Showing posts with label ಹರಿಪರದೈವ ಚತುರ್ದಶ ಲೋಕಕೆ ಉರಗನ ಮುಂಡಿಕೆ vijaya vittala. Show all posts
Showing posts with label ಹರಿಪರದೈವ ಚತುರ್ದಶ ಲೋಕಕೆ ಉರಗನ ಮುಂಡಿಕೆ vijaya vittala. Show all posts

Thursday 17 October 2019

ಹರಿಪರದೈವ ಚತುರ್ದಶ ಲೋಕಕೆ ಉರಗನ ಮುಂಡಿಕೆ ankita vijaya vittala

ವಿಜಯದಾಸ
ಹರಿ ಪರದೈವ ಚತುರ್ದಶ ಲೋಕಕೆ |
ಉರಗನ ಮುಂಡಿಕೆ ತುಳುಕಿ ಪೇಳುವೆ ನಾನು ಪ

ಮುನಿಗಳೆಲ್ಲ ನೆರೆದು ಸದ್ವರವ ಮಾಡುತಲಿ |
ಮನ ಬಂದ ಹಾಗೆ ಅರ್ಪಿಸುತಿರಲು |
ಮುನಿ ನಾರದನು ಕೇಳೆ ಭೃಗು ಮುನಿಯನು ಕಳುಹಿ |
ವನಜನಾಭನೆ ದೈವವೆಂದು ನಿರ್ಣೈಸಿದರು1

ದುರ್ವಾಸ ಮುನಿಪಗೆ ಚಕ್ರ ಎಡೆಗೊಂಡಿರಲು |
ಅಜ ಗಿರೀಶಾ ||
ಗೀರ್ವಾಣರಾದ್ಯರು ಪರಿಹರಿಲಾರದಿರೆ |
ಸರ್ವೋತ್ತಮನೆ ಒಬ್ಬ ಹರಿಯೆಂದು ಸಾರಿದರು 2

ಕರಿ ಬಾಧೆಯನು ಬಡುತಲಿ |
ಕಾವವಾತನೆ ದೈವ ಎಂದು ಕೂಗೆ ||
ನಾವು ತಾವು ಎಂದು ಎಲ್ಲರು ಸುಮ್ಮನಿರೆ |
ತಾವ ಕಾಕ್ಷನೆ ಕಾಯ್ದಾ ಪರದೇವತೆ ಎಂದು 3

ಹÀಯಮುಖನು ವೇದಗಳು ಕದ್ದೌಯೆ ಸಕಲರು |
ಭಯಬಿದ್ದು ನಿತ್ರಾಣರಾಗಿರಲು ||
ಜಯದೇವಿ ರಮಣನು ವೇದವನು ತಂದು ಜಗ |
ತ್ರಯಕೆ ಒಡೆಯನೆನೆಸಿಕೊಂಡ ಪರನೆಂದು 4

ಮೊದಲು ನಿರ್ಣಯವಾಗಿ ಇರಲಿಕ್ಕೆ ಮಂದಮತಿ |
ಮದಡ ಮನುಜರೆಲ್ಲ ನೆಲೆಗಾಣದೆ ||
ಮದನ ಪಿತ ವಿಜಯವಿಠ್ಠಲನ ಒಲಿಸಿಕೊಳ್ಳದೆ |
ಮದ ಗರ್ವದಲಿ ನುಡಿದು ನರಕದಲ್ಲಿ ಬೀಳುವರೂ5
*********