Showing posts with label ಏಳಯ್ಯ ಗುರುವೆ ಬೆಳಗಾಯಿತು ಏಳಯ್ಯ ಗುರುರಾಯ gurujagannatha vittala. Show all posts
Showing posts with label ಏಳಯ್ಯ ಗುರುವೆ ಬೆಳಗಾಯಿತು ಏಳಯ್ಯ ಗುರುರಾಯ gurujagannatha vittala. Show all posts

Monday 6 September 2021

ಏಳಯ್ಯ ಗುರುವೆ ಬೆಳಗಾಯಿತು ಏಳಯ್ಯ ಗುರುರಾಯ ankita gurujagannatha vittala

 ರಾಗ: ಭೂಪಾಳಿ ತಾಳ: ಝಂಪೆ


ಏಳಯ್ಯ ಗುರುವೆ ಬೆಳಗಾಯಿತು

ಏಳಯ್ಯ ಗುರುರಾಯ ಏಳಯ್ಯ ಶುಭಕಾಯ

ಏಳು ಮಹರಾಯ ಏಳು ಎನ ಜೀಯಾ


ಶೀಲ ನಿನ್ನ ಭಕ್ತರು ಸಾಲು ಸಾಲಾಗಿ ನಿಂತಿಹರೋ ಅ.ಪ 


ಉದಯಾದ್ರಿ ಶೃಂಗದಲಿ ಉದಿಸಿದನು ಭಾಸ್ಕರನು

ಸದಮಲ ಬುಧರೆಲ್ಲ ಮುದದಿಂದಲಿ ಎದ್ದು

ನದಿಯ ಸ್ನಾನವ ಮಾಡಿ ಉದಕ ಪುಷ್ಪಗಳಿಂದ

ಸದನಕ್ಕೆ ತಾವ್ ಬಂದು ಪದುಮನಾಭನ ಭಜಿಸಿ 

ಪಾದೋದಕವನೆ ಧರಿಸಿ ಸದಯ ನಿನ್ನ ಪಾದ-

ಸಂದರುಶನಕೆ ಬಂದಿಹರೋ 1

ನಿತ್ಯ ಭಜಿಸುವ ಜನರೆಲ್ಲ ಹೊತ್ತು ಮೀರಿತು ಎಂದು

ಚಿತ್ತ ಶುದ್ಧಿಯಲಿಂದ ಉತ್ತಮಾರ್ಹಣಗಳು ತಮ್ಮ

ನೆತ್ತಿಯಿಂದ ಪೊತ್ತು ಸುತ್ತು ಸಂದಣಿಯಿಂದ

ಜತ್ತಾಗಿ ನಿಂತಿಹರು ಉತ್ತಮಾ ನಿನ್ನ ನಿದ್ರೆಯ

ಹೊತ್ತು ಮೀರಾಯ್ತು ತೊತ್ತಿಗರೆಲ್ಲರು ಪಾದ

ಒತ್ತಿ ಬೋಧಿಸುವರು ಚಿತ್ತಕ್ಕೆ ತಂದು ತ್ವರಿತದಿ ಏಳು 2

ವಿಮತಾದ್ರಿ ಕುಲಿಶನೆ ವಿಮಲಗಾತ್ರನೆ ಏಳು

ನಮಿಪ ಜನರಾರ್ಥ ದಾತ ದಿವಿಜದ್ರುಮನೆ

ಪ್ರೇಮವಾರಿಧಿ ಎಳು ತಾಮರಸಾಂಬಕನೆ ಏಳು ಶ್ರೀ

ರಾಮ ಪಾದ ಭೃಂಗನೆ ಏಳು ಗೋಮತಿ ಕುಮುದ

ಸೋಮ ಸಾಂದ್ರನೆ ಏಳು ಯಾಮ ಮೀರಿತು ವಿಶ್ವನಿಯಾಮಕ ದೂತನೇ

ಸಾಮಗಾಯನ ಲೋಲ ರಮಾವಲ್ಲಭನಪ್ರೀಯ ಗುರುರಾಜವರ್ಯ 3

ಮೌನಿಕುಲರನ್ನ ಮಾನ ನಿಧಿಯೇ ಎನ್ನ

ಬಿನ್ನಪವ ಕೇಳಯ್ಯ ಜೀಯಾ ನಿನ್ನ ಬೋಧಿಪ-

ಕನ್ಯಜನರುಂಟೆ ನಿನ್ನಿಂದ ನೀ ಚನ್ನಾಗಿ ಏಳೊ

ಮುನÀ್ನ ಮಹ ಕಾರ್ಯಂಗಳು ಘನ್ನವಾಗಿರುತಿಹವು

ನಿನ್ಹೊರತು ಇನ್ನಾರು ಮಾಳ್ಪರು ಎನ್ನ ನುಡಿ ಈಗ 

ಚನ್ನಾಗಿ ಮನದಿ ತಂದು ಮನ್ನಿಸಿ ಪೊರೆಯೊ ಧೊರೆಯೆ 4

ದಾತ ಈ ಜನಜಾತಿ ಸಾಕÀಲಾರದೆ ಸೋತು ಮಲಗಿದೆಯಾ 

ಪಾತಕಾಂಬುಧಿ ಪೋತನೆ ಮಾತರಿಶ್ವನ ತಾತ ಸೀತಾನಾಥನ ಪಾದ 

ಪಾಥ ಭವ ಯುಗ್ಮದಲಿ ಸಂಜಾತವಾಗಿಹ ಸುಧಾ- 

ಪೀತ ಕಾರಣ ಮದ ಸಂಭೂತದಿಂ ಮಲಗಿದೆಯಾ 

ಭೂತನಾಥನ ಗುರುಜಗನ್ನಾಥವಿಠಲನ 

ದೂತ ನಾನೆಂಬ ಗರುವಿಂದ ಮಲಗಿದೆಯಾ 5

***