Showing posts with label ಸೇರಿದೆನೋ ಸೇರಿದೆನೋ ಜಗದೀಶನ ನರಕಜನ್ಮದ shree krishna SERIDENO SERIDENOJ AGADEESHANA NARAKA JANMADA. Show all posts
Showing posts with label ಸೇರಿದೆನೋ ಸೇರಿದೆನೋ ಜಗದೀಶನ ನರಕಜನ್ಮದ shree krishna SERIDENO SERIDENOJ AGADEESHANA NARAKA JANMADA. Show all posts

Friday 20 December 2019

ಸೇರಿದೆನೋ ಸೇರಿದೆನೋ ಜಗದೀಶನ ನರಕಜನ್ಮದ ankita shree krishna SERIDENO SERIDENOJ AGADEESHANA NARAKA JANMADA

Audio by Mrs. Nandini Sripad


ಶ್ರೀ ವ್ಯಾಸರಾಜರ ಕೃತಿ 

 ರಾಗ ತಿಲಂಗ್        ಖಂಡಛಾಪುತಾಳ 

ಸೇರಿದೆನೋ ಸೇರಿದೆನೋ ಜಗದೀಶನ ॥ ಪ ॥
ನರಕಜನ್ಮದ ಭಯವು ಎನಗೆ ಇನಿತಿಲ್ಲ ॥ ಅ ಪ ॥

ನೇತ್ರಗಳು ಕೃಷ್ಣನ ಮೂರ್ತಿ ನೋಡುತಲಿವೆ ।
ಶ್ರೋತ್ರಗಳು ಹರಿಕಥೆಯ ಕೇಳುತಲಿವೆ ॥
ರಾತ್ರಿ ಹಗಲು ಎನ್ನ ಮನಸು ಶ್ರೀರಂಗನಲ್ಲಿ ।
ಪಾತ್ರವಾಡುತಿದೆನ್ನ ಗಾತ್ರ ಕೃಷ್ಣನ ಮುಂದೆ ॥ 1 ॥

ಹಸ್ತಗಳು ಮಂಟಪ ಶುದ್ಧಿಯನು ಮಾಡುತಿವೆ ।
ಮಸ್ತಕವು ಹರಿಚರಣಕೆರಗುತಿದೆಕೋ ॥
ವಿಸ್ತಾರವಾದ ಪ್ರದಕ್ಷಿಣೆಯ ಮಾಡುತಿದೆ ।
ಕಸ್ತೂರಿ ತುಳಸಿಯನು ಮೂಗು ಆಘ್ರಾಣಿಸುತಿದೆ ॥ 2 ॥

ಹರಿನಾಮ ಸ್ಮರಣೆಯನು ನುಡಿಯುತಿದೆ ಎನ್ನ ಜಿಹ್ವೆ ।
ಹರಿಭಕುತಿ ಸುಧೆಯ ಪಾನಗಳಿಂದಲಿ ॥
ಹರಿ ಪ್ರೀತಿಯಾಗಿದೆ ನೋಡಿದರೆನ್ನ ದೇಹ ।
 ಸಿರಿಕೃಷ್ಣರಾಯನ್ನ ಮನಮಂದಿರದಿ ಕಂಡೆ ॥ 3 ॥
**********