Showing posts with label ರಂಗಯ್ಯನ ನೋಡಿರೈ ಕೌತಾಳದ ಶ್ರೀ ರಂಗಯ್ಯನ ಪಾಡಿರೈ lakumeesha kautala rangaiah stutih. Show all posts
Showing posts with label ರಂಗಯ್ಯನ ನೋಡಿರೈ ಕೌತಾಳದ ಶ್ರೀ ರಂಗಯ್ಯನ ಪಾಡಿರೈ lakumeesha kautala rangaiah stutih. Show all posts

Friday 27 December 2019

ರಂಗಯ್ಯನ ನೋಡಿರೈ ಕೌತಾಳದ ಶ್ರೀ ರಂಗಯ್ಯನ ಪಾಡಿರೈ lakumeesha kautala rangaiah stutih

ರಂಗಯ್ಯನ ನೋಡಿರೈ - ಕೌತಾಳದ ಶ್ರೀ *।
ರಂಗಯ್ಯನ ಪಾಡಿರೈ - ಬೃಂದಾವನದ ಶ್ರೀ ।। ಪಲ್ಲವಿ ।।

ಇಂಗಿತಜ್ಞರ ಸಂಗ ಪಾಲಿಸಿ । ಭಂಗ ಬಡಿಸುವ 
ಭವ ಭಯಂಗಳ । ಮಂಗಳ ಕುಲ 
ತಿಲಕಾಂಗನೊಳು ನಮ್ಮ । ರಂಗನಂಘ್ರಿಯ 
ನೋಡಿ ನಲಿದಾ ।। ಅ ಪ ।।

ನಂಬಿ ಭಜಿಸುವರಿಷ್ಟ  ಅನುಗಾಲ ಬಿಡದೆ *
ತುಂಬಿ ಕೊಡುವ ಸತ್ಯನಿಷ್ಠ ।
ಅಂಬಣ್ಣಾರ್ಯರ ಸತಿಯು ।।
ಲಕ್ಷ್ಮಾಂಬೆಯರ ಗರ್ಭದಿ ಜನಿಸಿ ಜಗದೊಳು ।
ಹಂಬಲ ಬಿಟ್ಟಿಲ್ಲ ವಿಷಯದಿ । 
ಅಂಬುಜಾಕ್ಷನ ಜಪಿಸಿ ಒಲಿಸಿದ ।। ಚರಣ ।।

ಚಿಕ್ಕ ಬಾಲಕ ತಾನಿರಲು । ಉಪನೀತ ಮಾಡೆ ।
*ಪಕ್ಕ ಊರಿಗೆ ಪೋಗುತಿರಲೂ ।
ಫಕ್ಕನೆ ಕಾಲ್ಗೆಜ್ಜೆ ಧ್ವನಿಗೈದು ।।
ಠಕ್ಕು ಶೂದ್ರನ ತೆರದಿ ಬೆನ್ಹತ್ತಿ।*
ಠಕ್ಕ ಸಾರಿಯೆ *।
ರಂಗನೊಳು ತಾನಿಕ್ಕೆ ಬೀಜಾಕ್ಷರದಿ ನಲಿದಾ ।। |||ಚರಣ ।।

ಹುಚ್ಚ ರಂಗನು  ಇವನೆಂದು  ತಂದಿ ತಾಯಿ ನೊಂದು ।ಮೆಚ್ಚಿ ತಿರುಮಲೆಗೆ ಬಂದು *।
ಸ್ವಚ್ಛ ಭಕುತಿಲಿ ಭಜಿಸಿ ಸೇವಿಸೆ ।।
ಅಚ್ಯುತನು ತಾನೆಂದ ರಂಗಗೆ ।
ಮೆಚ್ಚಿ ನಿನ್ನಲ್ಲಿ ನಾನಿರೆ । ಉತ್ಸವಕೆ ಮತ್ತೇಕೆ 
ಬಂದ ಎಂದ ।। ಚರಣ ।।

ಚಿರುತಾ ಪಳ್ಳಿಯ ಜನರು ಪ್ರಾರ್ಥಿಸಲು 
ಭಾವಿಯೊಳ್ ।ತರಿಸಿ ಕುಡಿಯುವ 
ತುಂಬಾ ನೀರು ।ಸ್ಮರಿಸೆ* ಬ್ರಹ್ಮೋತ್ಸವವ ।।
ತಾಯಿಗೆ ಕರೆದು ಮಾಳಿಗೆ ಮೇಲೆ ತೋರಿಸಿ ।
ಭರದಿ ಕಾಶೀ ಯಾತ್ರೆಯೊಳು ಲಿಂಗ ।
ದೊರಕೆ ಗಂಗೆಯೊಳ್ ಮುದದೀ ತಂದಾ ।। ಚರಣ ।।

ಶ್ರೀಶೈಲ ಯಾತ್ರೆಯ ಮಾಡಿ ನವಾಬ 
ಗುರು ತಂದ ।ಅಶುಚಿ ಮಾಂಸ ಫಲವ ಮಾಡಿ ।
ಅಸುರಹರ ಲಕುಮೀಶನ ಕೇಶವ ।।
ನಿಶಿಯ ಸ್ವಪ್ನದಿ ಪೇಳೆ ತನ್ನ ಮೂರ್ತಿ ।
ಅಸಮ ಬಾಳೇ ಕೊಳದಿ ತರುತಲಿ ।
ಎಸೆವ ಕೌತಾಳದಲಿ ಸ್ಥಿರವಿಟ್ಟ ।। ಚರಣ ।।
*******

ರಂಗಯ್ಯನ ನೋಡಿರೈ - ಕೌತಾಳದ ಶ್ರೀ ।
ರಂಗಯ್ಯನ ಪಾಡಿರೈ - ಬೃಂದಾವನದ ಶ್ರೀ ।। ಪಲ್ಲವಿ ।।

ಇಂಗಿತಜ್ಞರ ಸಂಗ ಪಾಲಿಸಿ । ಭಂಗ ಬಡಿಸುವ
ಭವ ಭಯಂಗಳ । ಮಂಗಳ ಕುಲ
ತಿಲಕಾಂಗನೊಳು ನಮ್ಮ । ರಂಗನಂಘ್ರಿಯ
ನೋಡಿ ನಲಿದಾ ।। ಅ ಪ ।।

ನಂಬಿ ಭಜಿಸುವರಿಷ್ಟ ಅನುಗಾಲ ಬಿಡದೆ ।
ತುಂಬಿ ಕೊಡುವ ಸತ್ಯನಿಷ್ಠ ।
ಅಂಬಣ್ಣಾರ್ಯರ ಸತಿಯು ।।
ಲಕ್ಷ್ಮಾಂಬೆಯರ ಗರ್ಭದಿ ಜನಿಸಿ ಜಗದೊಳು ।
ಹಂಬಲ ಬಿಟ್ಟಿಲ್ಲ ವಿಷಯದಿ ।
ಅಂಬುಜಾಕ್ಷನ ಜಪಿಸಿ ಒಲಿಸಿದ ।। ಚರಣ ।।

ಚಿಕ್ಕ ಬಾಲಕ ತಾನಿರಲು । ಉಪನೀತ ಮಾಡೆ ।
ಪಕ್ಕ ಊರಿಗೆ ಪೋಗುತಿರಲೂ ।
ಫಕ್ಕನೆ ಕಾಲ್ಗೆಜ್ಜೆ ಧ್ವನಿಗೈದು ।।
ಠಕ್ಕು ಶೂದ್ರನ ತೆರದಿ ಬೆನ್ಹತ್ತಿ ।ಠಕ್ಕ ಸಾರಿಯೆ ।
ರಂಗನೊಳು ತಾನಿಕ್ಕೆ ಬೀಜಾಕ್ಷರದಿ ನಲಿದಾ ।। ಚರಣ ।।

ಹುಚ್ಚ ರಂಗನು ಇವನೆಂದು ತಂದಿ ತಾಯಿ ನೊಂದು ।ಮೆಚ್ಚಿ ತಿರುಮಲೆಗೆ ಬಂದು ।
ಸ್ವಚ್ಛ ಭಕುತಿಲಿ ಭಜಿಸಿ ಸೇವಿಸೆ ।।
ಅಚ್ಯುತನು ತಾನೆಂದ ರಂಗಗೆ ।
ಮೆಚ್ಚಿ ನಿನ್ನಲ್ಲಿ ನಾನಿರೆ । ಉತ್ಸವಕೆ ಮತ್ತೇಕೆ
ಬಂದ ಎಂದ ।। ಚರಣ ।।

ಚಿರುತಾ ಪಳ್ಳಿಯ ಜನರು ಪ್ರಾರ್ಥಿಸಲು
ಭಾವಿಯೊಳ್ ।ತರಿಸಿ ಕುಡಿಯುವ
ತುಂಬಾ ನೀರು ।ಸ್ಮರಿಸೆ ಬ್ರಹ್ಮೋತ್ಸವವ ।।
ತಾಯಿಗೆ ಕರೆದು ಮಾಳಿಗೆ ಮೇಲೆ ತೋರಿಸಿ ।
ಭರದಿ ಕಾಶೀ ಯಾತ್ರೆಯೊಳು ಲಿಂಗ ।
ದೊರಕೆ ಗಂಗೆಯೊಳ್ ಮುದದೀ ತಂದಾ ।। ಚರಣ ।।

ಶ್ರೀಶೈಲ ಯಾತ್ರೆಯ ಮಾಡಿ ನವಾಬ
ಗುರು ತಂದ ।ಅಶುಚಿ ಮಾಂಸ ಫಲವ ಮಾಡಿ ।
ಅಸುರಹರ ಲಕುಮೀಶನ ಕೇಶವ ।।
ನಿಶಿಯ ಸ್ವಪ್ನದಿ ಪೇಳೆ ತನ್ನ ಮೂರ್ತಿ ।
ಅಸಮ ಬಾಳೇ ಕೊಳದಿ ತರುತಲಿ ।
ಎಸೆವ ಕೌತಾಳದಲಿ ಸ್ಥಿರವಿಟ್ಟ ।। ಚರಣ ।।
*****