Showing posts with label ಕವಿವರರ ಕವನದಲಿ ಕವಿ ಕವಿದು ಪೊಳೆವ jayesha vittala. Show all posts
Showing posts with label ಕವಿವರರ ಕವನದಲಿ ಕವಿ ಕವಿದು ಪೊಳೆವ jayesha vittala. Show all posts

Thursday 5 August 2021

ಕವಿವರರ ಕವನದಲಿ ಕವಿ ಕವಿದು ಪೊಳೆವ ankita jayesha vittala

  ..

ಕವಿವರರ ಕವನದಲಿ ಕವಿ ಕವಿದು ಪೊಳೆವ

ಭುವನಪಾವನ ಚರಿತ ಇಂದೀವರಾಕ್ಷ ಪ


ತವಪೂರ್ಣ ನಿಜ ಒಲಿಮೆ ಪ್ರಭುಪೂರ್ಣ ಕವನದಲಿ

ನವನವದಿ ತೋರಿದೆಯೊ ಮೋದ ಕರಿವರದ

ಭವಭಂಗ ಪರಿಹಾರ ಕವನ ವೋದಿದ ಮಾತ್ರ

ಧವಳ ಕೀರುತಿ ಬೆಳುದಿಂಗಳನು ಮೀರಿಹುದೊ 1


ತವಪೂರ್ಣ ಗುಣ ಕ್ರಿಯೆ ರೂಪ ಘನ ಭಾವಗಳು

ಲವಲವಿಕೆ ಎಮ್ಮ ಚೇತನಕೆ ಕೊಟ್ಟು

ಭವಭೀತಿಗೆ ಭೀತಿ ತಂದೊಡ್ಡುವುದೊ ಕಮಲೇಶ

ಸವಿದುಣ್ಣುವಾ ಜನಕೆ ಜಡದಲ್ಲೂ ನೀ ಬರುವೆ 2


ಶ್ರವಣ ಮಾತ್ರಕೆ ಮೈಮರೆಸುವುದು ಮಹಸಿರಿಯು

ಶಿವ ಶುಕ ಪಿತ ಸವಿದ ರುಚಿಯು ಇಹುದು

ಪವಮಾನ ಕೃಷ್ಣಾರ್ಯ ರಾಮಾರ್ಯರತಿ ವಲುಮೆ |

ಶ್ರವಿಸುವುದು ಪಠಿಪರನು ಭಕ್ತಿಮತ್ತರ ಮಾಡಿ 3


ಕವಲುಮತಿಯಲಿ ಮುಳುಗಿ ಚಲಿಸದಿರು ಇದರಿಂದ

ಭವಮೂಲಕುನ್ಮೂಲ ಇದರ ಮಹಿವi

ಅವಲಿಯನು ತಿಂದವನು ಅಗಲಿರದೆ ಒಡನಿಹನು

ಜವನ ದೂತರು ತಲೆಮಣಿದು ಓಡುವರೊ 4

ತತ್ವಾಭಿಮಾನಿಗಳಿಗಾಹಾರವಿದು ಸತ್ಯ

ತತ್ವಾರ್ಥ ಬಲು ಸುಲಭದಲ್ಲೆ ಮನಕವಗಾಹ್ಯ

ಸತ್ಕøತಿಯ ಮಾಡಿ ಚಿತ್ಸುಖವ ಉಣು ನಿತ್ಯ

ವಾತಾತ್ಮ ಗುರು ಶ್ರೀ ಜಯೇಶವಿಠಲನ ನೋಡು 5

***