Showing posts with label ಜಿಷ್ಣುಸಖನೆ ಕೃಷ್ಣನೆ ಕೃಷ್ಣ ಕರಿಯ ಕಾಯ್ದ ಕರುಣಿ hayavadana JISHNUSAKHANE KRISHNANE KRISHNA KARIYA KAAYDA KARUNI. Show all posts
Showing posts with label ಜಿಷ್ಣುಸಖನೆ ಕೃಷ್ಣನೆ ಕೃಷ್ಣ ಕರಿಯ ಕಾಯ್ದ ಕರುಣಿ hayavadana JISHNUSAKHANE KRISHNANE KRISHNA KARIYA KAAYDA KARUNI. Show all posts

Saturday 11 December 2021

ಜಿಷ್ಣುಸಖನೆ ಕೃಷ್ಣನೆ ಕೃಷ್ಣ ಕರಿಯ ಕಾಯ್ದ ಕರುಣಿ ankita hayavadana JISHNUSAKHANE KRISHNANE KRISHNA KARIYA KAAYDA KARUNI



ಶ್ರೀ ವಾದಿರಾಜ ತೀರ್ಥರ ಕೃತಿ

ಜಿಷ್ಣು ಶಖನೆ ಕೃಷ್ಣನೆ/ 
ಕೃಷ್ಣ ಕರಿಯ ಕಾಯ್ದ ಕರುಣಿ//
ಕೃಷ್ಣ ಪೊರೆಯೊ ಎನ್ನ ವಿಷಯ--
ತೃಷ್ಣೆ ಯಿಂ ಸಾಯಲೆ ದಮ್ಮಯ್ಯ//

ಹಿಂದೆ ಮಾಡಿದ ಕರ್ಮದಡವಿಯೆಂದಿಗೆ ಸವರುವೆನೊ ಗೋ--
ವಿಂದ ನಿನ್ನ ಕರುಣಸುಧೆ ಇನ್ನೆಂದು ಪಡೆದು ಸುಖಿಪೆನೊ/
ಇಂದು ಮಾಡಿದ ಅಘಗಳು ಬಲು ದಂದುಗಕೊಳಗಾದೆ  ನೀನು/
ಕುಂ೧ದು ಕುಜನ ದೂರ  ನಿನ್ನ ಕಂದನೆಂದು ಸಲಹೋ ತಂದೆ//೧//

ಕಾಮವೆನ್ನ ಕಮಲನಾಭ ಸೀಮೆಗಾಣಲಿಯ್ಯದೊ ನಿ--
ಸ್ಸೀಮ ಮಹಿಮ ಕ್ರೋಧ ಎನ್ನ ಸಾಮವ ನಡುಗಿಸುತಿದೆ/
ಭ್ರಮಿತನಾದೆ ಬಲು ಪ್ರೇಮವ ತಪ್ಪಿಸಿ ಸುರಕ್ತಾನು ಹೇ
ದೈವ ಎನ್ನ ಆ ಮಹಾಭಯವ ನಿವಾರಿಸೊ//೨//

ಸುಖ ದುಃಖ ಜೀವನಕೆ  ಕಕ್ಕು ಬಕ್ಕು ಭಯದ ಬೇಸ-
ರಕ್ಕೆ ಬಿಡದೆ ಬಿಡದೆ ನಿನ್ನ ಲೆಕ್ಕ ಮಾಡಲಿಯ್ಯದೊ
ಚಿಕ್ಕತನದಿ ಸಿಕ್ಕಿ ದುರ್ವಿಷಯದಿ ನೊಂದೆ ಮೈ-
ಯಿಕ್ಕದಂತೆ ಮಾಡೊ ಹಯವದನ ದಕ್ಕಿಸೆನ್ನ ಅನುದಿನ//
***********

ತಪೋ ವಿದ್ಯಾ ವಿರಕ್ತ್ಯಾದಿ ಸದ್ಗುಣೌಘಾಕರನಹಮ್ ವಾದಿರಾಜ ಗುರೂನ್ವಂದೇ ಹಯಗ್ರೀವ ದಯಾಶ್ರಯಾನ್.
ಶ್ರೀ ವಾದಿರಾಜಾಯ ನಮಃ.