಶ್ರೀರಂಗೋತ್ಸವವ ಸಂಕ್ಷೇಪದಿಂ ಪೇಳುವೆ..1☘️

   .  🌷ಮಾಗ೯ಶಿರ ಮಾಸದಲಿ

ಮಹಾನುಭಾವ ಶ್ರೀರಂಗನಾಥನಿಗೆ

ಮಹದುತ್ಸವವನ್ನು ನಡೆಸ ಬೇಕೆನುತಲೆ

ಮಹಾ ಪುರುಷರು ಸಂಕಲ್ಪವ ಮಾಡಿದರು..2☘️

🌷ಕೇಶವ ಮಾಸದಲಿ ಎದ್ದು

  .  ದಾಸರು ಮೂರನೆ ಜಾವದಲಿ

ಭೂಸುರರಿಗೆ ಎಚ್ಚರವಾಗಬೇಕೆಂದು 

ಬಾರೀಸಿದರು ಭೇರಿ ದುಂದುಭಿ ವಾದ್ಯಗಳ..3☘️

🌷ಕನಕಿ ಸುಜೋತಿ ಹೇಮಾವತಿಯ

    ಕಪಿಲೆ ಕಾವೇರಿ ತೀಥ೯ದಲಿ

ಸ್ನಾನವ ಮಾಡಿ ತೀಥ೯ವ ತಂದು ನೇಮದಿ

ನೀಲವಣ೯ನಿಗಭಿಷೇಕವ ಮಾಡಿದರು..4☘️

      🌷ಛಳಿಗೆ ಕುಲಾವಿಯನಿಟ್ಟು

ಶಾಲುಗಳ ಹೊದಿಸಿ ನಳಿನನಾಭ ರಂಗಗೆ

ಪರಿಪರಿ ಪುಷ್ಪದ ಸರಗಳ ಧರಿಸಿಯೆ

ಶ್ರೀ ಮೂತಿ೯ಯ ಸರವನು ಧರಿಸಿದರಾಗ..5☘️

🌷ತಾಪಹರವಾದ ಸೂಕ್ಷ್ಮದ ದಿವ್ಯ

     ಧೂಪವನು ಬೆಳಗಿದರು

ವ್ಯಾಸಿಸುವ ತಿಮಿರವ ಪರಿಹರಿಸಿ ರಂಜಿಸುವ

ದೀಪವ ಬೆಳಗಿದರು ಶ್ರೀಪತಿಗೆ..6☘️

🌷ಋಗ್ವೇದ ಯಜುವೇ೯ದವು

ಸಾಮವೇದ ಅಥವ೯ಣ ವೇದಂಗಳು

ದ್ರಾವಿಡವೇದ ಪುರಾಣ ಶಾಸ್ತ್ರಗಳನು ಬಾಗಿ

ಲಾವೊಳಗೆ ನಿಂತು ಭಕ್ತರು ಪೇಳಿದರು..7☘️

🌷ವಾರಾಂಗನೆಯರಾಗ ವೈಯಾರದಿಂದ

  .   ..ಆರತಿಗಳನೆ ತಂದು

ವಾರಿಜನಾಭಗೆ ನೇಮದಿಂದಲೆ ಗುಂ

ಭಾರತಿಗಳನೆತ್ತಿ ನೈವೇದ್ಯವ ತಂದರು..8☘️

🌷ಮುದ್ಗಾನ್ನ ಘಮ ಘಮಿಸುವ ಪಾಯಸ

ದಧ್ಯೋದನಗಳು ಪರಿಪರಿ ಶಾಕಪಾಕವು

ಆ ದಿವ್ಯ ಭಕ್ಷ್ಯ ನೈವೇದ್ಯವ ಪರಮ ಪುರುಷಗೆ

[ಆದ್ಯರು]ಆರೋಗಣೆ ಮಾಡಿದರು..9☘️

🌷ಕಳಿಯಡಿಕೆ ಬಿಳಿಯೆಲೆಯು ಕಪೂ೯ರದ

ಗುಳಿಗೆಗಳನ್ನೆ ತಂದು ಸೃಷ್ಟಿಗೀಶ್ವರಗೆ

ಒಳ್ಳೆ ತಾಂಬೂಲವ ಸಮಪಿ೯ಸಿ

ಹಿಟ್ಟಿನ ಮಂಗಳಾರತಿಯನೆತ್ತಿದರಾಗ..10☘️

🌷ಆಮಹಾ  ಶ್ರೀನಿವಾಸ ರಂಗ ನೈವೇದ್ಯವ

ಶ್ರೀಮಧ್ರಾಮಾನುಜರ ಮತದಿ

ನೇಮದಲಿ ವಿನಿಯೋಗವ ಮಾಡಲು ಪಾವ

ನಾಮದೆವೆಂದೆನುತ ಪೋದರು ಎಲ್ಲ..11

***