Showing posts with label ನಿನ್ನ ಅರುಸುತನಕ್ಕೇನೆಂಬೆನೊ ವೆಂಕಟೇಶಾ ಘನ್ನಗಿರಿಯ vijaya vittala. Show all posts
Showing posts with label ನಿನ್ನ ಅರುಸುತನಕ್ಕೇನೆಂಬೆನೊ ವೆಂಕಟೇಶಾ ಘನ್ನಗಿರಿಯ vijaya vittala. Show all posts

Wednesday 16 October 2019

ನಿನ್ನ ಅರುಸುತನಕ್ಕೇನೆಂಬೆನೊ ವೆಂಕಟೇಶಾ ಘನ್ನಗಿರಿಯ ankita vijaya vittala

ವಿಜಯದಾಸ
ನಿನ್ನ ಅರುಸುತನಕ್ಕೇನೆಂಬೆನೊ ವೆಂಕಟೇಶಾ
ಘನ್ನಗಿರಿಯ ವಾಸ ಕಮಲಾಸನ ಜನಕ ತಿರುಮಲೇಶಾ ಪ

ಹರುವ ಸರ್ಪಯಿರುವ ಚೋರ
ಶರಧಿ ಉರೆವ ಕಿಚ್ಚು
ಕರೆವ ಮೃತ್ಯು ಸುರಿವ ಮಳೆ ಬಿರುವನೆಲ್ಲ
ಹೊಡೆವ ದೈತ್ಯಾ ತೊರೆವ ಸನ್ನ್ಯಾವ
ಮೇರೆ ತಪ್ಪಿ ಭರದಿ ತನಗೆ ಇದಿರು
ಬಂದವ ಕಾಣುತತಿ ಹರಿಯ
ನಾಮ ಮುಟ್ಟುವ ದೇವ ಶ್ರೀನಿವಾಸಾ1

ಸೃಷ್ಟಿ ಜನರಿಗೊಂದು ಆಳು
ಕೊಟ್ಟು ವೇಗದಿಂದ ಕರಿಯ
ಲಟ್ಟಿದವರ ಕಾಣೆನಯ್ಯಾ
ಎಷ್ಟೆಷ್ಟು ದೂರದಿಂದಲಿ
ಕಟ್ಟಿಕೊಂಡು ಹೊನ್ನು ಹಣಗಳ ತಮಗೆ ತಾನೆ
ಅಟ್ಟಹಾಸದಿಂದ ಮಂಗಳವ ಪಾಡಿ ಪೊರ
ಮಟ್ಟ ಒಪ್ಪ ತಿರುವೆಂಗಳಾ2

ಹದಿನೆಂಟು ಜಾತಿಯವರು
ಒದಗಿ ಮುದದಿಂದ ಕುಣಿದು
ಪದೋಪದಿಗೆ ಹಾಡಿ ಪಾಡುತ
ಹದುಳವಾದ ಪಂಚವಾದ್ಯ
ಎದುರುನಿಂದು ಧ್ವನಿಯ ಮಾಡುತಾ
ದಾಸರೆಂಬೊ ಅಟ್ಟಹಾಸದ ಮಾತು ನುಡಿಯುತ್ತ
ನಿತ್ಯ ನಿನ್ನ ಮದುವೆಯೆಂದು ಸುಖವು ಸುರಿಯುತ್ತಾ 3

ಎಲ್ಲರಿಲ್ಲಿಗೆ ಬಂದರೇನು ಯಿಲ್ಲ ಪು
ಣ್ಯಲೇಶ ಮಾತ್ರ ಸಲ್ಲದಯ್ಯಾ ಮುಕ್ತಿಗವರು
ಇಲ್ಲೆ ಸುಖವು ಬಟ್ಟು ಕಡಿಗೆ
ಎಲ್ಲೆಲ್ಲಿ ಜನಿಸಿ ಬಹು ಭವದ
ಪಲ್ಲಡಿಯೊಳಗೆ ಜನಿಸಿ ಜ್ಞಾನ
ವಿಲ್ಲದೆ ಸಲ್ಲುವರು ದುರಿತವ ವಹಿಸಿ 4

ಮನುಜರೆಣಿಕೆ ಏನು ಮತ್ತೆ
ವನಜ ಸಂಭವ ಈಶ ಮುಖ್ಯ
ಅನಿಮಿಷರೆಲ್ಲ ಬಂದು ಭಯದಿ
ಮನಸಿನಲಿ ನಿನ್ನ ಅರಸುತನದ ಶೌರ್ಯ
ಮಣಿದು ನಮಸ್ಕರಿಸುತಾ ವಾಲ್ಗೈಸುತಾ
ಹೊಣಿಯೊ ವಿಜಯವಿಠ್ಠಲ ಎನುತಾ 5
********