Showing posts with label ತಂದೆ ಮುದ್ದುಮೋಹನವಿಠ್ಠಲ ಸಲಹಬೇಕಿವನ muddu mohana vittala tandemuddu mohana vittala dasa stutih. Show all posts
Showing posts with label ತಂದೆ ಮುದ್ದುಮೋಹನವಿಠ್ಠಲ ಸಲಹಬೇಕಿವನ muddu mohana vittala tandemuddu mohana vittala dasa stutih. Show all posts

Saturday 1 May 2021

ತಂದೆ ಮುದ್ದುಮೋಹನವಿಠ್ಠಲ ಸಲಹಬೇಕಿವನ ankita muddu mohana vittala tandemuddu mohana vittala dasa stutih

" ಶ್ರೀ ಮುದ್ದುಮೋಹನವಿಠ್ಠಲರು ತಮ್ಮ ಪಟ್ಟದ ಶಿಷ್ಯರಾದ ಶ್ರೀ ಸುಬ್ಬರಾಯ ದಾಸರಿಗೆ ನೀಡಿದ ಅಂಕಿತ ನಾಮ"  - " ಶ್ರೀ ತಂದೆ ಮುದ್ದುಮೋಹನ ವಿಠ್ಠಲ " 


ತಂದೆ ಮುದ್ದು ಮೋಹನ ವಿಠಲ ಸಲಹಬೇಕಿವನ ಪ


ಕಂದುಗೊರಳನ ಪ್ರಿಯನೆ ಅಭಿವಂದಿಪೆನೊ ಸತತ ಅ.ಪ


ಶೋಕನಾಶನ ವಿಗತ ಶೋಕನಯ್ಯ ನೀ ವೇಗ

ವಾಕ್ಕು ಮೊದಲಾದ ಸರ್ವೇಂದ್ರಿಯಗಳಲಿ ನಿಂತು

ಲೋಕದೊಳಗೆ ಇವಗೆ ಬೇಕಾದ ವರಗಳನಿತ್ತು

ಲೌಕಿಕ ಮಾರ್ಗವನೆ ಬಿಡಿಸೊ ನಾಕಜನ ಪಿತನೆ 1


ಜ್ಞಾನ ಭಕ್ತಿ ವೈರಾಗ್ಯಗಳನೆಲ್ಲವೂ ಇತ್ತು

ಜ್ಞಾನಿಗಳ ಸಹವಾಸದೊಳಗೆ ರತಿಯನೆ ಕೊಟ್ಟು

ಹಾನಿ ವೃದ್ಧಿಗಳು ಏನೇನು ಬಂದರೂ

ಆನಂದವನೆ ಕೊಟ್ಟು ರಕ್ಷಿಸೊ ನರಹರೇ 2


ಕಾಮ ಕ್ರೋಧ ಮದ ಮತ್ಸರಗಳ ಕಡಿದು

ನಾಮೋಚ್ಚಾರಣೆ ಎಂಬ ವಜ್ರಕವಚವನೆ ತೊಡಿಸಿ

ತಾಮರಸವಂದ್ಯ ಶಿರಿ ಮುದ್ದುಮೋಹನವಿಠಲ

ಕಾಮಿತಾರ್ಥವ ಕೊಡೊ ಹೃತ್ಪದ್ಮದೊಳಗೆ ಪೊಳೆದು 3

***


ರಾಗ : ಕಾಂಬೋಧಿ ತಾಳ : ಝಂಪೆ 


ತಂದೆ ಮುದ್ದುಮೋಹನವಿಠ್ಠಲ 

ಸಲಹಬೇಕಿವನ ।। ಪಲ್ಲವಿ ।। 


ಕಂದುಗೊರಳ ಪ್ರಿಯನೆ 

ಅಭಿವಂದಿಪೆನು ಸತತ ।। ಅ. ಪ ।। 


ಶೋಕನಾಶನ ವಿಗತ 

ಶೋಕನಯ್ಯ ನೀ ವೇಗ ।

ವಾಕ್ಕು ಮೊದಲಾದ 

ಸರ್ವೇಂದ್ರಿಯಗಳಲ್ಲಿ ನಿಂತು ।

ಲೋಕದೊಳಗೇ ಇವಗೆ 

ಬೇಕಾದ ವರಗಳನಿತ್ತು ।

ಲೌಕಿಕ ಮಾರ್ಗವ ಬಿಡಿಸೊ 

ನಾಕಜಪಿತನೇ ।। ಚರಣ ।। 


ಜ್ಞಾನ ಭಕುತಿ ವೈರಾಗ್ಯ-

ಗಳೆಲ್ಲವೂ ಇತ್ತು ।

ಜ್ಞಾನಿಗಳ ಸಹವಾಸದೊಳಗೆ 

ರತಿಯನೇ ಕೊಟ್ಟು ।

ಹಾನಿ ವೃದ್ಧಿಗಳು 

ಏನೇನು ಬಂದರೂ ।

ಆನಂದವನೇ ಕೊಟ್ಟು 

ರಕ್ಷಿಸೋ ನರಹರೇ ।। ಚರಣ ।। 


ಕಾಮ ಕ್ರೋಧ ಮದ-

ಮತ್ಸರಗಳ ಕಡಿದು ।

ನಾಮೋಚ್ಛಾರಣೆಯೆಂಬ 

ವಜ್ರ ಕವಚವನೆ ತೊಡಿಸಿ ।

ತಾಮರಸ ವಂದ್ಯ ಶಿರಿ 

ಮುದ್ದುಮೋಹನವಿಠ್ಠಲ ।

ಕಾಮಿತಾರ್ಥವ ಕೊಡೋ 

ಹೃತ್ಪದ್ಮದೊಳಗೆ ಪೊಳೆದು ।। ಚರಣ ।। 

****