Showing posts with label ಯುಗ ಯುಗದಿಂದಲಿ ಬಗೆ ಬಗೆಯಿಂದಲಿ madhwesha krishna. Show all posts
Showing posts with label ಯುಗ ಯುಗದಿಂದಲಿ ಬಗೆ ಬಗೆಯಿಂದಲಿ madhwesha krishna. Show all posts

Friday 27 December 2019

ಯುಗ ಯುಗದಿಂದಲಿ ಬಗೆ ಬಗೆಯಿಂದಲಿ ankita madhwesha krishna

ವಾಮನಾವತಾರ

ಯುಗ ಯುಗದಿಂದಲಿ ಬಗೆ ಬಗೆಯಿಂದಲಿ
ಜಗವನೆ ಪೊರೆಯುವ ದೇವನು
ಖಗವಾಹನನೆ ವಟು ವಾಮನನಾಗಿ
ಭುವಿಯೊಳು ಜನಿಸಿದನು ಶ್ರೀಶನು||ಪಲ್ಲ||

ಅದಿತಿ ಕಶ್ಶಪರ ಪ್ರೀತಿಯ ಕುವರ
ಜಗವನುಧ್ಧರಿಸುವ ಮಹಾಚತುರ
ಉಪನಯನವನೆ ಹಿತದಿಂದ ಮಾಡಲು
ವಶಿಷ್ಟ ಮೊದಲಾದ ಋಷಿಗಳು ಸೇರಿ||೧||

ವಾಮನನೆಂದು ಹೆಸರನೆ ಇಡುತ
ಜಾತಕರ್ಮವ ಮಾಡಿದರು
ಕೋಟಿ ಗೋದಾನವ ಮಾಡಿದ ಕಶ್ಶಪ
ಕೃಷ್ಣಾರ್ಪಣ ವೆಂದೆನುತ||೨||

ಉಪನಯನವನೆ ಕಶ್ಶಪರು ಮಾಡಲು
ಸರಸ್ವತಿ ಭಾರತಿ ಮುದದಿಂದ
ಉಂಗುರವನೆ ಭಿಕ್ಷವನಿಟ್ಟು
ಆರುತಿನೆತ್ತಿ ಹರುಷದಲಿ||೩||

ದಂಡ ಕಮಂಡಲ ಯಜ್ಞೋಪವೀತವ
ಮುಂಜಿ ಕೃಷ್ಣಾಂಜನ ಧರಿಸಿ
ಅಂದುಗೆ ಕಿರುಗೆಜ್ಜೆ ಘಲ್ಲು ಘಿಲ್ಲೆನ್ನುತ್ತ
ಬಂದ ವಾಮನ ಬಲಿರಾಯನ ಸಭೆಗೆ||೪||

ಯಜ್ಞವೇದಿಕೆ ಏರುತಲಿರಲು
ವಟು ವಾಮನನ ಮುಖದಲ್ಲಿ
ಕೋಟಿ ಸೂರ್ಯ ಪ್ರಭೆ ಮಿಂಚು ಹೊಳೆಯಿತು
ಸುರರು ಪುಷ್ಪದ ವೃಷ್ಟಿ ಕರೆದರಲ್ಲಿ||೫||

ತಾಳ ಮದ್ದಲೆ ಭೇರಿ ಢಮರುಗಳಿಂದ
ಊರ್ವಶಿ ರಂಭೆರ ನಾಟ್ಯಗಳಿಂದ
ಚತುರ್ಮುಖ ಬ್ರಹ್ಮ ಸ್ತೋತ್ರ ಮಾಡಿ
ಪರಮ ಪುರುಷನ ನೋಡಿ ಬೆರಗಾಗಿ||೬||

ದೇವನ ನೋಡಿ ಬಲಿರಾಯ ಬಂದು
ಮುತ್ತಿನ ಮಣಿಯನ್ಹಾಕುತಲಿ
ಹಸ್ತವ ಮುಗಿಯುತ ಭಕ್ತಿಯಿಂದಲಿ ಬಂದು
ಎತ್ತಲಿಂದ ಬಂದಿರೆಂದು ಕೇಳುತಲಿ||೭||

ನಿನ್ನ ಕೀರುತಿ ಕೇಳಿ  ಬಂದೆನೊ ಬಲಿರಾಯ
ನಿನ್ನ ತಾತಂದಿರ ಶೌರ್ಯ ಕೇಳಿ 
ಮೂರು ಪಾದ ಭೂಮಿ ದಾನವ ಬೇಡುವೆ
ಕೊಡು ಎಂದನು ವಟು ವಾಮನನು||೮||

ಯಾಚಕ ಇವನಲ್ಲ ಯೋಚನೆ ಮಾಡೆಂದು
ಶುಕ್ರಾಚಾರ್ಯರುಬಂದು ನುಡಿಯುತ್ತಲಿ
ಕೊಟ್ಟ ಮಾತಿಗೆ ತಪ್ಪುನಲ್ಲವೆಂದು
ಪತ್ನಿಗುದುಕ ತರಲು ತಿಳಿಸಿ ದನು||೯||

ಹೊನ್ನಗಿಂಡಿಲಿಉದುಕವ ತಂದಳು
ವಿಂಧ್ಯಾವಳಿ ರಾಜನ ಸಭೆಯಲ್ಲಿ
ಪಾದವನು ತೊಳೆಯೆ ಸುರನದಿ ಹರಿಯಲು
ಧನ್ಯನಾದೆನೆಂದು ಹಿಗ್ಗಿದನು||೧೦||

ತ್ರಿವಿಕ್ರಮರೂಪಾಗಿ ನಿಂತನು ದೇವನು
ಒಂದು ಪಾದದಿ ಭೂಮಂಡಲವ್ಯಾಪಿಸಿ
ಎರಡನೆ ಪಾದದಿ ಗಗನವ ವ್ಯಾಪಿಸಿ
ಮೂರ ನೆ ಪಾದಕೆ ಸ್ಥಳವೆಲ್ಲಿಯೆನಲು||೧೧||

ನೆತ್ತಿಯಲಿಡೆಂದು ಬಲಿರಾಯ ಪ್ರಾರ್ಥಿಸೆ
ಒತ್ತಿದ ಸುತಳ ಲೋಕಕ್ಕೆ ತಾನು
ಭಕ್ತ ವತ್ಸಲ ಸ್ವಾಮಿ ಬಲಿಯ ಬಾಗಿಲು ಕಾಯ್ವ
ಮುಕ್ತಿಯ  ಕೊಟ್ಟ ಬಲಿರಾಗೆ||೧೨||

ನಾಭಿಕಮಲದಿಂದ ಬ್ರಹ್ಮರಾಯನ ಪಡೆದ
ಪಾದದಿ ಪಡೆದ ಭಾಗೀರತಿಯ
ಅಷ್ಠ ಐಶ್ವರ್ಯ ಸಂಪತ್ತು ಕೊಡುವ
ಮಧ್ವೇಶಕೃಷ್ಣ ನ್ನ ನೆನೆ ಮನವೆ||೧೩||
***********