Showing posts with label ಬೊಂಬೆಯಾಟವನಾಡಿಸಿದೆ ಮಹಾಭಾರತದ neleyadikeshava. Show all posts
Showing posts with label ಬೊಂಬೆಯಾಟವನಾಡಿಸಿದೆ ಮಹಾಭಾರತದ neleyadikeshava. Show all posts

Wednesday, 1 September 2021

ಬೊಂಬೆಯಾಟವನಾಡಿಸಿದೆ ಮಹಾಭಾರತದ ankita neleyadikeshava

 ..

ರಾಗ - : ತಾಳ -


ಬೊಂಬೆಯಾಟವನಾಡಿಸಿದೆ ಮಹಾಭಾರತವ ll ಪ ll


ಅಂಬುಜಭವಾದಿ ಅಮರರು ನೋಡುತಿರಲು ll ಅ ಪ ll


ಕುರುಭೂಮಿಯೆಂಬ ಪುರವೀಧಿಯನು ವಿರಚಿಸಿ 

ಮರೆಯ ಮಾಯಾಮಯದ  ತೆರೆಯ ಹಾಕಿ

ಧರಣೀಶರೆಂಬ ನರಪ್ರತಿಮೆಗಳನಳವಡಿಸಿ

ನರನ ರಥ ವಾಜಿ ವಾಘೆಯ ಸೂತ್ರವಿಡಿದು ll 1 ll


ಓದುವನು ನಾರದನು ವಾದ್ಯಕಾರನು ಶಂಭು

ಬಾದರಾಯಣನೆ ಕಥಾಪ್ರಸಂಗಿ

ಮೇದಿನಿಯ ಹೊರೆಗೆಳೆವ ಮೃತ್ಯುವಿನ ಹಾಸ್ಯರಸ

ವೇದನಿಕರಗಳು ಕೈವಾರಿಸುತಿರಲು ll 2 ll


ಹದಿನೆಂಟಕ್ಷೋಹಿಣಿ ಮಾರ್ಬಲವು ಹದಿನೆಂಟು ದಿನ

ಕದನ ಕೇಳಿಯ ನಾಟ್ಯವನಾಡಿಸಿ

ಅವರೊಳಐವರನುಳುಹಿ ಅವನಿ ಭಾರವನಿಳುಹಿ

ಮುದದಿ ಬ್ರಹ್ಮ ಕಪಾಲವ ತೃಪ್ತಿಗೊಳಿಸಿ ll 3 ll


ಲೋಕದಳೊಗೈದನೆಯ ವೇದವೀಕತೆಯೆನಿಸಿ

ಪಾಕಶಾಸನ ಸಭೆಯನು ಮೆಚ್ಚಿಸಿ

ಈ ಕಥೆಯ ಕೇಳ್ದ ಜನಮೇಜಯನ ಪತಿಕರಿಸಿ

ನೀ ಕಪಟನಾಟಕಸೂತ್ರಧಾರನೆನಿಸಿ ll 4 ll


ಇಂತೆಸೆವ ಲೀಲಾವಿನೋದ ರಚನೆಯಲಿ ಲೋ

ಕಾಂತರಗಳನೆಲ್ಲ ಸಂಚರಿಸುತ್ತ

ಸಂತತವು ಭಕ್ತಸಂಸಾರವನು ಪೊರೆವ ವೇ

ದಾಂತನುತ ಕಾಗಿನೆಲೆಯಾದಿಕೇಶವರಾಯ ll 5 ll

***

ಬೊಂಬೆಯಾಟವನಾಡಿಸಿದೆ ಮಹಾಭಾರತದ ಪ


ಅಂಬುಜಭವಾದಿ ಅಮರರು ನೋಡುತಿರಲು ಅ


ಕುರುಭೂಮಿಯೆಂಬ ಪುರವೀಧಿಯನು ರಚಿಸಿಮರೆಯ ಮಾಯದ ಐದು ತೆರೆಯ ಹಾಕಿಧರಣೀಶರೆಂಬ ನರಪ್ರತಿಮೆಗಳನಳವಡಿಸಿನರನ ರಥವಾಜಿಯ ಸೂತ್ರವನು ಪಿಡಿದು 1


ಓದುವನು ನಾರದನು ವಾದ್ಯಕಾರನೆ ಶಂಭುಬಾದರಾಯಣದೇವ ಕಥಾಪ್ರಸಂಗಿಮೇದಿನಿಯ ಹೊರೆಗಳೆವ ಮೃತ್ಯುವಿನ ಹಾಸ್ಯರಸವೇದನಿಕರಗಳು ಕೈವಾರಿಸುತಿರಲು 2


ಹದಿನೆಂಟು ಅಕ್ಷೋಹಿಣಿ ಮಾರ್ಬಲವ ನೆರೆಸಿಹದಿನೆಂಟು ದಿನ ಕದನಕೇಳಿಕೆ ನಡೆಸಿಅದರೊಳೈವರನುಳುಹಿ ಅವನಿಭಾರವನಿಳುಹಿಮುದದಿ ಬ್ರಹ್ಮಕಪಾಲವನು ತೃಪ್ತಿಗೊಳಿಸಿ 3


ಲೋಕದೊಳಗೈದನೆಯ ವೇದವಿದೆಂದೆನಿಸಿಪಾಕಶಾಸನ ಸಭೆಯನು ಮೆಚ್ಚಿಸಿಈ ಕಥೆಯ ಕೇಳಿದ ಜನಮೇಜಯನ ಪತಿಕರಿಸಿತಾ ಕಪಟನಾಟಕದ ಸೂತ್ರಧರನೆನಿಸಿ 4


ಇಂತೆಸೆವ ಲೀಲಾವಿನೋದ ರಚನೆಗಳಿಂದ ಲೋ-ಕಾಂತರಂಗಳ ಸಂಚರಿಸುತಸಂತಸದಿ ಭರತ ಸಂಸಾರವನು ಪೊರೆವ ವೇ-ದಾಂತನುತ ಕಾಗಿನೆಲೆಯಾದಿಕೇಶವರಾಯ 5

***