Showing posts with label ವಿಜಯದಾಸರ ಭಜನೆ ಮಾಡಿರೊ mohana vittala VIJAYADASARA BHAJANE MAADIRO VIJAYADASA STUTIH. Show all posts
Showing posts with label ವಿಜಯದಾಸರ ಭಜನೆ ಮಾಡಿರೊ mohana vittala VIJAYADASARA BHAJANE MAADIRO VIJAYADASA STUTIH. Show all posts

Thursday 26 December 2019

ವಿಜಯದಾಸರ ಭಜನೆ ಮಾಡಿರೊ ankita mohana vittala VIJAYADASARA BHAJANE MAADIRO VIJAYADASA STUTIH

 
 ರಾಗ ಶಿವರಂಜಿನಿ   ಆದಿತಾಳ 

Audio by Mrs. Nandini Sripad

ಶ್ರೀ ಮೋಹನದಾಸರ ಕೃತಿ 


ವಿಜಯದಾಸರ ಭಜನೆ ಮಾಡಿರೊ ॥ ಪ ॥
ವಿಜಯದಾಸರ ಭಜನೆ ಮಾಡಲು ।
ಅಜನ ಜನಕ ನಿಜನಿಗೊಲಿದು ।
ಕುಜನ ಸಂಗತಿ ತ್ಯಜನ ಮಾಡಿಸಿ ।
ಸುಜನರ ಪಾದಾಂಬುಜದಲ್ಲಿಡುವ ॥ ಅ ಪ ॥

ಶುದ್ಧ ಮಂದರನ್ನ ಉದ್ಧಾರಾರ್ಥವಾಗಿ ।
ಮಧ್ವರಾಯರ ಮತಾಬ್ಧಿಯೊಳು ಪುಟ್ಟಿ ।
ಸಿದ್ಧಾಂತ ಸ್ಥಾಪಿಸಿ ಗೆದ್ದು ವಾದಿಗಳ ।
ಹೆದ್ದೈವವೇ ಅನಿರುದ್ಧನೆಂದು ॥
ಪದ್ಧತಿಂದ ಪೇಳಿಸಿದಿ ವೈಷ್ಣವರನ್ನ ।
ಶುದ್ಧಾತ್ಮರ ಮಾಳ್ಪ ಉದ್ಯೋಗದಿಂದಲಿ ।
ಹದ್ದನ್ನೇರಿ ಬಪ್ಪ ಪದ್ದುಮನಾಭನ್ನ ।
ಹೃದ್ದಯದೊಳಿಟ್ಟ ಸದ್ಗುರುರಾಯ ॥ 1 ॥

ಭೂಸುರಾಬ್ಧಿಗೆ ತಾರೇಶನಂತೊಪ್ಪುವ ।
ಸಾಸಿರನಾಮದ ಶೇಷಗಿರಿ ಶ್ರೀನಿ - ।
ವಾಸನ ಯಾತ್ರೆಯ ಲೇಸಾಗಿ ಮಾಡ್ಯಲೆ ಸ - ।
ಹಾಸ ಸಂತೋಷದಿಂದಿರೆ ॥
ವಾಸುದೇವನ ಮಾನಸದೊಳಿಟ್ಟು ದು - ।
ರಾಶೆಯ ತೊರೆದು ಕ್ಲೇಶವ ಪಡದಲೆ ।
ಮೀಸಲ ಪುಣ್ಯದ ದಾಶಿ ಘಳಿಸಿ ।
ಕೇಶವನ ನಿಜದಾಸರೆಂದೆನಿಪ ॥ 2 ॥

ಪುರಂದರದಾಸರ ವರಕುಮಾರ ।
ಅರವಿಂದ ಪಾದ ಶಿರದಿ ಧರಿಸಿ ।
ಹರಿ ನಾಮೋಚ್ಚಾರಣೆ ಮಾಡುತ್ತ ।
ಹರುಷದಿಂದ ಪದ ರೂಪದಿ ॥
ಧರೆಯೊಳಗೆಲ್ಲ ದುರ್ಜನರ ।
ಅರಿಯಂದೆನಿಸಿ ಮೆರೆವುತ್ತ ನಿತ್ಯ ।
 ಸಿರಿ ಮೋಹನ್ನವಿಠಲನೆ ಪರನೆಂದ - ।
ರುಹು ಮಾಡಿದ ಸುರತರುವಾದ ॥ 3 ॥
***

vijayadAsara Bajane mADiro |
vijayadAsara Bajane mADalu^^ajana janaka nijanigolidukujana sangati
tyajana mADisisujanara pAdAMbujadalliDuva ||pa||

Suddha mandaranna uddhArArthavAgimadhvarAyara matAbdhiyoLu puTTisiddhAMta sthApisi geddu vAdigaLaheddaivavE aniruddhanu yendu ||
paddhatinda pELisidi vaiShNavarannaSuddhAtmara mALpa udyOgadindalihaddannEri bappa paddumanABannahRuddayadoLagiTTa sadgururAya ||1||

BUsurAbdhige tArESanantoppuvasAsira nAmada SEShagiri SrI ni-vAsana yAtreya lEsAgi mADyeti sa- |hAsa saMtOShadindale ||
vAsudEvana mAnasadoLiTTu du-rASeya toredu klESava paDadalemIsala puNyada rASi GaLisikESavana nija dAsanendenipa||2||

purandara dAsara vara kumA-raravinda pAda Siradi dharisihari nAmOccaraNe mADuttaharuShadinda pada rUpadi ||
dhareyoLagella durjanarariyandenasimerevutta nitya siri mOhanna viThalaneparanendaruhu mADida sura taruvAda ||3||
***
***

ರಾಗ ಶಿವರಂಜಿನಿ            ಆದಿತಾಳ 

ವಿಜಯದಾಸರ ಭಜನೆ ಮಾಡಿರೊ ॥ ಪ ॥
ವಿಜಯದಾಸರ ಭಜನೆ ಮಾಡಲು ।
ಅಜನ ಜನಕ ನಿಜನಿಗೊಲಿದು ।
ಕುಜನ ಸಂಗತಿ ತ್ಯಜನ ಮಾಡಿಸಿ ।
ಸುಜನರ ಪಾದಾಂಬುಜದಲ್ಲಿಡುವ ॥ ಅ ಪ ॥

ಶುದ್ಧ ಮಂದರನ್ನ ಉದ್ಧಾರಾರ್ಥವಾಗಿ ।
ಮಧ್ವರಾಯರ ಮತಾಬ್ಧಿಯೊಳು ಪುಟ್ಟಿ ।
ಸಿದ್ಧಾಂತ ಸ್ಥಾಪಿಸಿ ಗೆದ್ದು ವಾದಿಗಳ ।
ಹೆದ್ದೈವವೇ ಅನಿರುದ್ಧನೆಂದು ॥
ಪದ್ಧತಿಂದ ಪೇಳಿಸಿದಿ ವೈಷ್ಣವರನ್ನ ।
ಶುದ್ಧಾತ್ಮರ ಮಾಳ್ಪ ಉದ್ಯೋಗದಿಂದಲಿ ।
ಹದ್ದನ್ನೇರಿ ಬಪ್ಪ ಪದ್ದುಮನಾಭನ್ನ ।
ಹೃದ್ದಯದೊಳಿಟ್ಟ ಸದ್ಗುರುರಾಯ ॥ 1 ॥

ಭೂಸುರಾಬ್ಧಿಗೆ ತಾರೇಶನಂತೊಪ್ಪುವ ।
ಸಾಸಿರನಾಮದ ಶೇಷಗಿರಿ ಶ್ರೀನಿ - ।
ವಾಸನ ಯಾತ್ರೆಯ ಲೇಸಾಗಿ ಮಾಡ್ಯಲೆ ಸ - ।
ಹಾಸ ಸಂತೋಷದಿಂದಿರೆ ॥
ವಾಸುದೇವನ ಮಾನಸದೊಳಿಟ್ಟು ದು - ।
ರಾಶೆಯ ತೊರೆದು ಕ್ಲೇಶವ ಪಡದಲೆ ।
ಮೀಸಲ ಪುಣ್ಯದ ದಾಶಿ ಘಳಿಸಿ ।
ಕೇಶವನ ನಿಜದಾಸರೆಂದೆನಿಪ ॥ 2 ॥

ಪುರಂದರದಾಸರ ವರಕುಮಾರ ।
ಅರವಿಂದ ಪಾದ ಶಿರದಿ ಧರಿಸಿ ।
ಹರಿ ನಾಮೋಚ್ಚಾರಣೆ ಮಾಡುತ್ತ ।
ಹರುಷದಿಂದ ಪದ ರೂಪದಿ ॥
ಧರೆಯೊಳಗೆಲ್ಲ ದುರ್ಜನರ ।
ಅರಿಯಂದೆನಿಸಿ ಮೆರೆವುತ್ತ ನಿತ್ಯ ।
 ಸಿರಿ ಮೋಹನ್ನವಿಠಲನೆ ಪರನೆಂದ - ।
ರುಹು ಮಾಡಿದ ಸುರತರುವಾದ ॥ 3 ॥
***



ವಿಜಯದಾಸರ ಭಜನೆ ಮಾಡಿರೊ |
ವಿಜಯದಾಸರ ಭಜನೆ ಮಾಡಲುಅಜನ ಜನಕ ನಿಜನಿಗೊಲಿದುಕುಜನ ಸಂಗತಿ
ತ್ಯಜನ ಮಾಡಿಸಿಸುಜನರ ಪಾದಾಂಬುಜದಲ್ಲಿಡುವ ||pa||

ಶುದ್ಧ ಮಂದರನ್ನ ಉದ್ಧಾರಾರ್ಥವಾಗಿಮಧ್ವರಾಯರ ಮತಾಬ್ಧಿಯೊಳು ಪುಟ್ಟಿಸಿದ್ಧಾಂತ ಸ್ಥಾಪಿಸಿ ಗೆದ್ದು ವಾದಿಗಳಹೆದ್ದೈವವೇ ಅನಿರುದ್ಧನು ಯೆಂದು ||
ಪದ್ಧತಿಂದ ಪೇಳಿಸಿದಿ ವೈಷ್ಣವರನ್ನಶುದ್ಧಾತ್ಮರ ಮಾಳ್ಪ ಉದ್ಯೋಗದಿಂದಲಿಹದ್ದನ್ನೇರಿ ಬಪ್ಪ ಪದ್ದುಮನಾಭನ್ನಹೃದ್ದಯದೊಳಗಿಟ್ಟ ಸದ್ಗುರುರಾಯ ||1||

ಭೂಸುರಾಬ್ಧಿಗೆ ತಾರೇಶನಂತೊಪ್ಪುವಸಾಸಿರ ನಾಮದ ಶೇಷಗಿರಿ ಶ್ರೀ ನಿ-ವಾಸನ ಯಾತ್ರೆಯ ಲೇಸಾಗಿ ಮಾಡ್ಯೆತಿ ಸ- |ಹಾಸ ಸಂತೋಷದಿಂದಲೆ ||
ವಾಸುದೇವನ ಮಾನಸದೊಳಿಟ್ಟು ದು-ರಾಶೆಯ ತೊರೆದು ಕ್ಲೇಶವ ಪಡದಲೆಮೀಸಲ ಪುಣ್ಯದ ರಾಶಿ ಘಳಿಸಿಕೇಶವನ ನಿಜ ದಾಸನೆಂದೆನಿಪ||2||

ಪುರಂದರ ದಾಸರ ವರ ಕುಮಾ-ರರವಿಂದ ಪಾದ ಶಿರದಿ ಧರಿಸಿಹರಿ ನಾಮೋಚ್ಚರಣೆ ಮಾಡುತ್ತಹರುಷದಿಂದ ಪದ ರೂಪದಿ ||
ಧರೆಯೊಳಗೆಲ್ಲ ದುರ್ಜನರರಿಯಂದೆನಸಿಮೆರೆವುತ್ತ ನಿತ್ಯ ಸಿರಿ ಮೋಹನ್ನ ವಿಠಲನೆಪರನೆಂದರುಹು ಮಾಡಿದ ಸುರ ತರುವಾದ ||3||
*******