Showing posts with label ಯಾತರ ಜನುಮಾ ಶಿರಿನಾಥನ ವಲುಮೆಗೆ ದೂರಾದ gurumahipati YAATARA JANUMA SHIRINATHANA OLUMEGE DOORAADA. Show all posts
Showing posts with label ಯಾತರ ಜನುಮಾ ಶಿರಿನಾಥನ ವಲುಮೆಗೆ ದೂರಾದ gurumahipati YAATARA JANUMA SHIRINATHANA OLUMEGE DOORAADA. Show all posts

Sunday 5 December 2021

ಯಾತರ ಜನುಮಾ ಶಿರಿನಾಥನ ವಲುಮೆಗೆ ದೂರಾದ ankita gurumahipati YAATARA JANUMA SHIRINATHANA OLUMEGE DOORAADA


 

ಕಾಖಂಡಕಿ ಶ್ರೀ ಕೃಷ್ಣದಾಸರು

ಯಾತರ | ಜನುಮಾ | ಶಿರಿನಾಥನ ವಲುಮೆಗೆ ದೂರಾದ ನರನಾ ಪ 


ಉಂಡುಂಡು ವರಗುತ ಕಂಡಲ್ಲಿ ತಿರುಗುತ | ಭಂಡ ಮಾತುಗಳಾಡಿ ದಿನನೂಕುತಾ | ಮಂಡಲೇಶನ ಭಕ್ತಿ ಮಂಡಿಸಿ ಮನದೊಳು | ಖಂಡ ವಿಷಯದಾಶೆ ಗಂಡಲುವವನಾ 1 

ಸ್ನಾನ ಸಂಧ್ಯಾನಿಲ್ಲಾ ಧ್ಯಾನ ಮೌನಗಳಿಲ್ಲಾ | ಭವ ಕಾನನವನು ಸೇರಿ | ಶ್ವಾನ ಸೂಕರನಂತೆ ಬಾಳುತಲಿಹನಾ 2 

ಹಿಂದಿನ ಪುಣ್ಯದೀ ಬಂದದೀ ನರದೇಹ | ಮುಂದ್ಯಾವ ಗತಿಯೆಂಬ ಬೆಜ್ಜರದೀ | ತಂದೆ ಮಹಿಪತಿ ನಂದನ ಪ್ರಭು ಗೋ | ವಿಂದ ಮುಕ್ಕುಂದೆಂಬ ನಾಮವ ನೆನಿಯದೆ 3

***