Showing posts with label ತಾರಕ್ಕ ಬಿಂದಿಗೆ ನಾ ನೀರಿಗೆ ಹೋಗುವೆ purandara vittala TAARAKKA BINDIGE NA NEERIGE HOGUVE ಮುಂಡಿಗೆ mundige. Show all posts
Showing posts with label ತಾರಕ್ಕ ಬಿಂದಿಗೆ ನಾ ನೀರಿಗೆ ಹೋಗುವೆ purandara vittala TAARAKKA BINDIGE NA NEERIGE HOGUVE ಮುಂಡಿಗೆ mundige. Show all posts

Sunday 19 December 2021

ತಾರಕ್ಕ ಬಿಂದಿಗೆ ನಾ ನೀರಿಗೆ ಹೋಗುವೆ purandara vittala TAARAKKA BINDIGE NA NEERIGE HOGUVE ಮುಂಡಿಗೆ mundige






ತಾರಕ್ಕ ಬಿಂದಿಗೆ ನಾ ನೀರಿಗೆ ಹೋಗುವೆ ತಾರೇ ಬಿಂದಿಗೆಯ     ||ಪ||

ಬಿಂದಿಗೆ ಒಡೆದರೆ ಒಂದೇ ಕಾಸು ತಾರೇ ಬಿಂದಿಗೆಯ               ||ಅ.ಪ||

ರಾಮನಾಮವೆಂಬ ರಸವುಳ್ಳ ನೀರಿಗೆ ತಾರೇ ಬಿಂದಿಗೆಯ
ಕಾಮಿನಿಯರ ಕೂಡೆ ಏಕಾಂತವಾಡೆನು ತಾರೇ ಬಿಂದಿಗೆಯ      ||೧||

ಗೋವಿಂದ ನೀರಿಗೆ ಗುಣವುಳ್ಳ ನೀರಿಗೆ ತಾರೇ ಬಿಂದಿಗೆಯ
ಆವಾವ ಪರಿಯಲ್ಲಿ ಅಮೃತದ ನೀರಿಗೆ ತಾರೇ ಬಿಂದಿಗೆಯ        ||೨||

ಬಿಂದುಮಾಧವನ ಘಟ್ಟಕ್ಕೆ ಹೋಗುವ ತಾರೇ ಬಿಂದಿಗೆಯ ಪು
ರಂದರ ವಿಠಲಗೆ ಅಭಿಷೇಕ ಮಾಡುವ ತಾರೇ ಬಿಂದಿಗೆಯ        ||೩||
***

ರಾಗ : ಸೌರಾಷ್ಟ್ರ  ತಾಳ : ಛಾಪು (raga tala may differ in audio)

pallavi

tArakka bindige nA nIrighOguve tArE bindigeye bindige oDedare ondE kAsu tArE bindigeye

caraNam 1

rAma nAmavembo rasavuLLa nIrige tArE bindigeye kAminiyara kUDe EkAntavADEnu tArE bindigeye

caraNam 2

gOvinda embo guNavuLLa nIrige tArE bindigeye AvAva pariyali amrtada pAnake tArE bindigeye

caraNam 3

bindu mAdhavana ghaTTakke hOguve tArE bindigeye purandara viTTalage abhiSEka mADuve tArE bindigeye
***


 
Tarakka bindige na nirige hoguve tare bindigeya ||pa||

Bindige odedare omde kasu tare bindigeya ||a.pa||

Ramanamavemba rasavulla nirige tare bindigeya
Kaminiyara kude ekamtavadenu tare bindigeya ||1||

Govimda nirige gunavulla nirige tare bindigeya
Avava pariyalli amrutada nirige tare bindigeya ||2||

Bindumadhavana gattakke hoguva tare bindigeya pu
Randara vithalage abisheka maduva tare bindigeya ||3||

Saranu benakane kanakarupane kamini sangadurane
Saranu sambana priti putrane saranu janarige mitrane ||pa||

Ekadantane lokakyatane ekavakya pravinane
Ekavimsati patrapujitaneka vigna vinayaka ||1||

Lambakarnane nasikadharane gambiryayuta gunasarane
Kambukandhara imdumaulija chandanacharcitangane ||2||

Chaturbahu charana todalane chatura Ayudha dharane
Matiyavantane malina jalitane atiya madhuraharane ||3||

Vakratundane mahakayane arkakoti pradipane
Chakradhara harabrahmapujita rakta vastradharane ||4||

Mushikasana seshabushana asesha vignavinayaka
Dasa purandaraviththalesana isagunagala pogaluve ||5||
***

pallavi

tArakka bindige nA nIrighOguve tArE bindigeye bindige oDedare ondE kAsu tArE bindigeye

caraNam 1

rAma nAmavembo rasavuLLa nIrige tArE bindigeye kAminiyara kUDe EkAntavADEnu tArE bindigeye

caraNam 2

gOvinda embo guNavuLLa nIrige tArE bindigeye AvAva pariyali amrtada pAnake tArE bindigeye

caraNam 3

bindu mAdhavana ghaTTakke hOguve tArE bindigeye purandara viTTalage abhiSEka mADuve tArE bindigeye
***

ತನ್ನ ಕಾಲದಲ್ಲೇ ನವಕೋಟಿ ನಾರಾಯಣನೆನಿಸಿದ್ದ ಎಂಜಲು ಕೈಯಲ್ಲಿ ಕಾಗೆಯನ್ನೂ ಹೊಡೆಯದಷ್ಟು ಜಿಪುಣಾಗ್ರೇಸರನ ಕಣ್ಣು, ಪತ್ನಿಯ ಕಾರಣದಿಂದ ತೆರೆದಾಕ್ಷಣಕ್ಕೆ ಎಲ್ಲವನ್ನೂ ದಾನ ಮಾಡಿ ದಂಡಿಗೆ ಬೆತ್ತ ಜೋಳಿಗೆ ಹಿಡಿದ ಶೀನಪ್ಪ ನಾಯಕ, ಪುರಂದರ ವಿಟ್ಠಲ ದಾಸನಾಗಿ, ಪುರಂದರದಾಸನಾಗಿಬಿಟ್ಟ. ಲಕ್ಷಾಂತರ ಕೀರ್ತನೆಗಳು, ಉಗಾಭೋಗಗಳು, ಸುಳಾದಿಗಳಲ್ಲದೆ ಮುಂಡಿಗೆಗಳನ್ನು ರಚಿಸಿರುವ ಪುರಂದರದಾಸರ ಕೆಲವು ಮುಂಡಿಗೆಗಳು ಹಾಡುಗಳಾಗಿಯೂ ಅತ್ಯಂತ ಜನಪ್ರಿಯವಾಗಿವೆ. ಅವುಗಳಲ್ಲಿ ಒಂದೆರಡನ್ನು ಅವಲೋಕಿಸೋಣ: ಸರಿಯಾದ ಅರ್ಥ ತಿಳಿಯದಿದ್ದರೂ ಪದ ಚಮತ್ಕಾರದಿಂದ ನಾದವೈಭವದಿಂದ ಎಲ್ಲರನ್ನೂ ಸೆಳೆದಿರುವ ಜನಪ್ರಿಯ ಕೀರ್ತನೆ:

ತಾರಕ್ಕ ಬಿಂದಿಗೆ

ತಾರಕ್ಕ ಬಿಂದಿಗೆ ನಾನೀರಿಗ್ಹೋಗುವೆ | ತಾರೆ ಬಿಂದಿಗೆಯ ಬಿಂದಿಗೆ ಒಡೆದರೆ ಒಂದೇ ಕಾಸು | ತಾರೆ ಬಿಂದಿಗೆಯ ರಾಮನಾಮವೆಂಬ ರಸವುಳ್ಳ ನೀರಿಗೆ | ತಾರೆ ಬಿಂದಿಗೆಯ ಕಾಮಿನಿಯರ ಕೂಡೆ ಏಕಾಂತವಾಡೆನು | ತಾರೆ ಬಿಂದಿಗೆಯ ಗೋವಿಂದನೆಂಬ ಗುಣವುಳ್ಳ ನೀರಿಗೆ | ತಾರೆ ಬಿಂದಿಗೆಯ ಆವಾವ ಪರಿಯಲ್ಲಿ ಅಮೃತದ ಪಾನಕ್ಕೆ | ತಾರೆ ಬಿಂದಿಗೆಯ ಬಿಂದು ಮಾಧವನ ಘಟ್ಟಕ್ಕೆ ಹೋಗುವೆ | ತಾರೆ ಬಿಂದಿಗೆಯ ಪುರಂದರವಿಠಲಗೆ ಅಭಿಷೇಕ ಮಾಡುವೆ | ತಾರೆ ಬಿಂದಿಗೆಯ

ಮನೆಯ ಬಳಕೆಗೆ ನೀರನ್ನು ತರಲು ಕೆರೆಗೋ, ಬಾವಿಗೋ ಹೊಳೆಗೋ ಹೋಗುತ್ತಿರುವವಳು ಬಿಂದಿಗೆಯನ್ನು ತೆಗೆದುಕೊಂಡು ಬಾ ಎಂದು ತನ್ನ ಅಕ್ಕನನ್ನು ಎಂದು ಕರೆಯುತ್ತಿರುವುದೇನೋ ಎಂದು ಮೊದಲ ನೋಟಕ್ಕೆ ಅನ್ನಿಸಿದರೂ ಇದರಲ್ಲಿರುವ ಅರ್ಥ ಬಹಳ ವಿಶೇಷವಾಗಿದೆ. ಈಕೆ ಕರೆಯುತ್ತಿರುವುದಾದರೂ ಯಾವ ಅಕ್ಕನನ್ನು!? ಪ್ರಕೃತಿರೂಪಿಣಿಯಾದ ಮಹಾಲಕ್ಷ್ಮೀ ದೇವಿಯೇ ಈ ಅಕ್ಕ. ಹಲವು ಲಕ್ಷ ಯೋನಿಗಳಲ್ಲಿ ಬಂದು ಸಧ್ಯ ನರ ಶರೀರವನ್ನು ಪಡೆದಿರುವ ಈ ದೇಹವೇ ಬಿಂದಿಗೆ. ಸತ್ತ ಮೇಲೆ ಈ ‘ಬಿಂದಿಗೆ’ ಕೊಳೆತು ನಾರುತ್ತಾ, ಅಂದರೆ ದೇಹ ಬಿದ್ದು ಮರಣವನ್ನಪ್ಪಿದರೆ ಯಾವ ಕೆಲಸಕ್ಕೂ ಬಾರದೆ. ಇದರ ಬೆಲೆ ಒಂದು ಕಾಸೂ ಇರದೆ, ಎಷ್ಟು ಬೇಗ ಸಾಧ್ಯವಾದರೆ ಅಷ್ಟು ಬೇಗ ಸ್ಮಶಾನಕ್ಕೆ ಸಾಗಿಸಿ ವಿಸರ್ಜಿಸಿ, ಅದರ ಅಂತ್ಯಕ್ತಿಯೆ ಮುಗಿಸಿಬಿಡಬೇಕು. ಆದ್ದರಿಂದ ಸತ್ತ ನಂತರ ಯಾವ ಪ್ರಯೋಜನಕ್ಕೂ ಬರದ ಈ ದೇಹ ವೆಂಬ ‘ಬಿಂದಿಗೆ ಒಡೆದರೆ ಒಂದೇ ಕಾಸು. ಈ ಬಿಂದಿಗೆಯೊಳಗೆ ತುಂಬಿಕೊಳ್ಳಬೇಕಾದ ನೀರೇ ‘ನಾರಾಯಣ’ (‘ನಾರ’ ಅಂದರೆ ನೀರು ‘ಅಯನ’ ಅಂದರೆ ವಾಸಸ್ಥಾನ. (‘ಆಪೋ ನಾರಾಃ ಇತಿ ಪ್ರೋಕ್ತಾಃ, ಅಪೋ ವೈ ನರ ಸೂನವಃ, ಅಯನಂ ತಸ್ಯ ತಾಃಪೂರ್ವಂ ತೇನ ನಾರಾಯಣಃ ಸ್ಮತಃ’). ಜಲಧಿಶಯನನಾದ ನಾರಾಯಣ ಭಗವಂತನನ್ನು ಹೃದಯದಲ್ಲಿ ತುಂಬಿಸಿಕೊಂಡು ಭಕ್ತಿಭಾವದಲ್ಲಿ ಶರೀರ ಮನಸ್ಸುಗಳನ್ನು ಮುಳುಗಿಸಿಬಿಡುವುದು ಎಂಬ ಅರ್ಥ. ‘ಕಾಮಿನಿಯರ ಕೂಡೆ ಏಕಾಂತವಾಡೆನು’ ಎನ್ನುವುದನ್ನು ಸ್ತ್ರೀಯರೊಂದಿಗೆ ಕಾಮಕೇಳಿಯಲ್ಲಿ ಸರಸಸಲ್ಲಾಪದಲ್ಲಿ ನಿರತನಾಗುವುದನ್ನು ಎಂಬಷ್ಟೇ ಅರ್ಥಕ್ಕೆ ಸೀಮಿತಗೊಳಿಸದೆ ಇಂದ್ರಿಯಗಳ ಚಾಪಲ್ಯಕ್ಕೆ ಒಳಗಾಗದೆ ಭಗವನ್ನಾಮ ಸಂಕೀರ್ತನೆಯಲ್ಲಿ ಮೈಮರೆಯುವೆ ಎಂಬ ಲಕ್ಷಿತಾರ್ಥ.
‘ಗೋವಿಂದನೆಂಬೊ ಗುಣವುಳ್ಳ ನೀರಿಗೆ………..’ ಆದ್ದರಿಂದ ಪರಮ ಶ್ರೇಷ್ಠವಾದ ಸಾಧನೆಗೆ ಸಾಧನವಾದ ಈ ಮಾನವ ಶರೀರವನ್ನು ಪಡೆದ ಮೇಲೆ ರಸಭರಿತವಾದ ಅಮೃತ ಸದೃಶವಾದ ರಾಮನಾಮವನ್ನು ಈ ದೇಹದ ಕಣಕಣವೂ ಜಪಿಸುವಂತಹ ರೀತಿಯಲ್ಲಿ ತುಂಬಿಕೊಳ್ಳಬೇಕು. ‘ಗೋವಿಂದೇತಿ ಸದಾ ಸ್ನಾನಂ, ಗೋವಿಂದೇತಿ ಸದಾ ಜಪಂ, ಗೋವಿಂದೇತಿ ಸದಾ ಧ್ಯಾನಂ, ಸದಾ ಗೋವಿಂದ ಕೀರ್ತನಂ.’ ಹೀಗೆ ಮುಂಜಾವಿನಿಂದ ಎಲ್ಲ ಕಾರ್ಯಗಳಲ್ಲೂ ಎಲ್ಲಾ ಸಂದರ್ಭದಲ್ಲೂ ಅಜಪಾಮಂತ್ರದಂತೆ ಗೋವಿಂದ ನಾಮ ನಮ್ಮ ಕಣಕಣದಲ್ಲೂ ತುಂಬಿರಬೇಕು. ‘ಬಿಂದು ಮಾಧವನ ಘಟ್ಟಕ್ಕೆ ಹೋಗುವೆ’’ ಪರಮ ಪವಿತ್ರವಾದ ಮೋಕ್ಷದಾಯಕವಾದ ಸ್ನಾನವನ್ನು ಮಾಡಲು ಕಾಶಿಯಲ್ಲಿರುವ ಬಿಂದು ಮಾಧವನ ಘಟ್ಟಕ್ಕೆ ಹೋಗಬೇಕು, ಅಲ್ಲಿ ತ್ರಿಲೋಕಪಾವನೆಯಾದ ಗಂಗೆಯಲ್ಲಿ ಮಿಂದು, ಬಿಂದುಮಾಧವನ ದರ್ಶನವನ್ನು ಪಡೆದು, ಕರ್ಮವೆಂಬ ಅಮಲ ಜಲದಿಂದ ಅವನಿಗೆ ಅಭಿಷೇಕ ಮಾಡುವೆ. ಮಾಡಬೇಕು. ಇಂಥಹ ವಿಸ್ಮಯಕರವಾದ ಮೋಕ್ಷಸಾಧನೆಗೆ ನೆರವಾಗುವ ಸತ್ಕರ್ಮಸಾಧನೆಗೆ ನೆರವಾಗುವ ಶರೀರವನ್ನು ನೀಡೆಂದು ಲಕ್ಷ್ಮೀದೇವಿಯನ್ನು ಬೇಡಿಕೊಳ್ಳುವುದೇ ಅತ್ಯಂತ ಜನಪ್ರಿಯವಾದ ಈ ಕೀರ್ತನೆಯು ಗರ್ಭೀಕರಿಸಿಕೊಂಡಿರುವ ಅರ್ಥ.
- ರತ್ನಾ ಮೂರ್ತಿ
***