Showing posts with label ವಾಜಿವದನಾರ್ಚಕ ಶ್ರೀ ವಾದಿರಾಜ jayesha vittala vadiraja stutih. Show all posts
Showing posts with label ವಾಜಿವದನಾರ್ಚಕ ಶ್ರೀ ವಾದಿರಾಜ jayesha vittala vadiraja stutih. Show all posts

Thursday 5 August 2021

ವಾಜಿವದನಾರ್ಚಕ ಶ್ರೀ ವಾದಿರಾಜ ankita jayesha vittala vadiraja stutih

.. 

ವಾಜಿವದನಾರ್ಚಕ ಶ್ರೀ ವಾದಿರಾಜ ಪ


ರಾಜೀವನಯನ ಶ್ರೀ ಕೃಷ್ಣನಲಿ ಬಿಡು ಎನ್ನ ಅ.ಪ.


ದೇವದೇವೇಶನ ಪರಮ ಒಲುಮೆಗೆ ಪಾತ್ರ

ಪಾವನ್ನತಮಚರಿಯ ಪತಿತಪಾಲ

ಸಾವಧಾನದಿ ಎನ್ನ ಆದಿರೋಗವನಳಿದು

ಕೇವಲ ಸದ್ಭಕ್ತಿ ಶೀಲನ ಮಾಡಯ್ಯ 1


ಭಾರತೀಪತಿ ಪದವನೈದುವ ಮಹಾತ್ಮ

ಮಾರಾರಿಸುರ ಪೂಜ್ಯ ಕರುಣಿಸಿ ಕಾಯೊ

ಸಾರಿದೆನು ತವ ಚರಣ ಸರಸಿಜಯುಗ್ಮಗಳ

ದೂರ ಮಾಡದೆ ಹರಿಯ ಕರುಣಪಾತ್ರನ ಮಾಡು 2


ಪರಮ ಭಾಗವತ ಶಿರೋರತುನರಿಂದರ್ಚಿತನೆ

ಶಿರಿ ವೇಣುಗೋಪಾಲ ವೇದ ವೇದ್ಯ

ಜಯೇಶವಿಠಲನ ಮನದಲ್ಲಿ ಬಿಡದಿಪ್ಪ

ಪರಮಕೃಪೆ ಬೇಡುವೆನು ಕರುಣಾಬ್ಧಿ ಕೃಪೆ ಮಾಡು 3

***