Showing posts with label ಏಳಿಸು ನಂಜನನೂ ಬೇಗದೊಳೇಳಿಸು ನಂಜನನೂ vaikunta vittala. Show all posts
Showing posts with label ಏಳಿಸು ನಂಜನನೂ ಬೇಗದೊಳೇಳಿಸು ನಂಜನನೂ vaikunta vittala. Show all posts

Sunday 1 August 2021

ಏಳಿಸು ನಂಜನನೂ ಬೇಗದೊಳೇಳಿಸು ನಂಜನನೂ ankita vaikunta vittala

 ..

kruti by ಬೇಲೂರು ವೈಕುಂಠ ದಾಸರು belur vaikunta dasaru


ಏಳಿಸು ನಂಜನನೂ ಬೇಗದೊಳೇಳಿಸು ನಂಜನನೂ

ಬಾಳುವ ಮಗನನು ಕೋಳುವಿಡಿದುದು ಯಮನ

ನಾಳಿದೊಡೆಯ ವೇಲಾಪುರದರಸಾ ಪ


ಪತಿಯನು ನೀಗಿದ ಸತಿಮಾದಮ್ಮನು

ಸುತನಿಂ ಬದುಕುವೆನೆಂದೀ ಊರೊಳು

ಅತಿ ತಿರಿತಂದೋವುತಲಿದ್ದಳು ಸುತ

ಮೃತನಾದನು ಅಚ್ಯುತ ಸಲಹಯ್ಯಾ 1


ಉರಿಯೊಳು ಬಿದ್ದಂತೊರಲಿ ಪೊರಲಿ ವೋ

ಹರಿ ಹರಿ ಹರಿ ಯೆಂದುರುಳಿ ಬಡಿದುಕೊಳ್ಳೇ

ದುರಿಯಶ ವೊಡೆಯಗೆ ಬರುವುದೆಂದು ನರ

ಹರಿ ರಕ್ಷಿಪನೆಂದೊರೆದೆನು ಹರಿಯೆ 2


ಸತ್ತಮಗನ ನೀ ತಂದಿತ್ತುದಿಲ್ಲವೇ ಹೇ

ಕತರ್ುೃವೆ ಸಾಂದೀಪೋತ್ತಮನಿಗೆ ಅಂದು

ಉತ್ತರೆಯೊಡಲೊಳು ಅತ್ತು ಶಿಶುವು ಸಾ

ವುತ್ತಿರಲುಳುಹಿದೆ ಚಿತ್ತಜನಯ್ಯಾ 3


ಇರಿದಪಮೃತ್ಯು ಪೊತ್ತಿರಿದಪವಾದವು

ಉರುಳಿದೆ ನೋಡುತ್ತಿರುವರೆ ಸುಮ್ಮನೆ

ಅರಿಯದಂತಿರ್ದಡೆ ಪರಿಪಾಲಿಪರಾರು

ವರಮೃತ್ಯುಂಜಯ ಕರುಣಾಕರನೇ 4


ಮರಣವನೈದಿದ ತರಳ ನಂಜುಂಡನ

ಕರುಣಿಸದಿರ್ದಡೆ ಶಿರವನರಿದು ನಾ

ಚರಣದೊಳಿಡುವೆನು ದುರಿತಬಾಹುದು ನಿನ

ಗರಿಯದೆ ವೈಕುಂಠವಿಠಲ ಚೆನ್ನಿಗನೇ 5

***