Showing posts with label ಯಾರಿಗೆ ಯಾರುಂಟು ಎರವಿನ ಸಂಸಾರ ನೀರ ಮೇಲಣ purandara vittala YAARIGE YAARUNTU ERAVINA SAMSARA NEERA MELANA. Show all posts
Showing posts with label ಯಾರಿಗೆ ಯಾರುಂಟು ಎರವಿನ ಸಂಸಾರ ನೀರ ಮೇಲಣ purandara vittala YAARIGE YAARUNTU ERAVINA SAMSARA NEERA MELANA. Show all posts

Wednesday, 15 December 2021

ಯಾರಿಗೆ ಯಾರುಂಟು ಎರವಿನ ಸಂಸಾರ ನೀರ ಮೇಲಣ purandara vittala YAARIGE YAARUNTU ERAVINA SAMSARA NEERA MELANA

RAGA GOURIMANOHARI   TALA KHANDACHAPU


ಯಾರಿಗೆ ಯಾರುಂಟು ಎರವಿನ ಸಂಸಾರ
ನೀರ ಮೇಲಣ ಗುಳ್ಳೆ ನಿಜವಲ್ಲ ಹರಿಯೇ || ಪಲ್ಲವಿ ||

ಬಾಯಾರಿತು ಎಂದು ಬಾವಿನೀರಿಗೆ ಪೋದೆ
ಬಾವಿಲಿ ಜಲ ಬತ್ತಿ ಬರಿದಾಯ್ತು ಹರಿಯೆ || ೧ ||

ಬಿಸಿಲು ಗಾಳಿಗಾಗಿ ಮರದ ನೆರಳಿಗೆ ಪೋದೆ
ಮರ ಬಗ್ಗಿ ಶಿರದ ಮೇಲೊರಗಿತೋ ಹರಿಯೆ || ೨ ||

ಅಡವಿಯೊಳ್ಮನೆ ಮಾಡಿ ಗಿಡಕೆ ತೊಟ್ಟಿಲು ಕಟ್ಟಿ
ತೊಟ್ಟಿಲಿನ ಶಿಶು ಮಾಯವಾಯಿತು ಹರಿಯೆ || ೩ ||

ತಂದೆ ಶ್ರೀ ಪುರಂದರವಿಠಲ ನಾರಾಯಣ
ನಾ ಸಾಯೋ ಹೊತ್ತಿಗೆ ನೀ ಕಾಯೋ ಹರಿಯೆ || ೪ ||
***

ರಾಗ ಬಿಲಹರಿ/ಅಟ್ಟ ತಾಳ (raga, taala may differ in audio)

rendered by
shrI Ananda rAo, srIrangam
to aid learning the dAsara pada for beginners

Lyrics:

rAga: gOurimanOhari
tALa: kanTacApu

yArige yarunTu eravina samsAra | 
nIra mElaNa guLLe nijavalla hariye  ||

bAyAritu endu bAvi nIrige pOde
bAvili jalabatti baridAitu hariye ||
bisilu gALigAgi marada neraLige pOde
mara baggi shirada mEloragitu hariye || yArige ... ||
yArige yarunTu eravina samsAra ||

aDaviyoL mane mADi giDake toTTila kaTTe
toTTilina shishu mAyavAyitu hariye ||
tande shrI purandara viTThala nArAyaNa
nA sAyo hottige nI kAyo hariye || yArige ... ||
***

pallavi

yArige yAruNTu eravina samsAra nIra mElana guLLe nijavalla hariye

caraNam 1

bAyAridu endu bAvi nIrige pOde bAvili jalabatti baridAidu hariye

caraNam 2

bisilu gALigAgi marada neraLige pOde mara baggi sirada mEloragidu hariye

caraNam 3

aDaviyoL mane mADi giDake toTTila kaTTe toTTilina shishu mAyavAyitu hariye

caraNam 4

tande shrI purandara viTtala nArAyaNa nA sAyo hottige nI kAyo hariye
***
ಯಾರಿಗೆ ಯಾರುಂಟು ಎರವಿನ ಸಂಸಾರ .. 
ಶ್ರೀ ಪುರಂದರದಾಸರ ಕೃತಿ ... ಒಂದಿಷ್ಟು ಅರ್ಥ ..

ಹಣೆಬರಹ ಅಂತ ಒಂದಿದೆ. ನಮಗೆಷ್ಟು ಪ್ರಾಪ್ತಿ ಎಂದು ಆ ಭಗವಂತ ಗೀಚಿ ಕಳುಹಿಸಿದ್ದಾನೋ ಅದಕ್ಕಿಂತ ಒಂದು ದಮ್ಮಡಿಯೂ ಹೆಚ್ಚಿಗೆ ಸಿಗೋದಿಲ್ಲ. ಜೀವನದಲ್ಲಿ ಅದೇನೋ ಅಂದುಕೊಳ್ಳುತ್ತೇವೆ ಆದರೆ ಅವನ ಲೆಕ್ಕವೇ ಬೇರೆ. Man proposes god disposes ಎನ್ನುವರಲ್ಲಾ ಹಾಗೆ. ಹೆಚ್ಚಿನ ವೇಳೆಯಲ್ಲಿ ನಮ್ಮ ಲೆಕ್ಕ ಮತ್ತು ಅವನ ಲೆಕ್ಕ ಇಂದಿಗೂ ತಾಳೆಯೇ ಆಗೋದಿಲ್ಲ. ಹರಿಚಿತ್ತ ಸತ್ಯ ನರ ಚಿತ್ತಕ್ಕೆ ಬಂದದ್ದು ಲವಲೇಶ  ನಡೆಯೋದು.ಆದರೆ  ಭಗವಂತ ಎರಡು ದಾರಿ ತೋರಿಸಿದ್ದಾನೆ. ಒಂದು ಆಶೆ . ಇನ್ನೊಂದು ಪ್ರಯತ್ನ . ಈ ಎರಡನ್ನೂ ಹಿಡಿದು ಮನಷ್ಯ ತನ್ನ ಜೀವನದ ಆಯುಷ್ಯವನ್ನೇ ಕಳೆಯುತ್ತಾನೆ. 

ಸ್ವಲ್ಪ ಅರ್ಥ ನೋಡೋಣ ..

ಸಂಸಾರಕ್ಕೂ ನೀರ ಗುಳ್ಳೆಗೂ ಏನು ಸಂಬಂಧ? ಕೀರ್ತನೆಯಲ್ಲಿ ಇಡೀ ಜೀವನ , ಬರೀ ಹಾರಾಟ , ಕೂಗಾಟ , ಹೋರಾಟದ ಬದುಕನ್ನೇ ತೆರೆದಿದ್ದಾರೆ 
ಶ್ರೀ ಪುರಂದರದಾಸರು. 

ಯಾರಿಗೆ ಯಾರುಂಟು ಎರವಿನ ಸಂಸಾರ
ನೀರ ಮೇಲಣ ಗುಳ್ಳೆ ನಿಜವಲ್ಲ ಹರಿಯೇ || ಪಲ್ಲವಿ ||

ಇಲ್ಲಿ ಎರವಿನ ಅಂದರೆ ಸಾಲವಾಗಿ ತರೋದು ಅಂತ. ಅಂದರೆ ಎಲ್ಲಾರೂ ಋಣದಿಂದ ಭೂಮಿಗೆ ಬಂದವರು. ಮತ್ತೆ ಆ ಸಾಲವನ್ನು ಹಿಂದಿರುಗಿಸಲೇಬೇಕು. ನಾವು ವಾಪಸ್ ಹೋಗಲೇಬೇಕು.ಯಾರಿಗೆ ಯಾರೂ ಇಲ್ಲ. ಎಲ್ಲರದ್ದೂ ಅವರವರದ್ದೇ ಜೀವನ ಮತ್ತು ವಿಧಾನ. ಇದೊಂದು ಎರವಿನ ಸಂಸಾರ. ನಮ್ಮದೇ ಸಂಸಾರ . ಜೀವನವಿಡೀ ಗಂಧದ ರೀತಿ ಅಮೂಲ್ಯವಾದ ಆಯುಷ್ಯವನ್ನು ಕಳೆಯುತ್ತೇವೆ . ನಮ್ಮದೇ ಒಡಹುಟ್ಟಿ ದವರು  ಆದರೆ ನಮ್ಮವರಲ್ಲ. ನೋಡಿ .. ನೀರಿನಿಂದಲೇ ಆ ನೀರಣ ಮೇಲಣ ಗುಳ್ಳೆಯೂ ರೂಪ ತಾಳೋದು. ಆ ಗುಳ್ಳೆಯೂ ಆ ನೀರಿನ ಒಂದು ರೂಪ ಎಂದು ಹೇಳಿದರೂ ಅಡ್ಡಿಯಿಲ್ಲ. ಆದರೆ ಆ ಗುಳ್ಳೆಗೆ ಆ ನೀರು ಆಶ್ರಯದಾತನಲ್ಲ. ಒಂದಷ್ಟು ಹೊತ್ತು ತನ್ನ ಮೇಲೆ ಕೂತು ಮೆರೆಸುತ್ತದೆ ನಿಜ ಆದರೆ ಅದೇ ಶಾಶ್ವತವಲ್ಲ. ಆ ನೀರು ತನ್ನ ಕೆಲಸ ತಾನು ಮಾಡಿಕೊಂಡು ಸಾಗುತ್ತದೆ. ಆ ಗುಳ್ಳೆ ರೂಪ ಪಡೆಯುತ್ತದೆ, ಪಟ್ ಎಂದು ಒಡೆಯುತ್ತದೆ, ಮತ್ತೊಂದು ಮೂಡುತ್ತದೆ ಹೀಗೇ ಇರೋದು ಜೀವನ. ಈ ಜಗತ್ತನ್ನು ಸೃಜಿಸಿ, ನಮ್ಮನ್ನು ಇಲ್ಲಿ ಮಾಡಿ ತಾನೂ ಎಲ್ಲರೊಳಗೆ ಇದ್ದು, ಆ ಇರವಿಕೆಯ ಜ್ಞಾನವನ್ನು ನಮ್ಮಿಂದ ಮರೆಮಾಚಲು ಒಂದು ಮಾಯೆ ಯಂಬ ಪರದೆಯನ್ನು ನಮ್ಮ ಜ್ಞಾನದ ಮೇಲೆ ಕವಿಸಿ, ನಮ್ಮ ಮನಸ್ಸು ಬುದ್ಧಿಗಳು ಆ ಪರಮ ವಸ್ತುವಿನಿಂದ ಅನ್ಯ ವಸ್ತುಗಳ ಮೇಲೆ ಮೋಹಗೊಳ್ಳು ವಂತೆ ಆ ವಸ್ತುಗಳನ್ನೂ ಮಾಡಿ ಒಂದು ವಿಚಿತ್ರ ಪರಿಸ್ಥಿತಿ ನಿರ್ಮಿಸಿದ್ದಾನೆ ಆ ಪರಮಾತ್ಮ. ಆ ಪರದೆಯು ತೆಳುವಾಗಿದ್ದರೂ ಕಬ್ಬಿಣದಷ್ಟು ಗಟ್ಟಿ. ಆ ಕಡೆ ಆ ಪರಮಾತ್ಮನ ಇರವು ಕಾಣುತ್ತಿದ್ದರೂ ಆ ಪರದೆಯನ್ನು ಸೀಳಿ ಆ ಬದಿಗೆ ಹೋಗಲಾರದಂತೆ ಈ ಜಗತ್ತಿನ ಮೋಹದ ಮಾಯೆಯ ಸೆಳೆತದಲ್ಲಿ ಸಿಕ್ಕಿಬಿಟ್ಟಿ ದ್ದಾನೆ ಈ ಮನುಷ್ಯ ಪ್ರಾಣಿ. ಜ್ಞಾನವಿರುವ ಇವನ ಗತಿಯೇ ಹೀಗಿದ್ದರೆ ಪಾಪ ಜ್ಞಾನವಿಲ್ಲದ ಪ್ರಾಣಿಗಳು, ಪಶು ಪಕ್ಷಿ ಮತ್ತು ಕೀಟ ಇತ್ಯಾದಿಗಳ ಗತಿಯೇನು. ಮತ್ತೆ ನಮ್ಮ ಕರ್ಮಾನು ಸಾರ ಎಲ್ಲೋ ಹುಟ್ಟುತ್ತೇವೆ . ಬೆಳೆಯುತ್ತೇವೆ . ನಾವು ಋಣ ತೀರಿಸ ಬೇಕಾದವರ ಜೊತೆ ಸಂಬಂಧ ಕಲ್ಪಿಸುತ್ತಾನೆ . ಅಭಿಮಾನದ ಸಂಕೋಲೆಯನ್ನು ಬಿಗಿಯುತ್ತಾನೆ . ಸಾವಿರ ವರುಷ ಹೀಗೆ ಇರುತ್ತೇವೆ ಅಂತ ಮನೆ ಮಟ ಮದುವೆ ಮಕ್ಕಳು ಮೊಮ್ಮ ಕ್ಕಳು ಹೀಗೆ ನಡೆಯುತ್ತದೆ . ಆದರೆ ನಮ್ಮ ಸಮಯ ಮುಗಿಯಿತು ಅಂದಾಗ ಎಲ್ಲವನ್ನೂ ಬಿಡಿಸಿ ಕೊಂಡು ಕಾಲನ ದೂತರಿಗೆ ಒಪ್ಪಿಸುತ್ತಾನೆ . ನಾವಿಲ್ಲ ದಿದ್ದರೂ ಸಂಸಾರಗಳು ಮುಂದುವರಿಯುತ್ತೆ. ಇದೇ ಎರವಿನ ಸಂಸಾರ . ನಮ್ಮ ಆಚಾರ್ಯ ಮಧ್ವರು ಹೇಳಿದ ಹಾಗೆ ಜಗತ್ತು ಸತ್ಯ . ಅದು ಯಾರು ಇದ್ದರೂ ಇಲ್ಲದಿದ್ದರೂ ನಿರಂತರ ಸಾಗುತ್ತಲೇ ಇರುತ್ತದೆ .
(whatsapp)
***