Showing posts with label ಈತನೇನೆ ಮುಖ್ಯ ಪ್ರಾಣದೇವರು ಖ್ಯಾತಿಯ ಪಡೆದ ರಾಮ ದೂತನು kalimardhanakrishna. Show all posts
Showing posts with label ಈತನೇನೆ ಮುಖ್ಯ ಪ್ರಾಣದೇವರು ಖ್ಯಾತಿಯ ಪಡೆದ ರಾಮ ದೂತನು kalimardhanakrishna. Show all posts

Monday 2 August 2021

ಈತನೇನೆ ಮುಖ್ಯ ಪ್ರಾಣದೇವರು ಖ್ಯಾತಿಯ ಪಡೆದ ರಾಮ ದೂತನು ankita kalimardhanakrishna

ಈತನೇನೆ ಮುಖ್ಯ ಪ್ರಾಣದೇವರು ಪ.


ಖ್ಯಾತಿಯ ಪಡೆದ ರಾಮ ದೂತನು ಅ.ಪ.


ಅಂಜನೆಯ ಕುಮಾರ ರಾಕ್ಷಸರ ಸಂಹಾರ

ಸಂಜೀವನವ ತಂದ ಧೀರ ಸಾಗರವ ದಾಟಿದ 1


ಕುಂತಿಯಾ ಕಂದ ಕೀಚಕನ ಕೊಂದ

ಸತಿಗೆ ಕುಸುಮವಾ ತಂದೆ ಲೋಕದೊಳಗೆ ಆನಂದ 2


ಮದ್ಯಗೇಹನಲಿ ಜನಿಸಿ ಪ್ರಖ್ಯಾತನೆನಿಸಿ

ಕಾಳೀಮರ್ಧನಕೃಷ್ಣನಲಿ ಮನಸಿಟ್ಟ ಯತಿಯೆ 3

****