..
ರಾಗ - : ತಾಳ -
ಬೊಂಬೆಯಾಟವನಾಡಿಸಿದೆ ಮಹಾಭಾರತವ ll ಪ ll
ಅಂಬುಜಭವಾದಿ ಅಮರರು ನೋಡುತಿರಲು ll ಅ ಪ ll
ಕುರುಭೂಮಿಯೆಂಬ ಪುರವೀಧಿಯನು ವಿರಚಿಸಿ
ಮರೆಯ ಮಾಯಾಮಯದ ತೆರೆಯ ಹಾಕಿ
ಧರಣೀಶರೆಂಬ ನರಪ್ರತಿಮೆಗಳನಳವಡಿಸಿ
ನರನ ರಥ ವಾಜಿ ವಾಘೆಯ ಸೂತ್ರವಿಡಿದು ll 1 ll
ಓದುವನು ನಾರದನು ವಾದ್ಯಕಾರನು ಶಂಭು
ಬಾದರಾಯಣನೆ ಕಥಾಪ್ರಸಂಗಿ
ಮೇದಿನಿಯ ಹೊರೆಗೆಳೆವ ಮೃತ್ಯುವಿನ ಹಾಸ್ಯರಸ
ವೇದನಿಕರಗಳು ಕೈವಾರಿಸುತಿರಲು ll 2 ll
ಹದಿನೆಂಟಕ್ಷೋಹಿಣಿ ಮಾರ್ಬಲವು ಹದಿನೆಂಟು ದಿನ
ಕದನ ಕೇಳಿಯ ನಾಟ್ಯವನಾಡಿಸಿ
ಅವರೊಳಐವರನುಳುಹಿ ಅವನಿ ಭಾರವನಿಳುಹಿ
ಮುದದಿ ಬ್ರಹ್ಮ ಕಪಾಲವ ತೃಪ್ತಿಗೊಳಿಸಿ ll 3 ll
ಲೋಕದಳೊಗೈದನೆಯ ವೇದವೀಕತೆಯೆನಿಸಿ
ಪಾಕಶಾಸನ ಸಭೆಯನು ಮೆಚ್ಚಿಸಿ
ಈ ಕಥೆಯ ಕೇಳ್ದ ಜನಮೇಜಯನ ಪತಿಕರಿಸಿ
ನೀ ಕಪಟನಾಟಕಸೂತ್ರಧಾರನೆನಿಸಿ ll 4 ll
ಇಂತೆಸೆವ ಲೀಲಾವಿನೋದ ರಚನೆಯಲಿ ಲೋ
ಕಾಂತರಗಳನೆಲ್ಲ ಸಂಚರಿಸುತ್ತ
ಸಂತತವು ಭಕ್ತಸಂಸಾರವನು ಪೊರೆವ ವೇ
ದಾಂತನುತ ಕಾಗಿನೆಲೆಯಾದಿಕೇಶವರಾಯ ll 5 ll
***
ಬೊಂಬೆಯಾಟವನಾಡಿಸಿದೆ ಮಹಾಭಾರತದ ಪ
ಅಂಬುಜಭವಾದಿ ಅಮರರು ನೋಡುತಿರಲು ಅ
ಕುರುಭೂಮಿಯೆಂಬ ಪುರವೀಧಿಯನು ರಚಿಸಿಮರೆಯ ಮಾಯದ ಐದು ತೆರೆಯ ಹಾಕಿಧರಣೀಶರೆಂಬ ನರಪ್ರತಿಮೆಗಳನಳವಡಿಸಿನರನ ರಥವಾಜಿಯ ಸೂತ್ರವನು ಪಿಡಿದು 1
ಓದುವನು ನಾರದನು ವಾದ್ಯಕಾರನೆ ಶಂಭುಬಾದರಾಯಣದೇವ ಕಥಾಪ್ರಸಂಗಿಮೇದಿನಿಯ ಹೊರೆಗಳೆವ ಮೃತ್ಯುವಿನ ಹಾಸ್ಯರಸವೇದನಿಕರಗಳು ಕೈವಾರಿಸುತಿರಲು 2
ಹದಿನೆಂಟು ಅಕ್ಷೋಹಿಣಿ ಮಾರ್ಬಲವ ನೆರೆಸಿಹದಿನೆಂಟು ದಿನ ಕದನಕೇಳಿಕೆ ನಡೆಸಿಅದರೊಳೈವರನುಳುಹಿ ಅವನಿಭಾರವನಿಳುಹಿಮುದದಿ ಬ್ರಹ್ಮಕಪಾಲವನು ತೃಪ್ತಿಗೊಳಿಸಿ 3
ಲೋಕದೊಳಗೈದನೆಯ ವೇದವಿದೆಂದೆನಿಸಿಪಾಕಶಾಸನ ಸಭೆಯನು ಮೆಚ್ಚಿಸಿಈ ಕಥೆಯ ಕೇಳಿದ ಜನಮೇಜಯನ ಪತಿಕರಿಸಿತಾ ಕಪಟನಾಟಕದ ಸೂತ್ರಧರನೆನಿಸಿ 4
ಇಂತೆಸೆವ ಲೀಲಾವಿನೋದ ರಚನೆಗಳಿಂದ ಲೋ-ಕಾಂತರಂಗಳ ಸಂಚರಿಸುತಸಂತಸದಿ ಭರತ ಸಂಸಾರವನು ಪೊರೆವ ವೇ-ದಾಂತನುತ ಕಾಗಿನೆಲೆಯಾದಿಕೇಶವರಾಯ 5
***