Showing posts with label ಶ್ರೀರಘುದಾಂತರ ಚಾರುಚರಣಗಳು varadesha vittala raghudanta teertha stutih. Show all posts
Showing posts with label ಶ್ರೀರಘುದಾಂತರ ಚಾರುಚರಣಗಳು varadesha vittala raghudanta teertha stutih. Show all posts

Sunday 1 August 2021

ಶ್ರೀರಘುದಾಂತರ ಚಾರುಚರಣಗಳು ankita varadesha vittala raghudanta teertha stutih

 ..

kruti by ವರದೇಶ ವಿಠಲರು varadesha vittala dasaru


ಶ್ರೀ ರಘುದಾಂತರ ಚಾರುಚರಣಗಳು

ಸೇವಿಪರಘಗಳನು

ದೊರಗೈಸಿ ಕೃತಕೃತ್ಯನಾದೆನಾನು

ಭವಭಯವೆನಗೇನು ಪ


ಹೇಸಿಭವದಿ ಸುಖಲೇಶಕಾಣದಿರಲು

ಬೇಸರವಾಗಲು ದೇಶ ದೇಶದೋಳು ಬರುಪರಿಯರಿತಿರುಗಿ

ಮನದಲಿ ನಾ ಮರುಗಿ ಏಸುಯಾತ್ರೆಗಳ

ಚರಿಸಿ ತೋಷಬಡದೆ

ಸಂಚರಿಸುತ ನಡೆದೆ ಶ್ರೀಶನನುಗ್ರಹದಿವರಡಿಗಳ

ಪಡೆದೆ ಭವ ಬಂಧ ಕಡಿದೆ 1


ಹೀನಜನರ ಸಂಸರ್ಗದೋಷವನು ಕಲಿಮಲ ಕಲುಷವನು

ಕಾನನ ತೃಣವನು ಅನಳದಹಿಸುವಂತೆ

ದಹಿಪವು ಬಿಡು ಭ್ರಾಂತಿ

ನಾನಾತೀರ್ಥ ಕ್ಷೇತ್ರ ಯಾತ್ರೆಫಲವು ಒದಗಿಸಿಕೊಡುತಿಹವು

ಜ್ಞಾನಭಕುತಿವೈರಾಗ್ಯ ಕೊಡುತಲಿಹವು

ಗುರುಗಳ ಪದಯುಗವು 2


ಗುರುಪದರಜದ ಮಹಿಮೆಯ ಪರಿಮಿತವು ವರ್ಣಿಸಲಸದಳವು

ಶಿರದಿ ಧರಿಸೆಸಾರಿಸಕುಲಪಾವನವು ಎನಿಪುದು ನಿಶ್ಚಯವು

ಶರೀರಕೆ ಲೇಪಿಸೆ ಸಕಲವ್ಯಾಧಿ ಭಯವು ಪರಿಹರವಾಗುವವು

ನಿರುತಸೇವಿಸೆ ಮುಕುತಿಯೆ ಕರಗತವು ಅಹುದು ಶಾಶ್ವತವು 3


ಗುರುಪದಪೊಂದದೆ ಹರಿ ಕರುಣಿಸನೆಂದು

ತಿಳಿ ಮನಸಿಗೆ ತಂದು

ಹರಿಮುನಿದರು ಗರುಪೊರೆಯಲು ಸಮರ್ಥ

ಈ ನುಡಿ ಸಿದ್ಧಾಂತ

ಹರಿಯಂದದಿ ಗುರುಶರಣರ ಎಡೆಬಿಡದೆ

ಕರುಣಿಪ ಕೈಬಿಡದೆ

ಗುರುಚರಣಾಶ್ರಯಿಸಲು ಹರಿವಲಿಯುವನು

ಮನದಲಿ ಪೊಳೆಯುವನು 4


ನೇಮದಿ ಗುರುಪದ ಭಜಿಸಲು ಸಂಪದವು

ಸಂತತ ಲಭಿಸುವವು

ರಾಮನ ಪದಯುಗ್ಮಗಳಲಿ ಸದ್ರತಿಯು

ಪರಿಶುದ್ಧ ಭಕುತಿಯು

ತಾ ಮುದದಲಿ ವರದೇಶವಿಠಲಕೊಡುವ

ಬಡದಿರು ಸಂಶಯವ

ಪಾಮರ ನರಗುರು ಪದ ನಂಬದೆ ಕೆಡುವ

ಬಹುದುಃಖವ ಬಡುವ5

***