Showing posts with label ರಮಾಕಾಂತ ವಿಠಲನೇ ನೀನವರ tandemuddu mohana vittala ramakanta vittala dasa stutih. Show all posts
Showing posts with label ರಮಾಕಾಂತ ವಿಠಲನೇ ನೀನವರ tandemuddu mohana vittala ramakanta vittala dasa stutih. Show all posts

Saturday 1 May 2021

ರಮಾಕಾಂತ ವಿಠಲನೇ ನೀನವರ ankita tandemuddu mohana vittala ramakanta vittala dasa stutih

 ಶ್ರೀ ತಂದೆ ಮುದ್ದು ಮೋಹನದಾಸರು...

ಕ್ರಿ ಶ 1924 ಶ್ರೀ ಕೃಷ್ಣರಾಯರಿಗೆ......

" ರಮಾಕಾಂತ ವಿಠಲ " 

ಯೆಂಬ ಅಂಕಿತದೊಂದಿಗೆ ಮಂತ್ರೋಪದೇಶ ಮಾಡಿ ಪರಮಾನುಗ್ರಹ ಮಾಡಿದರು. 


ರಮಾಕಾಂತ ವಿಠಲನೇ ನೀನವರ 

ಸಲಹ ಬೇಕೋ ಹರಿಯೇ ।। ಪಲ್ಲವಿ ।।


ದೀನನಾಥನೇ ಕೈಪಿಡಿದು 

ಉದ್ಧರಿಸಿ ಕಾಪಾಡೋ ಹರಿಯೇ ।

ಮನ್ಮನೋರಥ ದಾತಾ ಸ್ವಾಮೀ 

ಶ್ರೀ ಹರಿಯೇ ಕಾಪಾಡಬೇಕಿವನಾ ।। ಅ ಪ ।।


ಹರಿ ಗುರು ಭಕ್ತಿ ಮೊದಲಾದ 

ಸದ್ಗುಣವನೇ ಕೊಟ್ಟು ।

ಪರಮ ದಯದಿಂದ ಇಹಪರದಿ 

ಕಾಪಾಡೋ ಹರಿಯೇ ।

ಕರಿ ವರದ ಕಾಮಿತಾರ್ಥವನಿತ್ತು ।

ಕರುಣದಿಂದಲಿ ಕಾಪಾಡೋ 

ಹರಿಯೇ ।। ಚರಣ ।।


ದೋಷ ದೂರನೇ 

ಕೃಷ್ಣ ಶೇಷಗಿರಿ 

ವಾಸ ಕೃಪಾಸಾಂದ್ರ ನೀ 

ಸಲಹಬೇಕೋ ಹರಿಯೇ ।

ಶೇಷ ಪರ್ಯಂಕ 

ಶಯನ ಶ್ರೀ ಹರಿಯೇ । ಸಂ ।

ತೋಷವನೆ ಕೊಟ್ಟು ನೀ 

ಕಾಪಾಡೋ ಹರಿಯೇ ।। ಚರಣ ।।


ಧರ್ಮ ಕಾಮಾರ್ಥ ಮೊದಲಾದ 

ಪುರುಷಾರ್ಥವನೆ ಕೊಟ್ಟು 

ನ್ಮುದದಿ ಕಾಯೋ ಹರಿಯೇ । 

ಮ ಸ್ವಾಮಿ ಕೈವಲ್ಯದಾಯಕ 

ತಂದೆಮುದ್ದು ಮೋಹನ ವಿಠಲನೇ 

ನೀನೀವನ ನಿರ್ಮಲ ಮನದಿ 

ನಿಂತು ಧರ್ಮ ಪ್ರೇರಕನಾಗಿ

ಸಲಹೋ ಹರಿಯೇ ।। ಚರಣ ।।

****