Showing posts with label ಬರಬೇಕು ಇಂದಿಲ್ಲಿಗೆ ಭಕ್ತರ ಮನೆಗೆ bhupati vittala. Show all posts
Showing posts with label ಬರಬೇಕು ಇಂದಿಲ್ಲಿಗೆ ಭಕ್ತರ ಮನೆಗೆ bhupati vittala. Show all posts

Monday 6 September 2021

ಬರಬೇಕು ಇಂದಿಲ್ಲಿಗೆ ಭಕ್ತರ ಮನೆಗೆ ankita bhupati vittala

 ankita ಭೂಪತಿವಿಠಲ   

ರಾಗ: ಪಟದೀಪ  ತಾಳ: ತ್ರಿ


ಬರಬೇಕು ಇಂದಿಲ್ಲಿಗೆ ಭಕ್ತರ ಮನೆಗೆ   ಪ


ಪರಮಪಾವನ ಗುರು ಸಾರ್ವಭೌಮನೆ ಬೇಗ  ಅ.ಪ


ಹಡೆದಪ್ಪ ಖಡುಗವ ಪಿಡಿದು ಬೆದರಿಸಿ ನಿನ್ನ

ಒಡೆಯನೆಲ್ಲಿಹ ನೋಡಿ ಬಿಡುವೆನೆನಲು

ಧೃಡ ಬಕ್ತಿಯಿಂ ಜಗದೊಡೆಯಗೆ ಮೊರೆಯಿಡೆ

ಘುಡು ಘುಡಿಸುತ ಕಂಬ ಒಡೆದು ನರಹರಿ ಬಂದ   1

ಬಾಲಯತಿಯು ಗೋಪಾಲನ ಕುಣಿಸಿ

ಭೂಪಾಲನ ಕುಹಯೊಗ ಕಳೆದು ಪೊರೆದು

ಬಾಲಾಜಿಯನು ಪೂಜಿಸಿ ಬಾಲನಿಗೊಪ್ಪಿಸಿ

ಆ ಮೌಲ್ಯ ಗ್ರಂಥ ಬರೆದ ಮೌನೀಶ ವ್ಯಾಸರಾಯ  2

ರಘುಪತಿ ಪೊಜಕ ರಾಘವೇಂದ್ರನೆ ಬಾರೊ

ಅಘಾದ್ರಿ ಸಂಭೇದನ ದೃಷ್ಟಿ ವಜ್ರಾ

ಬಗೆಬಗೆಯ ಮಹಿಮೆಯ ಜನಕೆ ತೋರಿಸುತ ನೀ

ಅಗಮ್ಯ ಮಹಿಮಾ ಭೂಪತಿವಿಠಲನ ಪ್ರೀಯಾ  3

***