Showing posts with label ತುಂಗಭದ್ರ ನದಿ ತೀರದಿ ನೆಲಸಿಹನ್ಯಾರೆ gopalakrishna vittala TUNGABHADRA NADI TEERADI NELASIHANYAARE. Show all posts
Showing posts with label ತುಂಗಭದ್ರ ನದಿ ತೀರದಿ ನೆಲಸಿಹನ್ಯಾರೆ gopalakrishna vittala TUNGABHADRA NADI TEERADI NELASIHANYAARE. Show all posts

Thursday 2 December 2021

ತುಂಗಭದ್ರ ನದಿ ತೀರದಿ ನೆಲಸಿಹನ್ಯಾರೆ ankita gopalakrishna vittala TUNGABHADRA NADI TEERADI NELASIHANYAARE



ತುಂಗಭದ್ರ ನದಿ ತೀರದಿ ನೆಲಸಿಹನ್ಯಾರೆ ಪೇಳಮ್ಮಯ್ಯ ಪ.


ಗಂಗಾಧರನರ್ಧಾಂಗಿಯಾಗಿ ಶ್ರೀ

ರಂಗ ತಾನು ಇಲ್ಲಿರುತಿಹನಮ್ಮ ಅ.ಪ.


ಶಂಖ ಚಕ್ರ ತ್ರಿಶೂಲವ ಧರಿಸಿಹನ್ಯಾರೇ ಪೇಳಮ್ಮಯ್ಯ

ಶಂಕರ ಸಹಿತಲಿ ನೆಲಸಿಹ ಕುರುಹನು

ಶಂಕಿಸದಂದದಿ ತೋರುವನಮ್ಮ 1


ಈ ಪರಿರೂಪವ ಧರಿಸಲು ಕಾರಣವೇನೇ ಪೇಳಮ್ಮಯ್ಯ

ಪಾಪಿ ಗುಹನ ವರಬಲವನೆ ಕೆಡಹಲು

ಈ ಪರಿರೂಪವ ಧರಿಸಿಹನಮ್ಮ 2


ಇದ್ದರೆ ಈ ಪರಿ ಶುದ್ಧ ಸಾತ್ವಿಕರಿಗೆ ಹ್ಯಾಗೇ ಪೇಳಮ್ಮಯ್ಯ

ಮಧ್ವಮತರಿಗೆ ಮನದಲಿ ಪ್ರೇರಕ

ಶುದ್ಧ e್ಞÁನವನಿತ್ತು ಸಲಹುವನಮ್ಮ 3


ವಿಷ್ಣು ಭಕ್ತರ ಮನಸಿಗೆ ತೋರುವ ಮತಿ ಏನೇ ಪೇಳಮ್ಮಯ್ಯ

ಶ್ರೇಷ್ಠ ವೈಷ್ಣವೊತ್ತಮ ಹರನನು ತಾ

ಬಿಟ್ಟಿರಲಾರದ ಗುಟ್ಟು ಕಾಣಮ್ಮ 4


ಇನಕೋಟಿತೇಜನ ಈ ಪರಿ ಲೀಲೆ ಇದೇನೆ ಪೇಳಮ್ಮಯ್ಯ

ಮನಸಿಗೆ ಪ್ರೇರಕ ಹರನೊಲುಮಿಲ್ಲದೆ

ಹರಿಯು ತಾನು ಒಲಿಯನು ಕಾಣಮ್ಮ 5


ಹರಿಹರ ರೂಪವ ಧರಿಸಿದ ಪರಿ ಹ್ಯಾಗೇ ಪೇಳಮ್ಮಯ್ಯ

ಸುರವಂದ್ಯನು ಪರಿಪರಿರೂಪಾಗ್ವಗೆ ಈ

ಪರಿ ಧರಿಸುವದೊಂದರಿದೇನಮ್ಮ 6


ಹರಿಹರ ಕ್ಷೇತ್ರದಿ ನೆಲಸಿಹ ಸ್ವಾಮಿಯ ಭಜಿಸುವದ್ಹ್ಯಾಗೇ ಪೇಳಮ್ಮಯ್ಯ

ಹರನಂತರ್ಗತ ಹರಿಯೊಲುಮಿಂದಲಿ

ಕರಕರೆ ಭವವನು ಕಳೆಯಬೇಕಮ್ಮ 7


ಶ್ರೀಸತಿ ಪಾರ್ವತಿ ಸಹಿತದಿ ನೆಲಸಿಹನ್ಯಾರೇ ಪೇಳಮ್ಮಯ್ಯ

ದಾಸರನಿಧಿ ಗೋಪಾಲಕೃಷ್ಣವಿಠ್ಠಲ

ಶೇಷಭೂಷಣ ಸಹ ಶ್ರೀನಿವಾಸ ಕಾಣಮ್ಮ 8 

****