Showing posts with label ಬಾರೋ ಶ್ರೀ ನರಹರಿಯೇ ಭವ ಬಂಧ ಮೋಚಕ ಬಾ gurushreesha vittala. Show all posts
Showing posts with label ಬಾರೋ ಶ್ರೀ ನರಹರಿಯೇ ಭವ ಬಂಧ ಮೋಚಕ ಬಾ gurushreesha vittala. Show all posts

Saturday, 1 May 2021

ಬಾರೋ ಶ್ರೀ ನರಹರಿಯೇ ಭವ ಬಂಧ ಮೋಚಕ ಬಾ ankita gurushreesha vittala

 " ಶ್ರೀ ನೃಸಿಂಹದೇವರ ಸ್ವಪ್ನ ಸೂಚನೆ "

ಬಾರೋ ಶ್ರೀ ನರಹರಿಯೆ l

ಭವಬಂಧ ಮೋಚಕ ಬಾ ಬಾ ಬಾ ll ಪ ll


ನಂದಗೋಪನ ಕಂದಾ ಹರಿ ಮುಕುಂದಾ l

ಸುಂದರ ಮಂದರೋದ್ಧರ ಧಾರಾ l

ಸಿಂಧುಶಯನ ಗೋವಿಂದ ಇಂದಿನ l

ಮಂದಮತಿಗೆ ಸ್ವಾನಂದವೀಯಲು ಬಾ ಬಾ ಬಾ ll ಅ ಪ ll


ಗಾಡಾಂಧಕಾರದೊಳು ಸ್ವೇಚ್ಛೆಯಲಿ ನಾ l

ಕಿಡಿಗೇಡಿ ಜೀವನಾನಾಗಲು l

ನೀಡದಂದಲಿಪ್ಪ ಲಿಂಗದೊಳಾಡು l

ತಾಡುತ ದೂಡಿ ಎನ್ನನು l

ಬೇಡಿಗೊಳಿಸಿ ಕಾಡೊಳಟ್ಟಿದಿ l

ನಾಡ ರಕ್ಷಿಪ ಗಾಡಿಕಾರನೆ ll 1 ll


ಏಸು ಜನ್ಮಗಳ್ಹೋದವೊ ಈ ವಿಧದಿ ಮುನ್ನೇ l

ಸು ಜನ್ಮಗಳುಳಿದವೊ l

ದಾಸ ನಾನಿಹೆ ಕ್ಷೇಶದಿಂದಲಿ l

ಘಾಸಿಯಾಗುವೆ ಮೋಸಮಾಡದೆ l

ಶ್ರೀಶ ನೀ ಭವಪಾಶ ಕಡದೆನ್ನಾ l

ಶೆ ಪೂರ್ತಿಸೊ ವಾಸುದೇವನೆ ll 2 ll


ಪ್ರಾರಬ್ಧವದು ಯಾವದೊ ನಿನ್ನಿಚ್ಛೆಯಲ್ಲದೆ l

ಬೇರಿಹುದಲ್ಲವದು l

ದಾರಿಗಾಣೆನೋ ದೂರ ನೋಡದೆ l

ಪಾರ ಮಾಡ್ವದನಂತ ಮಹಿಮನೆ l

ಸೇರಿಸೆನ್ನ ರಮೇಶ ಪಾದಕೆ l

ಸೇರಿಸೆನ್ನ ಮಾರಪಿತ ಗುರುಶ್ರೀಶವಿಟ್ಠಲ ll 3 ll

***


ರಾಗ : ಪೂರ್ವೀ  ತಾಳ : ತ್ರಿವಿಡಿ 


ಬಾರೋ ಶ್ರೀ ನರಹರಿಯೇ ।

ಭವ  ಬಂಧ ಮೋಚಕ 

ಬಾ ಬಾ ಬಾ ।। ಪಲ್ಲವಿ ।।


ನಂದ ಗೋಪನ 

ಕಂದ ಹರಿ ಮುಕುಂದಾ ।

ಸುಂದರ ಮಂಧರೋದ್ಧರ ಧಾರಾ ।

ಸಿಂಧುಶಯನ ಗೋ-

ವಿಂದ ಇಂದಿನಾ ।

ಮಂದಮತಿಗೆ ಸ್ವಾನಂದವೀಯಲು 

ಬಾ ಬಾ ಬಾ ।। ಅ ಪ ।।


ಗಾಡಾಂಧಕಾರದೊಳು 

ಸ್ವೇಚ್ಛೆಯಲಿ ನಾ ।

ಕಿಡಿಗೇಡಿ ಜೀವನಾನಾಗಲು ।

ನೀಡದಂದಲಿಪ್ಪ 

ಲಿಂಗದೊಳಾಡು ।।

ತಾಡುತ ದೂಡಿ ಯೆನ್ನೆನು ।

ಬೇಡಿಗೊಳಿಸಿ ಕಾಡೊಳಟ್ಟದಿ ।

ನಾಡ ರಕ್ಷಿಪ ಗಾಡಿಕಾರನೇ ।। ಚರಣ ।।


ಏಸು ಜನ್ಮಗಳ್ಹೋದವೋ 

ಈ ವಿಧದಿ  । ಮು ।

ನ್ನೇಸು ಜನ್ಮಗಳು ಳಿದವೋ ।

ದಾಸ ನೀನಿಹೆ ಕ್ಲೇಶದಿಂದಲಿ ।।

ಘಾಸಿಯಾಗುವೆ ಮೋಸ ಮಾಡದೆ ।

ಶ್ರೀಶ ನೀ ಭವ ಪಾಶ । ಕಡದೆ ।

ನ್ನಾಶೆ ಪೂರ್ತಿಸೋ 

ವಾಸುದೇವನೇ ।। ಚರಣ ।।


ಪ್ರಾರಬ್ಧವದು ಯಾವುದೋ 

ನಿನ್ನಿಚ್ಛೆಯಿಲ್ಲದೆ ।

ಬೇರಿಹುದಲ್ಲವದು ।

ದಾರಿಗಾಣೆನೋ 

ದೂರ ನೋಡದೆ ।।

ಪಾರ ಮಾಡ್ವದನಂತ 

ಮಹಿಮನೆ ।

ಸೇರಿಸೆನ್ನ ರಮೇಶ ಪಾದಕೆ ।

ಮಾರಪಿತ ಗುರು -

ಶ್ರೀಶ ವಿಠ್ಠಲ।। ಚರಣ ।।

****